Home / ಲೇಖನ / ಇತರೆ / ಯಾವುದು ಸತ್ಯ?

ಯಾವುದು ಸತ್ಯ?

ಬಹಳ ಹಿಂದೆ- ಭವ್ಯ ಭಾರತ ಕಂಡ ಅಪ್ರತಿಮ ಅಧ್ಯಾತ್ಮಿಕ ತತ್ವ ಸಿದ್ಧಾಂತಿ ಮಹಾ ಸಿದ್ಧಿ ಸಾಧಕರೊಬ್ಬರಿದ್ದರು. ಅವರ ಹೆಸರು- ರಮಣ ಮಹರ್ಷಿಗಳೆಂದು. ಅವರಿಗೆ ಬಹಳ ಜನ ಶಿಷ್ಯರಿದ್ದರು. ಅವರಲ್ಲಿ ಮರುಳ ಸಿದ್ದಯ್ಯ, ಬಸಪ್ಪಯ್ಯ ವಲಿಯ, ಸೀನ, ಮೃತ್ಯುಂಜಯ, ರಾಜ, ಕೊಟ್ರಯ್ಯ… ಎಂದೂ ಇದ್ದರು.

ಒಮ್ಮೆ- ಉಪದೇಶದ ಮಧ್ಯೆ ರಮಣ ಮಹರ್ಷಿಗಳು “ಅಯ್ಯಾ ಸತ್ಯ ಯಾವುದು? ನಿಮ್ಮಲ್ಲಿ ಯಾರು ಹೇಳ ಬಲ್ಲಿರಿ?” ಎಂದು ಅಲ್ಲಿದ್ದ ತಮ್ಮ ಶಿಷ್ಯರೆಲ್ಲರನೂ… ಒಂದು ಕಡೆಯಿಂದ ಕೇಳುತ್ತಾ ಹೋದರು. ಆಗ ಶಿಷ್ಯರೆಲ್ಲರು ತಲೆ ಕೆರೆಯುತ್ತಾ ಕುಳಿತರು.

“ಸ್ವಾಮಿಗಳೆ… ನಾವು ಕಾಣುವುದೆಲ್ಲ ಸತ್ಯ! ಉಳಿದ್ದಿದ್ದೆಲ್ಲ ಮಿಥ್ಯ” ಎಂದು ಮರುಳ ಸಿದ್ಧಯ್ಯ ಸ್ವಾಮಿಗಳು ಅಂದರು.

ಮೃತ್ಯುಂಜಯ ಎದ್ದು ನಿಂತು- “ಸ್ವಾಮಿಗಳೆ ಯಾವುದು ಸತ್ಯವಲ್ಲ! ಸತ್ಯವಿದ್ದರೆಲ್ಲವೇ ಸತ್ಯವೆನ್ನುವುದು! ಮಿಥ್ಯವನ್ನು ನಾವು ಸತ್ಯವೆಂದು ನಂಬಿದ್ದೇವೆ. ಕಾಣುವುದೆಲ್ಲ ಮಿಥ್ಯ ಸತ್ಯ ಇಲ್ಲದೇ ಇಲ್ಲ…” ಎಂದು ವಾದ ಮಾಡುತ್ತಾ ನಿಂತ.

ರಮಣ ಮಹರ್ಷಿಗಳು- “ಶಿಷ್ಯ ಮೃತ್ಯುಂಜಯ ಕೇಳಿದಕ್ಕೆ ಮಾತ್ರ ಉತ್ತರಿಸು ನೀ ಕುಳಿತುಕೋ.” ಎಂದು ಮೃತ್ಯುಂಜಯನ ಮೇಲೆ ಸಿಟ್ಟಾದರು.

ಸೀನ ಎದ್ದು ನಿಂತು “ಸ್ವಾಮಿಗಳೆ ಸತ್ಯ ಮಿಥ್ಯ ಎರಡು ಕಣ್ಣಿಗೆ ಹತ್ತಿರ. ಯಾವುದು ಸತ್ಯ ಯಾವುದು ಮಿಥ್ಯ ಕಣ್ಣಿಗೆ ತಿಳಿಯದ ಸಂಗತಿಗಳು” ಎಂದ.

“ಸ್ವಾಮಿಗಳೆ… ನಾನು ಮೃತ್ಯುಂಜಯ ಹಾಗೂ ಸೀನ ಹೇಳಿದ್ದನ್ನೇ ಅನುಮೋದಿಸುತ್ತೇನೆ. ನನಗೇನು ಹೆಚ್ಚಿಗೆ ತಿಳಿಯದು” ಎಂದು ವಲಿಯ ಹೇಳಿ ಕುಳಿತ.

ಬಸಪ್ಪಯ್ಯ ಎದ್ದು ನಿಂತು- “ಸ್ವಾಮಿಗಳೆ ನನಗೇನು ಹೊಳೆಯದು. ನನಗೆ ಎರಡು ದಿನ ಕಾಲಾವಕಾಶ ನೀಡಿದಲ್ಲಿ ಅಧ್ಯಯನ ಮಾಡಿ ಬಂದು ಅರುಹುವೆ” ಎಂದ.

ಅಲ್ಲಿದ್ದ ರಾಜ, ಕೊಟ್ರಯ್ಯ ತಲೆ ತಗ್ಗಿಸಿ- “ಮೌನಂ ಸರ್ವತ್ರ ಸಾಧನಂ…” ಎಂದು ಕುಳಿತ್ತಿದ್ದರು.

“ಅಯ್ಯಾ ಶಿಷ್ಯರೆ.. ನಾ ಎನ್ನುವ ಪ್ರಜ್ಞೆಯಷ್ಟೇ ಸತ್ಯಾಸ್ಯ ಸತ್ಯ! ಉಳಿದಿದ್ದೆಲ್ಲ ಮಿಥ್ಯಸ್ಯಾ ಮಿಥ್ಯ… ನೋಡಿ ಎಷ್ಟು ಸರಳ ಸುಂದರವಾಗಿದೆ” ಎಂದು ರಮಣ ಮಹರ್ಷಿಗಳು ಅಂದರು.

ಅಲ್ಲಿಗೆ ಅಂದಿನ ಕಾರ್ಯಕ್ರಮವು ಮುಗಿಯಿತು. ಶಿಷ್ಯರೆಲ್ಲ ಎದ್ದು ಹೊರಟರು. ಸ್ವಾಮಿಗಳು ಧ್ಯಾನಸ್ಥರಾದರು.
*****

Tagged:

Leave a Reply

Your email address will not be published. Required fields are marked *

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...