Home / ಲೇಖನ / ಇತರೆ / ಎಫ್ ಎಮ್ ರೇಡಿಯೋ ಕತೆ

ಎಫ್ ಎಮ್ ರೇಡಿಯೋ ಕತೆ

ಹೊಸ ಖಾಸಗಿ ಎಫ್ ಎಂ ರೇಡಿಯೋ ವಾಹಿನಿಗಳ ಹರಾಜು ಪ್ರಕ್ರಿಯೆಯ ೪೦ ಸುತ್ತುಗಳು ಈಗಾಗಲೇ ಪೂರ್ಣವಾಗಿದ್ದು ಬೆಂಗಳೂರಿನ ಒಂದು ರೇಡಿಯೊ ಚಾನೆಲ್ ಹರಾಜಿನ ಬಿಡ್ ಮೊತ್ತ ೧೦೫ ಕೋಟಿ ರೂಪಾಯಿ ದಾಖಲಿಸಿರುವುದು…!

ಅಬ್ಬಾ! ಬಿಡ್ ದಾಖಲಿಸಿದ ಎರಡನೆಯ ಮಹಾನಗರವಾಗಿ ಬೆಂಗಳೂರು ಈಗಾಗಲೇ ಹೊರ ಹೊಮ್ಮಿದೆ.

ಖಾಸಗಿ ಎಫ್ ಎಂ ರೇಡಿಯೋ ವಾಹಿನಿಗಳು ಬೆಂಗಳೂರಿನಲ್ಲಿ ಬಲು ಜನಪ್ರಿಯತೆ ಹೆಚ್ಚಿಸಿಕೊಂಡಿರುವುದನ್ನು ಮತ್ತು ಅವುಗಳಿಗಿರುವ ಬಲು ಬೇಡಿಕೆಯನ್ನು ಇದು ಬಿಂಬಿಸಿರುವುದು.

ದಿನಾಂಕ ೦೭-೦೮-೨೦೧೫ ರಂದು ೪೦ ಸುತ್ತುಗಳು ಪೂರ್ಣಗೊಳ್ಳುವುದು. ಇದು ಮೂರನೆಯ ಹಂತದ ಹರಾಜು ಪ್ರತಿಕ್ರಿಯೆಯೆಂದು ಖಚಿತ ಪಡಿಸಿರುವುದು!

ದಿನಾಂಕ ೧೦-೦೮-೨೦೧೫ ರಂದು ೪೧ ನೆಯ ಸುತ್ತು ಹರಾಜು ಪ್ರಕ್ರಿಯೆ ಆರಂಭವಾಗಲಿದೆಯೆಂದು ಸ್ಪಷ್ಟ ಪಡಿಸಿರುವುದು.

ಮೊತ್ತ ಮೊದಲು ಹರಾಜು ಪ್ರಕ್ರಿಯೆಯಲ್ಲಿ ೬೯ ಮಹಾನಗರಗಳಿಗೆ ೧೩೫ ತರಂಗಾಂತರಗಳನ್ನು ಹರಾಜಿಗಿಡಲಾಗಿತ್ತು. ಇದು ಇದುವರೆಗೆ ಒಟ್ಟು ೯೪೬ ಕೋಟಿ ರೂಪಾಯಿ ಬಿಡ್ ದರ ಬಾರಿ ಬಾರಿ ದಾಖಲಾಗಿರುವುದೆಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವಾಲಯವು ಅಂಕಿ ಅಂಶಗಳನ್ನು ಈಗಾಗಲೇ ಬಿಡುಗಡೆಗೊಳಿಸಿದೆ.

ನವ ದಿಲ್ಲಿಯಲ್ಲಿ ವಾಹಿನಿಯ ಬಿಡ್ ಮೌಲ್ಯ ೧೪೪ ಕೋಟಿ ರೂಪಾಯಿಗೆ ಈಗಾಗಲೇ ಏರಿಕೆಯಾಗಿದ್ದು ಇದುವರೆಗೆ ೫೬ ಮಹಾನಗರಗಳಲ್ಲಿ ೮೬ ಚಾನಲ್‌ಗಳ ಬಿಡ್ ಯಶಸ್ವಿಯಾಗಿದೆಯೆಂದು ಖಷಿತಪಡಿಸಿರುವುದು.

ನಮ್ಮ ದೇಶದಲ್ಲಿ ಎಫ್ ಎಮ್ ರೇಡಿಯೊ ವಾಹಿನಿಗಳ ಪ್ರಸಾರವನ್ನು ವಿಸ್ತರಿಸುವ ಸಲುವಾಗಿ ವಾರ್ತಾ ಮತ್ತು ಪ್ರಸಾರ ಖಾತೆಯು ೨೦೧೧ ರಲ್ಲಿ ಮಾರ್ಗದರ್ಶಿಯನ್ನು ಈಗಾಗಲೇ ಹೊರಡಿಸಿತ್ತು. ತದನಂತರ ಟ್ರಾಯ್ ಶಿಫಾರಸ್ಸುನ್ನು ಪಡೆದು ಈಗಿರುವ ಎರಡನೆಯ ಹಂತದ ಪರವಾನಗಿಯನ್ನು ಮೂರನೆಯ ಹಂತಕ್ಕೆ ವಿಸ್ತರಿಸಲು ಅದು ನಿರ್ಧರಿಸಿತ್ತು. ಅದರ ಪ್ರಕಾರ ಈಗ ಎಫ್ ಎಮ್ ಮೂರನೆಯ ಹಂತದ ಹರಾಜು ಪ್ರಕ್ರಿಯೆ ಜರುಗುವುದೆಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವಾಲಯವು ದೃಢ ಪಡಿಸಿದ್ದು ಇರುತ್ತದೆ.

ಮುದ್ದು ಮಕ್ಕಳೆ… ಎಫ್‌ಎಮ್ ರೇಡಿಯೋ ಕತೆ ಕೇಳಿದಿರಲ್ಲ …? ಪ್ರತಿಯೊಂದು ಮನೋರಂಜನೆಯ ಚಾನಲ್ ಹಿಂದೆ, ಒಂದು ಕತೆಯಿರುವುದು ಅದನ್ನು ಆಲಿಸಿದಾಗಲೇ ಅದರ ಹಿನ್ನಲೆ ತಿಳಿಯುವುದು ಅಲ್ಲವೇ?
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...