Home / ಕವನ / ಕವಿತೆ / ಸೆಲ್ಫೀ ಸಂಭ್ರಮ

ಸೆಲ್ಫೀ ಸಂಭ್ರಮ

ಸೆಲ್ಫೀ ಹಿಡಿದು ಸಂಭ್ರಮಿಸುತ್ತಿರುವ ಅವರು
ನಮ್ಮ ನಾಡಿನವರಲ್ಲ ಬಿಡು ಭಂಟನೆ
ಇಂದು ಜುಲೈ ಐದು, ಎರಡುಸಾವಿರದ ಹದಿನೈದು
ಬದುಕಿದ್ದರೆ ಕಾಸರ್‌ಬಾನು, ಅವಳ ಮಗುವಿಗೆ
ಈಗ ಹದಿಮೂರರ ಹರೆಯ ಮೂಡುತ್ತಿತ್ತು.
ನಿಮ್ಮ ರಕ್ತ ಸಿಕ್ತ ಕ್ರೌರ್ಯದಲ್ಲಿ ಬದುಕುಳಿದಿದ್ದರೆ.
ಬಿಸಿಲನಾಡು ಗುಲಬರ್ಗಾದಿಂದ ಗುಳೆಹೋದ
ಹೊಟ್ಟೆಪಾಡಿನ ಹೆಣ್ಣುಮಗಳು ಕೌಸರ್‌ಬಾನು.

ಇಪ್ಪತ್ತೆರಡರ ಹರೆಯದ ತುಂಬು ಗರ್ಭಿಣಿ
ಕೌಸರಳ ಹೊಟ್ಟೆಗೆ ತ್ರಿಶೂಲದಿಂದ ತಿವಿದು
ಮಗುವ ಬಗೆದು ತ್ರಿಶೂಲಕ್ಕೆ ಸಿಕ್ಕಿಸಿ ಕುಣಿದ
ಅವರು ನಿನ್ನ ರಕ್ಷೆಯಲ್ಲಿರುವ ಏಜೆಂಟರು.
ತನ್ನ ಮಗುವಿನನೊಂದಿಗೆ ಸೆಲ್ಫೀ ಕ್ಲಿಕ್ಕಿಸಲು
ಕೌಸರ್‌ಬಾನು ಕೈಬೀಸಿ ಕರೆಯುತ್ತಿದ್ದಾಳೆ.
ವಿದೇಶಿಯರ ಅಪ್ಪುಗೆಯಲ್ಲಿ ಸೆಲ್ಫಿಗೆ ಪೊಜು
ಕೌಸರಳೊಂದಿಗೆ ಸೆಲ್ಫೀ ತೆಗೆಸಲು
ನಿನಗೆ ಮುಖವಿದೆಯೇ ಭಂಟನೇ?

ಸಂದರ್ಶನದಲ್ಲಿ “ಮನ್ ಕಿಬಾತ್” ಹೇಳುತ್ತೀ
‘ದಿಲ್ ಕೆ ಅಂದರ’ ಒಮ್ಮೆ ಇಣುಕಿ ನೋಡು
ಹೊಟ್ಟೆ ಸೀಳಿಸಿಕೊಂಡು ಒದ್ದಾಡುತ್ತಿದ್ದಾಳೆ ಕೌಸರ್
ಮಾನ ಪ್ರಾಣ ಉಳಿಸಲು ಮೊರೆಯಿಡುತ್ತಿದ್ದಾಳೆ.
ರಕ್ತದ ಮಡುವಿನಲ್ಲಿ ಉರುಳಾಡುತ್ತಿದ್ದಾಳೆ.
ನಿನ್ನ ಕರ್ಣಗಳೇನು ಕೀವುಡಾದವೇ? ಧೈರ್ಯವಿದ್ದರೆ
ಅವಳೊಂದಿಗೆ ಒಂದು ಸೆಲ್ಫೀ ಕ್ಲಿಕ್ಕಿಸಿ ನೋಡು.
ದುಡಿದು ತಿನ್ನುವ ಕೌಸರಳ ಪಾಡಿದು.
ಶಾಸಕ ಎಹ್ಸಾನ್ ಜಾಫ್ರಿಗೂ ಕೊಂದಿರಿ
ಮಗಳು ತೀಸ್ತಾ ಕಟಕಟೆಗೆ ಕರೆಯುತ್ತಿದ್ದಾಳೆ.
ಗುಜುರಾತಿನ ಸೇತುವೆಯಡಿ ಶವದಬೆಟ್ಟವಿದೆ
ಆ ಕೊಳೆತ ಮೂಳೆಗಳು ಕೈಬೀಸಿ ಕರೆಯುತ್ತಿವೆ.
ಅವರೊಂದಿಗೆ ಒಂದು ಬಾರಿ ಒಂದೇ ಒಂದು ಬಾರಿ
ಸೆಲ್ಫೀ ಕ್ಲಿಕ್ಕಿಸಿ ನೋಡು ಚಹಾದಂಗಡಿಯವನೇ.

ಬೆಸ್ಟ್ ಬೇಕರಿಯ ಸುಟ್ಟ ಶವಗಳ ಹೊಗೆಯಲ್ಲಿ
ಕೆಟ್ಟ ಘಮಟು ವಾಸನೆಗೆ ಹೊಟ್ಟೆಯಲ್ಲಿ ತಳಮಳ
ಕೋಮು ಗಲಭೆಯಲಿ-ನೊಂದವರ ಕಣ್ಣೀರು
ಇಂದಿಗೂ ನಿಂತಿಲ್ಲ ದುಃಖದಲೆಗಳ ಅಬ್ಬರ
ನಿನ್ನ ಸೆಲ್ಫೀಯಲ್ಲಿ ಅವರ ಕಣ್ಣೀರ ಚಿತ್ರ
ಹೇಳಿ ನಾಯಕರೆ ಮೂಡಿ ಬರಲಾರದೇ?
*****

Tagged:

Leave a Reply

Your email address will not be published. Required fields are marked *

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...