Home / ಕವನ / ಕವಿತೆ / ಧಾರವಾಡದ ತಾಯಿ

ಧಾರವಾಡದ ತಾಯಿ


ಬಂದಿರುವೆನಿದೊ ಮಾಯಿ ಧಾರವಾಡದ ತಾಯಿ
ಸರ್ವಮಂಗಳೆ ನಿನ್ನ ಭಾಗ್ಯದುಡಿಗೆ;
ಜನುಮ ಜನುಮದ ಬಯಕೆ ತುಂಬಿ ನಿಂದಿಹುದಿಂದು
ಕನಸಿನಲಿ ಕಂಡ ದಿನ ಬಂತು ಕೊನೆಗೆ.


ಕೈಚಾಚಿ ಕರೆದಪ್ಪಿ ಎದೆ ತೆರೆದು ಕುಳಿತಿರಲು
ಜೀವದಲಿ ಜೀವವೇ ಇಳಿಯುತಿಹುದು;
ಎದೆಯ ಬಟ್ಟಲು ತುಂಬಿ ಪ್ರೀತಿ-ಹೊರಸೂಸಿಹುದು
ನಾನು ನೀನೆಂಬುದನೆ ಮರೆಸುತಿಹುದು.


ಬಾಲ್ಯದಿಂದಲೆ ನಿನ್ನ ತೊಡೆಯಲಾಡುವ ಮನಸು
ದಿನದಿನದಿ ಹಂಬಲದಿ ಕಂಡ ಕನಸು
ನಿನ್ನೆದೆಯ ಶ್ರೀಮಂತ ಮೃದುತಲದ ಹಾಸಿನಲಿ
ಮಲಗಿ ನಾ ಹಾಲುಂಡ ದಿನಗಳೇಸು!


ಮರದ ಎಲೆ ಅಲುಗಲೂ ಧೈವ ಕೃಪೆ ಬೇಕಂತೆ
ಇದರಲಂತಹದೇನೊ ಇರಲೆ ಬೇಕು;
ದೈವ ಕರೆದೊಯ್ದತ್ತ ನಾವು ಹೋಗಲೆ ಬೇಕು
ನಂಜಿದ್ದರೂ ಅದನು ಕುಡಿಯಬೇಕು.


ದುಃಖ ಸುಖಗಳ ಎದೆಯ ನೂರು ಹಂಬಲ ತೊರೆದು
ನಿನ್ನ ಉಡಿಯೊಂದನ್ನು ನೆನಿಸಿ ಬಂದೆ;
ನನ್ನ ಕರುಳಿನ ಬಳ್ಳಿಯಲ್ಲಿ ಅರಳಿರುವಂಥ
ಪ್ರೀತಿ ಹೂವೊಂದನ್ನು ಹೊತ್ತು ತಂದೆ.


ನಿನ್ನ ಕಣ್ಣಂಚಿನಲಿ ಮಿಂಚು ಹೊಳೆಯುತಲಿರಲು
ನನ್ನ ಎದೆವನೆಯಲ್ಲಿ ಬೆಳಕ ಬೆಳಕು
ಕರೆದು ಆಶೀರ್ವದಿಸಿ ತಾಯಿ ಬೆಳಗುತಲಿರುವ
ಕಣ್ಣ ಬೆಳಕಿನ ಪುಣ್ಯ ಇಹುದು ಸಾಕು.
*****

Tagged:

Leave a Reply

Your email address will not be published. Required fields are marked *

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...