Home / ಲೇಖನ / ಇತರೆ / ಮುಪ್ಪು

ಮುಪ್ಪು

ಬದುಕೊಂದು ರೋಚಕ ನಾಟಕ, ಮುಪ್ಪು ಅದರ ಕೊನೆಯ ಅಂಕ. ಬಾಲ್ಯ, ಯೌವನ, ಮುಪ್ಪು ಜೀವನದ ಮೂರು ಮುಖ್ಯ ಹಂತಗಳು. ಪ್ರತೀ ಹಂತಗಳೂ ಜೀವನವೆನ್ನುವ ನಾಟಕದ ಪುಟಗಳಲ್ಲಿ ನವರಸಗಳನ್ನು ತುಂಬುತ್ತವೆ. ಬಾಲ್ಯ ಹೆತ್ತವರಿಗೆ ಸೇರಿದ್ದು, ಯೌವನವೂ ನಮ್ಮ ಕೈಯಲ್ಲಿಲ್ಲ. ಅದು ಉದ್ಯೋಗಕ್ಕೆ, ಹೆಂಡತಿಗೆ, ಮಕ್ಕಳಿಗೆ ಸೇರಿದ್ದು, ಮುಪ್ಪು ಮಾತ್ರ ನಮಗೇ ಸೇರಿದ್ದು. ನಮ್ಮದೇ ಆಗುವ ಈ ಕೊನೆಯ ಅಧ್ಯಾಯವನ್ನು ಬರೆಯುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕಿದವರು ಭಾಗ್ಯಶಾಲಿಗಳು.

ಮುಪ್ಪು ಜೀವನದ ಒಂದು ಮಹತ್ತರ ಘಟ್ಟ. ಒಂದು ಪ್ರಬುದ್ಧ ಹಂತವೂ ಹೌದು. ಈ ಹಂತದಲ್ಲಿ ನಮ್ಮನ್ನು ನಾವು ಕಂಡುಕೊಳ್ಳಲು ಬಹಳ ದೊಡ್ಡ ಅವಕಾಶವಿದೆ. ಜೀವನದುದ್ದಕ್ಕೂ ಎಷ್ಟೋ ಕೆಲಸಗಳನ್ನು ಮಾಡಬೇಕೆನ್ನುವ ತುಡಿತಗಳಿದ್ದರೂ ಸಂಸಾರ ಹಾಗೂ ವೃತ್ತಿಜೀವನದ ಒತ್ತಡಗಳು ಎಲ್ಲಾ ಸಮಯವನ್ನು ಕಿತ್ತುಕೊಳ್ಳುತ್ತಿರುವಾಗ ನಮಗೆ ಪ್ರಿಯವಾದ ಕೆಲಸಗಳು, ಹವ್ಯಾಸಗಳು ಪ್ರಾಮುಖ್ಯತೆ ಕಳಕೊಂಡು ಮನದಾಳಕ್ಕೆ ನೂಕಲ್ಪಟ್ಟು ಅವು ಅಲ್ಲಿ ಗೂಡುಕಟ್ಟುತ್ತವೆ. ಹಲವಾರು ಜವಾಬ್ದಾರಿಗಳ ನಿರ್‍ವಹಣೆಯಲ್ಲಿ ಸ್ವಂತಕ್ಕೆ ಸಮಯ ಸಿಗುವುದೇ ಕಡಿಮೆ. ಆದರೆ ನಿವೃತ್ತರಾಗಿ ಮನೆಯಲ್ಲಿ ಕುಳಿತಾಗ ಸಮಯವೆಲ್ಲ ನಮ್ಮದೇ. ಮಾಡಲಾಗದ ಕೆಲಸಗಳನ್ನು ಮಾಡಲು, ಮರೆತು ಹೋಗಿರುವ ಹವ್ಯಾಸಗಳನ್ನು ಬೆಳೆಸಿಕೊಳ್ಳಲು ಇದು ಸಮರ್‍ಪಕವಾದ ಸಮಯ. ಈ ಅವಕಾಶವನ್ನು ಉಪಯೋಗಿಸಿಕೊಂಡು ಬೇಕಾದುದನ್ನು ಮಾಡಿಕೊಂಡು ಮಕ್ಕಳು ದೂರದಲ್ಲಿರುವ ನೋವನ್ನು ಮರೆತು ಜೀವನದಲ್ಲಿ ಸ್ವಲ್ಪ ರಂಗು ತುಂಬಿಕೊಂಡು ಜೀವಿಸುವುದರಲ್ಲಿ ಇಡೀ ಜೀವನದ ಸಫಲತೆ ಇದೆ.

