Home / ಕವನ / ಕವಿತೆ / ಮುಚ್ಚು ಮುಚ್ಚು ಬಾಗಿಲ

ಮುಚ್ಚು ಮುಚ್ಚು ಬಾಗಿಲ

ಮುಚ್ಚು ಮುಚ್ಚು ಬಾಗಿಲ
ಜೀವವಾಯ್ತು ವ್ಯಾಕುಲ.

ಹೊರಗೆ ಬರಿಯ ಬಿಸಿಲು ಧೂಳಿ
ದೇಹ ಮನವನೆಲ್ಲ ಹೂಳಿ
ಮೇಲೆ ಕುಣಿವಳವಳು ಕಾಳಿ
ನೋವು ನರನ ಕೊರಳ ತಾಳಿ!
ಮುಚ್ಚು ಮುಚ್ಚು ಬಾಗಿಲ
ಜೀವವಾಯ್ತು ವ್ಯಾಕುಲ.

ಎಲ್ಲ ಕಡೆಗೆ ವಿಷದ ಗಾಳಿ
ತಡೆಯಲಾರೆ ಅದರ ದಾಳಿ
ನನ್ನ ಬಾಳು ಬಿಳಿಯ ಹಾಳಿ
ಗೀಚುತಿಹರು ದುಃಖ ಬಳ್ಳಿ
ಎಂಥ ಕೀಳು ಜನವಲ
ಮುಚ್ಚು ಮುಚ್ಚು ಬಾಗಿಲ.

ನನ್ನದು ಇದು ಸಖಿ ದೇಗುಲ
ನೀ ಕಟ್ಟಿದ ಮನೆ ಮಂಗಲ
ನಿನ್ನೊಲುಮೆಯ ಸಿರಿ ಸೋಜ್ವಲ
ಚಂದ್ರಚಾರು ಮನ ಬಾಂದಳ
ನನ್ನಾಸೆಯ ತವರಲ
ಮುಚು ಮುಚ್ಚು ಬಾಗಿಲ.

ದೈವೋದ್ಧತ ಪ್ರಹರಿತ ಧರೆ
ಜನಮನವನು ಕಚ್ಚಿತು ಜರೆ
ಸ್ನೇಹಮೂರ್ತಿ ನೀ ನಿರ್ಜರೆ
ನಿನ್ನೆಡೆಯಲಿ ಇಲ್ಲ ಅರೆ
ಮುಚ್ಚು ಮುಚ್ಚು ಬಾಗಿಲ
ಜೀವ ವಾಯ್ತು ವ್ಯಾಕುಲ.

ಕುಣಿಯುತಿರಲಿ ಕೆಡುಕು ಪಡೆ
ಈ ಹೊಸತಿಲದಾ ಹೊರಗಡೆ
ನೀನಿರುತಿರೆ ನನ್ನಕಡೆ
ಬೇರೆ ಬೇರೆ ಅಡ್ಡಿ ತಡೆ
ಸಖಿಯೆ ನೀನು ಸ್ನೇಹಲ
ಮುಚ್ಚು ಮುಚ್ಚು ಬಾಗಿಲ.

ಕಮಲೋದರದತಿ ಕೋಮಲ
ಬೆಳುದಿಂಗಳ ಸುಖ ಶೀತಲ
ಆಲಿಂಗನಕೆದೆ ವ್ಯಾಕುಲ
ವಿಸ್ಮೃತಿಗಿದು ಮಧು ಫೇನಿಲ
ನಿನ್ನ ಪ್ರೀತಿ ನಿಶ್ಚಲ
ಮುಚ್ಚು ಮುಚ್ಚು ಬಾಗಿಲ.

ಮುರಿದೆದೆಯಲಿ ನಾ ಬಂದರೆ
ಇದೆ ತೋಳ್ಗಳ ಈ ಸವಿಸೆರೆ
ದಣಿದವನಿಗೆ ನಿನ್ನಾಸರೆ
ನಗೆ ನಯಗಳು, ಮಧುರಾಧರೆ!
ಮುಚ್ಚು ಮುಚ್ಚು ಬಾಗಿಲ
ಜೀವವಾಯ್ತು ವ್ಯಾಕುಲ.

ಯಾನ ದೈವ ಜೋಡಿಸಿಹುದು
ನಮ್ಮೆದೆಗಳ ಕೂಡಿಸಿಹುದು
ಮಂಗಲವನು ಮೂಡಿಸಿಹದು.
ಕೆಡುಕೆಲ್ಲವನೋಡಿಸಿಹುದು
ಮುಚ್ಚು ಸಖಿಯೆ ಬಾಗಿಲ
ತೆರೆದು ಹೃದಯ ಸ್ನೇಹಲ
ಹೊಮ್ಮಿಸುತ್ತ ಪರಿಮಳ.
*****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...