Home / ಲೇಖನ / ಇತರೆ / ಸನ್ಯಾಸಿ ಕತೆ

ಸನ್ಯಾಸಿ ಕತೆ

ಬೆಂಗಳೂರೆಂಬ ದೊಡ್ಡ ಪಟ್ಟಣದಲ್ಲಿ ಬಲು ದೊಡ್ಡ ಮಠವಿತ್ತು. ಒಂದು ದಿನ ಒಬ್ಬ ಸನ್ಯಾಸಿ ಮಠದೊಳಕ್ಕೆ ಐದಾರು ಶಿಷ್ಯರೊಂದಿಗೆ ಗೂಳಿ ನುಗ್ಗಿದಂತೆ ನುಗ್ಗಿ ಬಂದ, ಮಠದಲ್ಲಿದ್ದವರೆಲ್ಲ ಗಾಬರಿಯಾದರು.

“ಸ್ವಾಮಿಗಳೆ ತಾವು ಯಾರು? ನಿಮಗ್ಯಾರು ಬೇಕಾಗಿತ್ತು? ನಿಮಗೇನಾಗ ಬೇಕಾಗಿತ್ತು?” ಎಂದು ಮಠದ ಮರಿಸ್ವಾಮಿಗಳೆಲ್ಲ ಆ ಸನ್ಯಾಸಿಯನ್ನು ವಿಜ್ಞಾಪಿಸಿದರು.

“ನಾನೊಬ್ಬ ದೇವದೂತ. ನಿಮಗೇನು ಬೇಕೆಂದು ಕೇಳಿಕೊಳ್ಳಿರಿ. ನನಗೇನು ಬೇಕಾಗಿಲ್ಲ. ನಿಮ್ಮ ಹಿರಿಸ್ವಾಮಿಯನ್ನು ನನ್ನಲ್ಲಿಗೆ ಕರೆದುಕೊಂಡು ಬನ್ನಿ” ಎಂದು ಸನ್ಯಾಸಿ ಅಲ್ಲಿದ್ದವರನ್ನೆಲ್ಲ ಜೋರು ಜೋರು ಮಾಡಿದ.

ಮಠದ ಮರಿಸ್ವಾಮಿಗಳೆಲ್ಲ ಒಳಗೆ ಓಡಿದರು. ಹಿರಿಸ್ವಾಮಿಗಳಿಗೆ ಸುದ್ದಿ ಮುಟ್ಟಿಸಿದರು. ಹಿರಿಸ್ವಾಮಿಗಳು ಗಾಬರಿ ಬಿದ್ದರು.

ಹಿರಿಸ್ವಾಮಿಗಳು ಏಳಲಾರದೆ ಬೇಗ ಎದ್ದು ಅವಸರದಿ ಸನ್ಯಾಸಿ ಬಳಿಗೆ ಬಂದರು. “ಸ್ವಾಮಿಗಳೆ ತಮ್ಮ ಹೆಸರು, ಊರು, ಯಾವ ಮಠದವರು ? ತಮಗೆ ನಮ್ಮಿಂದೇನಾಗಬೇಕು?” ಎಂದು ಕೇಳಿದರು.

“ನನ್ನ ಹೆಸರು ಮೃತ್ಯುವೆಂದು. ಎಲ್ಲರೂ ಭಯಭಕ್ತಿಯಿಂದ ಮೃತ್ಯುಂಜಯ ಮಹಾಸ್ವಾಮಿಗಳೆಂದು ಕರೆಯುವರು. ನಮ್ಮದು ಬಲು ಎತ್ತರದ ಊರು! ಉತ್ತರ ಭಾರತದ ಹಿಮಾಲಯದ ತಪ್ಪಲಿನಿಂದ ಬಂದವರು! ಸಿದ್ಧಿ ಪ್ರಸಿದ್ಧಿ ಸಾಧಕರು! ನಿಮಗೇನಾದರು ಬೇಕಿದ್ದರೆ ಹೇಳಿ. ನಿಮ್ಮಿಂದ ನಮಗೆ ಪೂಜಾ ಏರ್ಪಾಡು, ಉಳಿಯಲು ವಾರದ ಮಟ್ಟಿಗೆ ವಸತಿ, ಪ್ರಸಾದದ ವ್ಯವಸ್ಥೆಯಾಗಬೇಕೆಂದು” ಜೋರು ಮಾಡಿದರು.

ಇದೇನು ಸ್ವಾಮಿಗಳೆ ನಿಮ್ಮದೇ ಮಠವೇನೋ ಶಾಖ ಮಠವೆಂಬಂತೆ ನಮ್ಮನ್ನು ನಿಮ್ಮ ಕಿರಿಸ್ವಾಮಿ ಎಂಬಂತೇ ಜೋರು ಜೋರು… ಮಾಡುತ್ತಿರುವಿರಲ್ಲಾ? ಇದೇನು ತೋಟದಪ್ಪನ ಪುಣ್ಯ ಛತ್ರವೆಂದು ತಿಳಿದಿರೇನು? ನೀವ್ಯಾರೋ… ನಮಗೇ ತಿಳಿಯದು ದಯಮಾಡಿ ಮುಂದೆ ಹೋಗಿ” ಎಂದು ಹಿರಿಸ್ವಾಮಿಗಳು ಅಂದರು.