ಮನಸ್ಸಿಗೆ ಮುಪ್ಪು ತಾಗದಿದ್ದರೂ ದೇಹಕ್ಕೆ ಮುಪ್ಪು ಬಂದೇ ಬರುತ್ತದೆ. ಪ್ರಾಯಕ್ಕೆ ತಕ್ಕಂತೆ ಒಂದೊಂದೇ ಖಾಯಿಲೆಗಳು ಕಾಡಿಸಿ ಮುಪ್ಪನ್ನು ಸಾಬೀತು ಪಡಿಸುತ್ತಿರುವಾಗ ಮುಪ್ಪನ್ನು ಮರೆಯುವುದು ಸಾಧ್ಯವಿಲ್ಲ. ಮುಪ್ಪುನ್ನು ಅದರ ಜೊತೆಯಲ್ಲಿ ಬರುವ ಖಾಯಿಲೆಗಳನ್ನು, ಅನಾನುಕೂಲತೆಗಳನ್ನು ಸ್ವಾಭಾವಿಕ ಎನ್ನುವ ಮನೋಭಾವದಿಂದ ಸ್ವೀಕರಿಸಿ ತೃಪ್ತರಾಗಿ ಜೀವಿಸಿದರೆ ಮುಪ್ಪು ಯಾವತ್ತೂ ಶಾಪವಾಗಲಾರದು. ಕಳೆದು ಹೋಗುತ್ತಿರುವ ದೈಹಿಕ ಶಕ್ತಿಗಾಗಿ ಮರುಗದೆ ಮನಸ್ಸಿನ ಹುಮ್ಮಸ್ಸನ್ನು ಕಾಪಾಡಿಕೊಂಡು ನಗುನಗುತ್ತಾ ಬಾಳುವುದನ್ನು ಸಾಧ್ಯ ಮಾಡಿಕೊಂಡರೆ ಮುಪ್ಪು ಕಷ್ಟವೆನಿಸುವುದಿಲ್ಲ. ಮುಪ್ಪಿನೊಡನೆ ನಗುನಗುತ್ತಾ ಜೀವಿಸಲು ಕಲಿಯುವುದರಲ್ಲಿ ಜೀವನದ ನೆಮ್ಮದಿ ಇದೆ.

ಮುಪ್ಪಿನ ಕಾಲದಲ್ಲಿ ಮುಖ್ಯವಾಗಿ ಬೇಕಾಗಿರುವುದು ಸಮಾಧಾನ ಹಾಗೂ ನೆಮ್ಮದಿ. ಚಿಗುರು, ಹೂ, ಕಾಯಿ, ಹಣ್ಣು, ನೆರಳು ಎಲ್ಲವನ್ನೂ ಸ್ವಲ್ಪವೂ ಬೇಸರಿಸದೆ ಕೊಟ್ಟು ಮುಪ್ಪಾದ ಮರ ಎಂದಾದರೂ ಧರೆಗುರುಳದಿದ್ದೀತೇ? ಅದು ಜೀವನದ ಸತ್ಯ.

