Home / ಕವನ / ಕವಿತೆ / ಸೆಲ್ಫೀ ಸಂಭ್ರಮ

ಸೆಲ್ಫೀ ಸಂಭ್ರಮ

ಸೆಲ್ಫೀ ಹಿಡಿದು ಸಂಭ್ರಮಿಸುತ್ತಿರುವ ಅವರು
ನಮ್ಮ ನಾಡಿನವರಲ್ಲ ಬಿಡು ಭಂಟನೆ
ಇಂದು ಜುಲೈ ಐದು, ಎರಡುಸಾವಿರದ ಹದಿನೈದು
ಬದುಕಿದ್ದರೆ ಕಾಸರ್‌ಬಾನು, ಅವಳ ಮಗುವಿಗೆ
ಈಗ ಹದಿಮೂರರ ಹರೆಯ ಮೂಡುತ್ತಿತ್ತು.
ನಿಮ್ಮ ರಕ್ತ ಸಿಕ್ತ ಕ್ರೌರ್ಯದಲ್ಲಿ ಬದುಕುಳಿದಿದ್ದರೆ.
ಬಿಸಿಲನಾಡು ಗುಲಬರ್ಗಾದಿಂದ ಗುಳೆಹೋದ
ಹೊಟ್ಟೆಪಾಡಿನ ಹೆಣ್ಣುಮಗಳು ಕೌಸರ್‌ಬಾನು.

ಇಪ್ಪತ್ತೆರಡರ ಹರೆಯದ ತುಂಬು ಗರ್ಭಿಣಿ
ಕೌಸರಳ ಹೊಟ್ಟೆಗೆ ತ್ರಿಶೂಲದಿಂದ ತಿವಿದು
ಮಗುವ ಬಗೆದು ತ್ರಿಶೂಲಕ್ಕೆ ಸಿಕ್ಕಿಸಿ ಕುಣಿದ
ಅವರು ನಿನ್ನ ರಕ್ಷೆಯಲ್ಲಿರುವ ಏಜೆಂಟರು.
ತನ್ನ ಮಗುವಿನನೊಂದಿಗೆ ಸೆಲ್ಫೀ ಕ್ಲಿಕ್ಕಿಸಲು
ಕೌಸರ್‌ಬಾನು ಕೈಬೀಸಿ ಕರೆಯುತ್ತಿದ್ದಾಳೆ.
ವಿದೇಶಿಯರ ಅಪ್ಪುಗೆಯಲ್ಲಿ ಸೆಲ್ಫಿಗೆ ಪೊಜು
ಕೌಸರಳೊಂದಿಗೆ ಸೆಲ್ಫೀ ತೆಗೆಸಲು
ನಿನಗೆ ಮುಖವಿದೆಯೇ ಭಂಟನೇ?

ಸಂದರ್ಶನದಲ್ಲಿ “ಮನ್ ಕಿಬಾತ್” ಹೇಳುತ್ತೀ
‘ದಿಲ್ ಕೆ ಅಂದರ’ ಒಮ್ಮೆ ಇಣುಕಿ ನೋಡು
ಹೊಟ್ಟೆ ಸೀಳಿಸಿಕೊಂಡು ಒದ್ದಾಡುತ್ತಿದ್ದಾಳೆ ಕೌಸರ್
ಮಾನ ಪ್ರಾಣ ಉಳಿಸಲು ಮೊರೆಯಿಡುತ್ತಿದ್ದಾಳೆ.
ರಕ್ತದ ಮಡುವಿನಲ್ಲಿ ಉರುಳಾಡುತ್ತಿದ್ದಾಳೆ.
ನಿನ್ನ ಕರ್ಣಗಳೇನು ಕೀವುಡಾದವೇ? ಧೈರ್ಯವಿದ್ದರೆ
ಅವಳೊಂದಿಗೆ ಒಂದು ಸೆಲ್ಫೀ ಕ್ಲಿಕ್ಕಿಸಿ ನೋಡು.
ದುಡಿದು ತಿನ್ನುವ ಕೌಸರಳ ಪಾಡಿದು.
ಶಾಸಕ ಎಹ್ಸಾನ್ ಜಾಫ್ರಿಗೂ ಕೊಂದಿರಿ
ಮಗಳು ತೀಸ್ತಾ ಕಟಕಟೆಗೆ ಕರೆಯುತ್ತಿದ್ದಾಳೆ.
ಗುಜುರಾತಿನ ಸೇತುವೆಯಡಿ ಶವದಬೆಟ್ಟವಿದೆ
ಆ ಕೊಳೆತ ಮೂಳೆಗಳು ಕೈಬೀಸಿ ಕರೆಯುತ್ತಿವೆ.
ಅವರೊಂದಿಗೆ ಒಂದು ಬಾರಿ ಒಂದೇ ಒಂದು ಬಾರಿ
ಸೆಲ್ಫೀ ಕ್ಲಿಕ್ಕಿಸಿ ನೋಡು ಚಹಾದಂಗಡಿಯವನೇ.

ಬೆಸ್ಟ್ ಬೇಕರಿಯ ಸುಟ್ಟ ಶವಗಳ ಹೊಗೆಯಲ್ಲಿ
ಕೆಟ್ಟ ಘಮಟು ವಾಸನೆಗೆ ಹೊಟ್ಟೆಯಲ್ಲಿ ತಳಮಳ
ಕೋಮು ಗಲಭೆಯಲಿ-ನೊಂದವರ ಕಣ್ಣೀರು
ಇಂದಿಗೂ ನಿಂತಿಲ್ಲ ದುಃಖದಲೆಗಳ ಅಬ್ಬರ
ನಿನ್ನ ಸೆಲ್ಫೀಯಲ್ಲಿ ಅವರ ಕಣ್ಣೀರ ಚಿತ್ರ
ಹೇಳಿ ನಾಯಕರೆ ಮೂಡಿ ಬರಲಾರದೇ?
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...