Home / ಕವನ / ಕವಿತೆ / ಮುಚ್ಚು ಮುಚ್ಚು ಬಾಗಿಲ

ಮುಚ್ಚು ಮುಚ್ಚು ಬಾಗಿಲ

ಮುಚ್ಚು ಮುಚ್ಚು ಬಾಗಿಲ
ಜೀವವಾಯ್ತು ವ್ಯಾಕುಲ.

ಹೊರಗೆ ಬರಿಯ ಬಿಸಿಲು ಧೂಳಿ
ದೇಹ ಮನವನೆಲ್ಲ ಹೂಳಿ
ಮೇಲೆ ಕುಣಿವಳವಳು ಕಾಳಿ
ನೋವು ನರನ ಕೊರಳ ತಾಳಿ!
ಮುಚ್ಚು ಮುಚ್ಚು ಬಾಗಿಲ
ಜೀವವಾಯ್ತು ವ್ಯಾಕುಲ.

ಎಲ್ಲ ಕಡೆಗೆ ವಿಷದ ಗಾಳಿ
ತಡೆಯಲಾರೆ ಅದರ ದಾಳಿ
ನನ್ನ ಬಾಳು ಬಿಳಿಯ ಹಾಳಿ
ಗೀಚುತಿಹರು ದುಃಖ ಬಳ್ಳಿ
ಎಂಥ ಕೀಳು ಜನವಲ
ಮುಚ್ಚು ಮುಚ್ಚು ಬಾಗಿಲ.

ನನ್ನದು ಇದು ಸಖಿ ದೇಗುಲ
ನೀ ಕಟ್ಟಿದ ಮನೆ ಮಂಗಲ
ನಿನ್ನೊಲುಮೆಯ ಸಿರಿ ಸೋಜ್ವಲ
ಚಂದ್ರಚಾರು ಮನ ಬಾಂದಳ
ನನ್ನಾಸೆಯ ತವರಲ
ಮುಚು ಮುಚ್ಚು ಬಾಗಿಲ.

ದೈವೋದ್ಧತ ಪ್ರಹರಿತ ಧರೆ
ಜನಮನವನು ಕಚ್ಚಿತು ಜರೆ
ಸ್ನೇಹಮೂರ್ತಿ ನೀ ನಿರ್ಜರೆ
ನಿನ್ನೆಡೆಯಲಿ ಇಲ್ಲ ಅರೆ
ಮುಚ್ಚು ಮುಚ್ಚು ಬಾಗಿಲ
ಜೀವ ವಾಯ್ತು ವ್ಯಾಕುಲ.

ಕುಣಿಯುತಿರಲಿ ಕೆಡುಕು ಪಡೆ
ಈ ಹೊಸತಿಲದಾ ಹೊರಗಡೆ
ನೀನಿರುತಿರೆ ನನ್ನಕಡೆ
ಬೇರೆ ಬೇರೆ ಅಡ್ಡಿ ತಡೆ
ಸಖಿಯೆ ನೀನು ಸ್ನೇಹಲ
ಮುಚ್ಚು ಮುಚ್ಚು ಬಾಗಿಲ.

ಕಮಲೋದರದತಿ ಕೋಮಲ
ಬೆಳುದಿಂಗಳ ಸುಖ ಶೀತಲ
ಆಲಿಂಗನಕೆದೆ ವ್ಯಾಕುಲ
ವಿಸ್ಮೃತಿಗಿದು ಮಧು ಫೇನಿಲ
ನಿನ್ನ ಪ್ರೀತಿ ನಿಶ್ಚಲ
ಮುಚ್ಚು ಮುಚ್ಚು ಬಾಗಿಲ.

ಮುರಿದೆದೆಯಲಿ ನಾ ಬಂದರೆ
ಇದೆ ತೋಳ್ಗಳ ಈ ಸವಿಸೆರೆ
ದಣಿದವನಿಗೆ ನಿನ್ನಾಸರೆ
ನಗೆ ನಯಗಳು, ಮಧುರಾಧರೆ!
ಮುಚ್ಚು ಮುಚ್ಚು ಬಾಗಿಲ
ಜೀವವಾಯ್ತು ವ್ಯಾಕುಲ.

ಯಾನ ದೈವ ಜೋಡಿಸಿಹುದು
ನಮ್ಮೆದೆಗಳ ಕೂಡಿಸಿಹುದು
ಮಂಗಲವನು ಮೂಡಿಸಿಹದು.
ಕೆಡುಕೆಲ್ಲವನೋಡಿಸಿಹುದು
ಮುಚ್ಚು ಸಖಿಯೆ ಬಾಗಿಲ
ತೆರೆದು ಹೃದಯ ಸ್ನೇಹಲ
ಹೊಮ್ಮಿಸುತ್ತ ಪರಿಮಳ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...