ಜೀವನದಲ್ಲಿ ಎದುರಾಗುವ ಎಲ್ಲ ಸಿಹಿಕಹಿಗಳನ್ನು ಸಮಾನ ಮಾನಸಿಕ ನೆಲೆಯಿಂದ ಎದುರಿಸಿ ಎಲ್ಲಿಯೂ ನೆಮ್ಮದಿಗೆ ಧಕ್ಕೆ ಬಾರದಂತೆ ಸಮರ್‍ಪಕವಾಗಿ ಬಾಳುವುದು ಒಂದು ಕಲೆ ಹಾಗೂ ದೊಡ್ಡ ಸಾಧನೆ. ಇಪ್ಪತ್ತರಲ್ಲಿ ಐವತ್ತರ ಬುದ್ಧಿವಂತಿಕೆ, ಮೂವತ್ತರಲ್ಲಿ ಎಪ್ಪತ್ತರ, ವಿವೇಚನೆ, ಎಪ್ಪತ್ತರಲ್ಲಿ ಇಪ್ಪತ್ತರ ಹುಮ್ಮಸ್ಸು ಮೈಗೂಡಿಸಿಕೊಂಡಾಗ ಈ ಕಲೆಗಾರಿಕೆ ಯನ್ನು ಜೀವನದುದ್ದಕ್ಕೂ ತೋರಿಸಬಹುದು. ಮುಪ್ಪಿನ ಜತೆಗೆ ಬದುಕಲು ಕಲಿತಾಗ ಜೀವನವೆನ್ನುವ ಸುಂದರ ನಾಟಕದ ಅಥವಾ ಸ್ವಾರಸ್ಯಕರ ಕಾದಂಬರಿಯ ಕೊನೆಯ ಸಾಲುಗಳನ್ನು ತುಂಬಾ ಮೌಲಿಕವಾಗಿ, ಇಡೀ ಕೃತಿಗೆ ಮೆರುಗು ಕೊಡುವ ಹಾಗೆ ಬರೆಯುವುದು ಸಾಧ್ಯವಾಗದೇ?

ಮುಪ್ಪಿನಲ್ಲಿ ಪರಿಪಕ್ವವಾಗಿ ಜೀವಿಸುವುದು ಕೂಡಾ ಒಂದು ಸುಯೋಗ. ಒಂದು ಹಣ್ಣಿನ ಪರಿಪಕ್ವತೆಯ ಸಿಹಿ, ಒಳ್ಳೆಯ ಕಾವ್ಯದ ಸ್ವಾರಸ್ಯವಾದ ಕೊನೆಯ ಸಾಲುಗಳು, ದೀಪ ನಂದುವ ಮೊದಲಿನ ಪ್ರಖರ ಬೆಳಕು, ಸೂರ್‍ಯ ಮುಳುಗುವ ಮೊದಲಿನ ರಂಗು, ಪೂರ್‍ಣ ಚಂದಿರನ ತಂಪಾದ ಬೆಳಕು ಎಲ್ಲವೂ ಜೀವನದ ಕೊನೆಯ ಹಂತದಲ್ಲಿ ಇರುವಂತೆ ನೋಡಿಕೊಂಡರೆ ಮುಪ್ಪಿನ ತೊಡಕುಗಳು, ಸಾವಿನ ಹೆದರಿಕೆ ಯಾವುದೂ ಕಂಗೆಡಿಸಲಾರವು. ಯಾವುದನ್ನೂ ತಲೆಗೆ ಹಚ್ಚಿಕೊಳ್ಳದೆ ಸುತ್ತಲಿನ ಪ್ರಪಂಚವನ್ನು ಅದು ಇದ್ದ ಹಾಗೇ ಒಪ್ಪಿಕೊಂಡು ಯಾವ ಕಟ್ಟ ಭಾವನೆಗಳಿಗೂ ಎಡೆಕೊಡದೆ ಆತ್ಮವಿಶ್ವಾಸದಿಂದ ಜೀವನವನ್ನು ಹಾಗೂ ಸುತ್ತಲಿನವರನ್ನು ಪ್ರೀತಿಸುತ್ತ ಜೀವಿಸಲು ಕಲಿತರೆ ಮುಪ್ಪು ಯಾವತ್ತೂ ಒಂದು ಹೊರೆಯಾಗಿ ಕಾಡುವುದಿಲ್ಲ.

ಇಡೀ ಜೀವನದಲ್ಲಿ ಮುಪ್ಪು ಸಂತಸದಿಂದ ಅನುಭವಿಸಬೇಕಾದ ಹಂತ, ಅದನ್ನು ಮನಸಾರೆ ಅನುಭವಿಸುವುದೆಷ್ಟು ಚಂದ!
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...