Home / ಕವನ / ಕವಿತೆ / ತಂತಾನೆ ನೋಡಿಕೊಂಡರೆ?

ತಂತಾನೆ ನೋಡಿಕೊಂಡರೆ?

ಎಲೆಲ್ಲೆಲ್ಲಿ ನೋಡಿದರೂ ಎಲ್ಲಾರೂ ಕಾಣಿಸ್ತಾರೆ, ನಾನೇ ಮಾತ್ರ ಕಾಣ್ಸೋದಿಲ್ಲ|
ನಾನಿದ್ದದ್ದೇ ಸುಳ್ಳೋ? ಹೇಳಾಕಿಲ್ಲ.
ಇದ್ದೇನೆಂದ್ರೂ-ಇದ್ದಾಂಗಿಲ್ಲ| ಏಸು ವರ್ಷ ಕಳೆದ್ರೂ ಬೆಳದ್ಹಾಂಗಿಲ್ಲ |
ಬುದ್ಧಿಯಂತೂ ಬರಲೇ ಇಲ್ಲ| ಹೋಗಿದ್ರೇ ಬರಬೇಕಲ್ಲ|
ಹೋದ ಬುದ್ಧಿ ತಿಂದ ಮುದ್ದಿ ಬರೋದುಂಟೇ?
ಬರತಽದಂದ್ರೆ ಬೇರೇ ದಾರಿಗುಂಟೇ ||

ಹೀಚು ಹೋಗಿ ಮಿಡಿ ಆಯ್ತು | ಕಾಯಿ ಹೋಗಿ ಹಣ್ಣು ಆಯ್ತು |
ಬದಲೀ ಬಣ್ಣೇ ಬರಲಿಲ್ಲ| ರುಚಿಯೇನೋ ತರಲಿಲ್ಲ|
ಹಳೇದಾದ್ರು ಹುಳಿ ಹೋಗಲಿಲ್ಲ | ಪಾಡುಗೊಂಡು ಮಧುರಾಗಲಿಲ್ಲ|
ಹಣ್ಣೆಂದು ಕರೆಯೋದ್ಹ್ಯಾಂಗ ಹುಣಸೀಕಾಯಿಗೆ ?
ಕಸುಕಿದ್ರು ಹುಣಸಿನಕಾಯಿ, ಹಣ್ಣಾದ್ರು ಹುಣಸಿನಕಾಯಿ
ಯಾಕೆಂದು ಕೇಳಬೇಡಿ ಹಾಕಿನೋಡಿ ಬಾಯಿಗೆ! ||

ಇದ್ದ ಗುಣ ಇದ್ದೇ ಇತ್ತು | ಬಣ್ಣ ಮಾತ್ರ ಬದಲಾಗಿತ್ತು|
ಸಕ್ರಿಮಾತ್ರ ಬೆರೀಲಿಲ್ಲ ಹುಳಿಹುಳಿ ಜೊಂಡಿಗೆ|
ಮೈ ಆಯ್ತು ಮೆತ್ತಗೆ | ಆಯುಷ್ಯ ಬಂತು ಹತ್ತೆಗೆ|
ಗುಣಾ ಹೋಗದಿದ್ರೆ ಈಡುಮಾಡಬೇಕು ಗುಂಡಿಗೆ ||

ತೆಂಗಿನಕಾಯಿ ಇನ್ನೊಂದು ಜಾತಿ | ದಿನಗಳೆದಂತೆ ಬಿರುಸಾಗತೈತಿ |
ಅಂಬವರುಂಟು ಹುಣಸಿಹಣ್ಣು | ಅಂದವರುಂಟೆ ತೆಂಗಿನಹಣ್ಣು? ||

ತೊಂಗಲಿಲ್ಲ ತಿಸಿಲಿಲ್ಲ ಮರ ಬೆಳೀತು ಮುಗಿಲಿಗೆ |
ಇಳಿದು ಬರುವ ಎಣಿಕೀ ಹಾಕದೆ, ಕಾಯಿ ಏರಿತು ಚಂಡಿಗೆ |
ನೇಣುಹಾಕಿ ನೇತಾಡುವನು ಜಿಗಿದು ಬಿದ್ರೆ ಭೂಮಿಗೆ|
ಸೀಳಿ ಹೋಗಬೇಕು, ಸೋರಿ ಹೋಗಬೇಕು ಸಾವಿಗೆ ||

ತಿನ್ನೋದೇನು ಸುಲಭವಲ್ಲ ತೆಂಗಿನಕಾಯಿ
ಜುಟ್ಟು ಕಿತ್ತಿ ಪರಟೇ ಒಡೆದು ತಗೀಬೇಕು ಬಾಯಿ ||
ಹಲ್ಲು ತಗೀದಿದ್ರೆ ಆಗಬೇಕಾಗ್ತಾದ ನಾಯಿ
ಹೈರಾಣಕಂಜಿ ಬಿಡೂದಕ್ಕಿಂತ ಹೆಚ್ಚುತಿಂದು ಸಾಯಿ ||

ತೆಂಗಿನ ಹಾಗೆ ಬಿರುಸು. ಹುಣಿಸೆಯಂತೆ ಹುಳುಚು |
ನನ್ನ ರುಚಿ ನನಗೇ ಬೇಡ | ಹೆರವರಿಗಂತೂ ಮೊದಲೇ ಬೇಡ ||
ಇದ್ದ ಕಣ್ಣು ಮುಚ್ಚಿಕೊಂಡು ತಂತಾನೆ ನೋಡಿಕೊಂಡರೆ
ಕಾಣಿಸ್ತೇನೋ ಕಾಣೊದಿಲ್ಲೋ ನೋಡಬೇಕು ಹಾಗಾದರೆ ||
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...