Home / ಕವನ / ಕವಿತೆ / ಕಂಡಿದ್ದೇನೆ ನಾನು

ಕಂಡಿದ್ದೇನೆ ನಾನು

ಧರ್ಮದ ಠೇಕೆದಾರರಿಂದ
ಭೂಮಿಯ ಮೇಲೆ ದೆವ್ವದ ಕುಣಿತ
ನೋಡಿದ್ದೇನೆ ನಾನು.

ಗುಜರಾತಿನ ನರಮೇಧದಲ್ಲಿ
ಮನುಷ್ಯತ್ವದ ಕತ್ತು
ನಾಚಿಕೆಯಿಂದ ಕೆಳಗಾಗಿದ್ದನ್ನು
ಕಂಡಿದ್ದೇನೆ ನಾನು.

ಧರ್ಮದ ರಾಜಕೀಯದಲ್ಲಿ ಅಧರ್ಮದ
ಕತ್ತಿ ಝಳಪಿಸುವ ಗುಜರಾತನು
ಕಣ್ಣಾರೆ ಕಂಡಿದ್ದೇನೆ ನಾನು

ತುಂಬು ಗರ್ಭೀಣಿಯ ಹೊಟ್ಟೆಸೀಳಿ
ಹೊರತೆಗೆದ ಮಗುವಿಗೆ
ಚುಚ್ಚಿಚುಚ್ಚಿ ಸಾಯಿಸಿದ ಪಾತಕಿಗಳನ್ನು
ಕಂಣ್ಣಾರೆ ಕಂಡಿದ್ದೇನೆ ನಾನು.

ಯುವಕ, ಮುದುಕ, ಮಹಿಳೆ, ಮಕ್ಕಳ
ಬಿಸಿ ರಕ್ತದ ಹೊಳೆ ಹರಿಸಿದ್ದನ್ನು
ಕಣ್ಣಾರೆ ಕಂಡಿದ್ದೇನೆ ನಾನು.

ಸಾಯುವಾಗಿನ ನೋವಿನ ಆರ್ತನಾದ
ರಕ್ಷಕರ ಎದುರಿನಲ್ಲೇ ಬಿಕ್ಕುತ್ತಿರುವ
ಮನುಷ್ಯತ್ವವ ಕಂಡಿದ್ದೇನೆ ನಾನು.

ಗುಜರಾತಿನ ಗಲ್ಲಿಗಳಲ್ಲಿ
ಸುಟ್ಟು ಕರಕಲಾಗುತ್ತಿರುವ
ಮನುಷ್ಯತ್ವ ಕಣ್ಣಾರೆ ಕಂಡಿದ್ದೇನೆ ನಾನು.

ಲೋಕವೇ ಕಣ್ಣಾರೆ ಕಂಡಿದೆ
ಗುಜರಾತಿನಲ್ಲಿ ಕರಗಿ ಹೋದ
ಮಾನವೀತಯತೆಯ ಚಿಗುರುಗಳ
ಕಣ್ಣಾರೆ ಕಂಡಿದ್ದೇನೆ ನಾನು.

ಅವನ ಅಂತ್ಯದ ದಿನಗಳಲ್ಲಿ
ಕಟಕಟೆಯಲ್ಲಿ ನಿಲ್ಲಿಸಿ ಕೇಳುವೆ
ನಿರಪರಾಧಿಗಳ ರಕ್ತ ಹರಿಸಿದ್ದಕ್ಕೆ
ನಿನಗೆ ದೊರಕಿದ್ದಾದರೂ ಏನೆಂದು?

ಮಾನವೀಯ ನೆಲೆಗಳನ್ನು ನಾಶಪಡಿಸಿದ
ನಿನಗೆ ನಿನ್ನ ರಾಮನಿಗೆ ತೋರಿಸುವುದಕ್ಕೆ
ಮುಖವಾದರೂ ಇದೆಯೇ ಎಂದು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...