ಮೈಯಾಸರೆಯ ಜೀವ ಗಳಿಗೆಯಿರವಿನದೆನ್ನೆ
ಅರಿಷಟ್ಕತಂತ್ರದಿಂ ನಿತ್ಯತೆಯನು
ಗೆಲುವುದದು ಜನಜನಿಸಿ ಜಡದೊಡನೆ ಸೆಣಸುತ್ತ
ಪ್ರಭುವೆನಿಸಿ ಇಚ್ಛೆಗಳವಡಿಸಿ ಅದನು.
ಜೀವದಾಸರೆ ಚಿತ್ತ; ಅದರೊಡನೆಯಳಿವುಳಿವು;
ದಿವ್ಯಾನುಭೂತಿಗೂ ಮೂಡು ಮುಳುಗು;
ಯಮನಿಯಮಧ್ಯಾನಾದಿ ತಂತ್ರದಿಂ ತನ್ನುಳಿವ
ಸಾಧಿಸುವುದಾತ್ಮವೂ ಜೀವದೊಳಗೂ.
ಧೀಮಂತರುದ್ದೀಪ್ತಚಿತ್ತದುಳಿವನು ಮೆರೆವ ನಾರಣನ ಕರುಣಾಕಟಾಕ್ಷ
ಆವ ರಸಪದಪಥಿಕನಾತ್ಮಕ್ಕೆ ಕೊನರಿಸದು ತಾರ್ಕ್ಷ್ಯಪಕ್ಷ?
*****

