“ನಿಮಗೆ ನಮ್ಮ ಮಹಿಮೆ ತಿಳಿಯದು. ದೇವರು ನಿಮಗೆ ನೀಡಿದ್ದನ್ನು ನಮ್ಮಂಥಾ ಸನ್ಯಾಸಿಗೆ ನೀಡುವುದರಲ್ಲಿ ತಪ್ಪಿಲ್ಲವಲ್ಲಾ? ಎಲ್ಲ ದೇವರ ಕೊಡುಗೆಯಲ್ಲವೇ? ಹೀಗಾಗಿ ಈ ಮಠದ ಮೇಲೆ ನನಗೂ ಹಕ್ಕಿದೆ. ಪಾಲಿದೆ” ಎಂದ ಸನ್ಯಾಸಿ.

“ನಿಮ್ಮಂಥ ಸನ್ಯಾಸಿಗಳು ನಿತ್ಯ ನೂರಾರು ಜನ ಬಂದು ಹೋಗುವರು ನಿಮ್ಮ ರೀತಿ ವರ್ತಿಸಿದ್ದು ನಾ ಕಾಣೆ. ನೀವ್ಯಾರೋ ಕೆಟ್ಟ, ಕಪಟ ಸ್ವಾಮಿ ಇರಬೇಕು” ಎಂದ ಮಠದ ಹಿರಿಯ ಸ್ವಾಮಿ.

“ಏ ನೀ ನನ್ನ ಅನುಮಾನಿಸುತ್ತೀಯಾ? ನನ್ನ ವೇಷಭೂಷಣ ಶಿಷ್ಯರ ನೋಡಿದರೆ ನಿನಗೆ ಜ್ಞಾನೋದಯವಾಗಬೇಕಾಗಿತ್ತು!! ಆದರೆ ನಿನಗೆ ನೂರಾರು ವರ್ಷ ವಯಸ್ಸಾಗಿದೆ. ಬುದ್ಧಿ ಬಲಿತಿಲ್ಲ” ಎಂದ ಸನ್ಯಾಸಿ.

“ನಾವು ಇಲ್ಲಿ ಈ ಮಠದಲ್ಲಿ ೫೦ ವರ್ಷದಿಂದ ಇದ್ದೇವೆ! ನಮಗೆ ತಿಳಿದಿದೆ ಯಾರು ನಿಜದ ಸ್ವಾಮಿಗಳೆಂದು… ಬರಿಯ ಕಾವಿ ತೊಟ್ಟರೆ ಕಾಮ ಹೋಗುವುದಿಲ್ಲ! ಕರ್ಮ ಕಳೆದುಕೊಂಡು ನಮ್ಮಲ್ಲಿಗೆ ಬಾ… ಹೋಗು” ಎಂದ ಹಿರಿಸ್ವಾಮಿ.

“ನನ್ನ ಏಕವಚನದಲ್ಲಿ ಮಾತನಾಡಿಸುತ್ತೀಯಾ? ನೀನು ನರಕಕ್ಕೆ ಹೋಗುವೆ ಪಾಪಿ! ನಿನಗೆ ಜಾತಿಯ ಮದ, ಅಧಿಕಾರದ ಹಮ್ಮು, ಜನಬಲದ ಸೊಕ್ಕು ಹಣದ ದುರಂಕಾರ, ಜಾಸ್ತಿಯಾಗಿದೆ ನಾನಿನ್ನು ಬರುತ್ತೇನೆ” ಎಂದು ಹೊರಡಲನುವಾದ.

ಹಿರಿಸ್ವಾಮಿಗಳು ಸುಮ್ಮನೆ ಬಿಟ್ಟಾರೆಯೇ?

“ಏ ಇವನನ್ನು ಹಿಡಿಯಿರಿ ಮಠದಿಂದ ಎಳೆಯಿರಿ ನಾಲ್ಕು ಭಾರಿಸಿ…” ಎಂದು ಕೂಗಿಯೇ ಬಿಟ್ಟರು. ಶಿಷ್ಯರಿಗೆ ಇಷ್ಟೇ ಸಾಕಾಯಿತು!

ಅಲ್ಲಿದ್ದ ಇವರ ಶಿಷ್ಯರೆಲ್ಲ ಮೃತ್ಯುಂಜಯ ಸ್ವಾಮಿಯನ್ನು ಮುತ್ತಿದರು. ಮಠದಿಂದ ಹೊರಗೆ ಎಳೆದರು. ಚೆನ್ನಾಗಿ ಬಿಸಿ ಮುಟ್ಟಿಸಿದರು. ಇನ್ನೆಂದೂ ಮಠದತ್ತ ಇಣಕಿ ನೋಡದಂತೆ ಮಾಡಿದರು.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...