Home / ಲೇಖನ / ಇತರೆ / ಎಫ್ ಎಮ್ ರೇಡಿಯೋ ಕತೆ

ಎಫ್ ಎಮ್ ರೇಡಿಯೋ ಕತೆ

ಹೊಸ ಖಾಸಗಿ ಎಫ್ ಎಂ ರೇಡಿಯೋ ವಾಹಿನಿಗಳ ಹರಾಜು ಪ್ರಕ್ರಿಯೆಯ ೪೦ ಸುತ್ತುಗಳು ಈಗಾಗಲೇ ಪೂರ್ಣವಾಗಿದ್ದು ಬೆಂಗಳೂರಿನ ಒಂದು ರೇಡಿಯೊ ಚಾನೆಲ್ ಹರಾಜಿನ ಬಿಡ್ ಮೊತ್ತ ೧೦೫ ಕೋಟಿ ರೂಪಾಯಿ ದಾಖಲಿಸಿರುವುದು…!

ಅಬ್ಬಾ! ಬಿಡ್ ದಾಖಲಿಸಿದ ಎರಡನೆಯ ಮಹಾನಗರವಾಗಿ ಬೆಂಗಳೂರು ಈಗಾಗಲೇ ಹೊರ ಹೊಮ್ಮಿದೆ.

ಖಾಸಗಿ ಎಫ್ ಎಂ ರೇಡಿಯೋ ವಾಹಿನಿಗಳು ಬೆಂಗಳೂರಿನಲ್ಲಿ ಬಲು ಜನಪ್ರಿಯತೆ ಹೆಚ್ಚಿಸಿಕೊಂಡಿರುವುದನ್ನು ಮತ್ತು ಅವುಗಳಿಗಿರುವ ಬಲು ಬೇಡಿಕೆಯನ್ನು ಇದು ಬಿಂಬಿಸಿರುವುದು.

ದಿನಾಂಕ ೦೭-೦೮-೨೦೧೫ ರಂದು ೪೦ ಸುತ್ತುಗಳು ಪೂರ್ಣಗೊಳ್ಳುವುದು. ಇದು ಮೂರನೆಯ ಹಂತದ ಹರಾಜು ಪ್ರತಿಕ್ರಿಯೆಯೆಂದು ಖಚಿತ ಪಡಿಸಿರುವುದು!

ದಿನಾಂಕ ೧೦-೦೮-೨೦೧೫ ರಂದು ೪೧ ನೆಯ ಸುತ್ತು ಹರಾಜು ಪ್ರಕ್ರಿಯೆ ಆರಂಭವಾಗಲಿದೆಯೆಂದು ಸ್ಪಷ್ಟ ಪಡಿಸಿರುವುದು.

ಮೊತ್ತ ಮೊದಲು ಹರಾಜು ಪ್ರಕ್ರಿಯೆಯಲ್ಲಿ ೬೯ ಮಹಾನಗರಗಳಿಗೆ ೧೩೫ ತರಂಗಾಂತರಗಳನ್ನು ಹರಾಜಿಗಿಡಲಾಗಿತ್ತು. ಇದು ಇದುವರೆಗೆ ಒಟ್ಟು ೯೪೬ ಕೋಟಿ ರೂಪಾಯಿ ಬಿಡ್ ದರ ಬಾರಿ ಬಾರಿ ದಾಖಲಾಗಿರುವುದೆಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವಾಲಯವು ಅಂಕಿ ಅಂಶಗಳನ್ನು ಈಗಾಗಲೇ ಬಿಡುಗಡೆಗೊಳಿಸಿದೆ.

ನವ ದಿಲ್ಲಿಯಲ್ಲಿ ವಾಹಿನಿಯ ಬಿಡ್ ಮೌಲ್ಯ ೧೪೪ ಕೋಟಿ ರೂಪಾಯಿಗೆ ಈಗಾಗಲೇ ಏರಿಕೆಯಾಗಿದ್ದು ಇದುವರೆಗೆ ೫೬ ಮಹಾನಗರಗಳಲ್ಲಿ ೮೬ ಚಾನಲ್‌ಗಳ ಬಿಡ್ ಯಶಸ್ವಿಯಾಗಿದೆಯೆಂದು ಖಷಿತಪಡಿಸಿರುವುದು.

ನಮ್ಮ ದೇಶದಲ್ಲಿ ಎಫ್ ಎಮ್ ರೇಡಿಯೊ ವಾಹಿನಿಗಳ ಪ್ರಸಾರವನ್ನು ವಿಸ್ತರಿಸುವ ಸಲುವಾಗಿ ವಾರ್ತಾ ಮತ್ತು ಪ್ರಸಾರ ಖಾತೆಯು ೨೦೧೧ ರಲ್ಲಿ ಮಾರ್ಗದರ್ಶಿಯನ್ನು ಈಗಾಗಲೇ ಹೊರಡಿಸಿತ್ತು. ತದನಂತರ ಟ್ರಾಯ್ ಶಿಫಾರಸ್ಸುನ್ನು ಪಡೆದು ಈಗಿರುವ ಎರಡನೆಯ ಹಂತದ ಪರವಾನಗಿಯನ್ನು ಮೂರನೆಯ ಹಂತಕ್ಕೆ ವಿಸ್ತರಿಸಲು ಅದು ನಿರ್ಧರಿಸಿತ್ತು. ಅದರ ಪ್ರಕಾರ ಈಗ ಎಫ್ ಎಮ್ ಮೂರನೆಯ ಹಂತದ ಹರಾಜು ಪ್ರಕ್ರಿಯೆ ಜರುಗುವುದೆಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವಾಲಯವು ದೃಢ ಪಡಿಸಿದ್ದು ಇರುತ್ತದೆ.

ಮುದ್ದು ಮಕ್ಕಳೆ… ಎಫ್‌ಎಮ್ ರೇಡಿಯೋ ಕತೆ ಕೇಳಿದಿರಲ್ಲ …? ಪ್ರತಿಯೊಂದು ಮನೋರಂಜನೆಯ ಚಾನಲ್ ಹಿಂದೆ, ಒಂದು ಕತೆಯಿರುವುದು ಅದನ್ನು ಆಲಿಸಿದಾಗಲೇ ಅದರ ಹಿನ್ನಲೆ ತಿಳಿಯುವುದು ಅಲ್ಲವೇ?
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...