Home / ಕವನ / ಕವಿತೆ / ಕಂಡಿದ್ದೇನೆ ನಾನು

ಕಂಡಿದ್ದೇನೆ ನಾನು

ಧರ್ಮದ ಠೇಕೆದಾರರಿಂದ
ಭೂಮಿಯ ಮೇಲೆ ದೆವ್ವದ ಕುಣಿತ
ನೋಡಿದ್ದೇನೆ ನಾನು.

ಗುಜರಾತಿನ ನರಮೇಧದಲ್ಲಿ
ಮನುಷ್ಯತ್ವದ ಕತ್ತು
ನಾಚಿಕೆಯಿಂದ ಕೆಳಗಾಗಿದ್ದನ್ನು
ಕಂಡಿದ್ದೇನೆ ನಾನು.

ಧರ್ಮದ ರಾಜಕೀಯದಲ್ಲಿ ಅಧರ್ಮದ
ಕತ್ತಿ ಝಳಪಿಸುವ ಗುಜರಾತನು
ಕಣ್ಣಾರೆ ಕಂಡಿದ್ದೇನೆ ನಾನು

ತುಂಬು ಗರ್ಭೀಣಿಯ ಹೊಟ್ಟೆಸೀಳಿ
ಹೊರತೆಗೆದ ಮಗುವಿಗೆ
ಚುಚ್ಚಿಚುಚ್ಚಿ ಸಾಯಿಸಿದ ಪಾತಕಿಗಳನ್ನು
ಕಂಣ್ಣಾರೆ ಕಂಡಿದ್ದೇನೆ ನಾನು.

ಯುವಕ, ಮುದುಕ, ಮಹಿಳೆ, ಮಕ್ಕಳ
ಬಿಸಿ ರಕ್ತದ ಹೊಳೆ ಹರಿಸಿದ್ದನ್ನು
ಕಣ್ಣಾರೆ ಕಂಡಿದ್ದೇನೆ ನಾನು.

ಸಾಯುವಾಗಿನ ನೋವಿನ ಆರ್ತನಾದ
ರಕ್ಷಕರ ಎದುರಿನಲ್ಲೇ ಬಿಕ್ಕುತ್ತಿರುವ
ಮನುಷ್ಯತ್ವವ ಕಂಡಿದ್ದೇನೆ ನಾನು.

ಗುಜರಾತಿನ ಗಲ್ಲಿಗಳಲ್ಲಿ
ಸುಟ್ಟು ಕರಕಲಾಗುತ್ತಿರುವ
ಮನುಷ್ಯತ್ವ ಕಣ್ಣಾರೆ ಕಂಡಿದ್ದೇನೆ ನಾನು.

ಲೋಕವೇ ಕಣ್ಣಾರೆ ಕಂಡಿದೆ
ಗುಜರಾತಿನಲ್ಲಿ ಕರಗಿ ಹೋದ
ಮಾನವೀತಯತೆಯ ಚಿಗುರುಗಳ
ಕಣ್ಣಾರೆ ಕಂಡಿದ್ದೇನೆ ನಾನು.

ಅವನ ಅಂತ್ಯದ ದಿನಗಳಲ್ಲಿ
ಕಟಕಟೆಯಲ್ಲಿ ನಿಲ್ಲಿಸಿ ಕೇಳುವೆ
ನಿರಪರಾಧಿಗಳ ರಕ್ತ ಹರಿಸಿದ್ದಕ್ಕೆ
ನಿನಗೆ ದೊರಕಿದ್ದಾದರೂ ಏನೆಂದು?

ಮಾನವೀಯ ನೆಲೆಗಳನ್ನು ನಾಶಪಡಿಸಿದ
ನಿನಗೆ ನಿನ್ನ ರಾಮನಿಗೆ ತೋರಿಸುವುದಕ್ಕೆ
ಮುಖವಾದರೂ ಇದೆಯೇ ಎಂದು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...