ತಂತಾನೆ ನೋಡಿಕೊಂಡರೆ?

ಎಲೆಲ್ಲೆಲ್ಲಿ ನೋಡಿದರೂ ಎಲ್ಲಾರೂ ಕಾಣಿಸ್ತಾರೆ, ನಾನೇ ಮಾತ್ರ ಕಾಣ್ಸೋದಿಲ್ಲ|
ನಾನಿದ್ದದ್ದೇ ಸುಳ್ಳೋ? ಹೇಳಾಕಿಲ್ಲ.
ಇದ್ದೇನೆಂದ್ರೂ-ಇದ್ದಾಂಗಿಲ್ಲ| ಏಸು ವರ್ಷ ಕಳೆದ್ರೂ ಬೆಳದ್ಹಾಂಗಿಲ್ಲ |
ಬುದ್ಧಿಯಂತೂ ಬರಲೇ ಇಲ್ಲ| ಹೋಗಿದ್ರೇ ಬರಬೇಕಲ್ಲ|
ಹೋದ ಬುದ್ಧಿ ತಿಂದ ಮುದ್ದಿ ಬರೋದುಂಟೇ?
ಬರತಽದಂದ್ರೆ ಬೇರೇ ದಾರಿಗುಂಟೇ ||

ಹೀಚು ಹೋಗಿ ಮಿಡಿ ಆಯ್ತು | ಕಾಯಿ ಹೋಗಿ ಹಣ್ಣು ಆಯ್ತು |
ಬದಲೀ ಬಣ್ಣೇ ಬರಲಿಲ್ಲ| ರುಚಿಯೇನೋ ತರಲಿಲ್ಲ|
ಹಳೇದಾದ್ರು ಹುಳಿ ಹೋಗಲಿಲ್ಲ | ಪಾಡುಗೊಂಡು ಮಧುರಾಗಲಿಲ್ಲ|
ಹಣ್ಣೆಂದು ಕರೆಯೋದ್ಹ್ಯಾಂಗ ಹುಣಸೀಕಾಯಿಗೆ ?
ಕಸುಕಿದ್ರು ಹುಣಸಿನಕಾಯಿ, ಹಣ್ಣಾದ್ರು ಹುಣಸಿನಕಾಯಿ
ಯಾಕೆಂದು ಕೇಳಬೇಡಿ ಹಾಕಿನೋಡಿ ಬಾಯಿಗೆ! ||

ಇದ್ದ ಗುಣ ಇದ್ದೇ ಇತ್ತು | ಬಣ್ಣ ಮಾತ್ರ ಬದಲಾಗಿತ್ತು|
ಸಕ್ರಿಮಾತ್ರ ಬೆರೀಲಿಲ್ಲ ಹುಳಿಹುಳಿ ಜೊಂಡಿಗೆ|
ಮೈ ಆಯ್ತು ಮೆತ್ತಗೆ | ಆಯುಷ್ಯ ಬಂತು ಹತ್ತೆಗೆ|
ಗುಣಾ ಹೋಗದಿದ್ರೆ ಈಡುಮಾಡಬೇಕು ಗುಂಡಿಗೆ ||

ತೆಂಗಿನಕಾಯಿ ಇನ್ನೊಂದು ಜಾತಿ | ದಿನಗಳೆದಂತೆ ಬಿರುಸಾಗತೈತಿ |
ಅಂಬವರುಂಟು ಹುಣಸಿಹಣ್ಣು | ಅಂದವರುಂಟೆ ತೆಂಗಿನಹಣ್ಣು? ||

ತೊಂಗಲಿಲ್ಲ ತಿಸಿಲಿಲ್ಲ ಮರ ಬೆಳೀತು ಮುಗಿಲಿಗೆ |
ಇಳಿದು ಬರುವ ಎಣಿಕೀ ಹಾಕದೆ, ಕಾಯಿ ಏರಿತು ಚಂಡಿಗೆ |
ನೇಣುಹಾಕಿ ನೇತಾಡುವನು ಜಿಗಿದು ಬಿದ್ರೆ ಭೂಮಿಗೆ|
ಸೀಳಿ ಹೋಗಬೇಕು, ಸೋರಿ ಹೋಗಬೇಕು ಸಾವಿಗೆ ||

ತಿನ್ನೋದೇನು ಸುಲಭವಲ್ಲ ತೆಂಗಿನಕಾಯಿ
ಜುಟ್ಟು ಕಿತ್ತಿ ಪರಟೇ ಒಡೆದು ತಗೀಬೇಕು ಬಾಯಿ ||
ಹಲ್ಲು ತಗೀದಿದ್ರೆ ಆಗಬೇಕಾಗ್ತಾದ ನಾಯಿ
ಹೈರಾಣಕಂಜಿ ಬಿಡೂದಕ್ಕಿಂತ ಹೆಚ್ಚುತಿಂದು ಸಾಯಿ ||

ತೆಂಗಿನ ಹಾಗೆ ಬಿರುಸು. ಹುಣಿಸೆಯಂತೆ ಹುಳುಚು |
ನನ್ನ ರುಚಿ ನನಗೇ ಬೇಡ | ಹೆರವರಿಗಂತೂ ಮೊದಲೇ ಬೇಡ ||
ಇದ್ದ ಕಣ್ಣು ಮುಚ್ಚಿಕೊಂಡು ತಂತಾನೆ ನೋಡಿಕೊಂಡರೆ
ಕಾಣಿಸ್ತೇನೋ ಕಾಣೊದಿಲ್ಲೋ ನೋಡಬೇಕು ಹಾಗಾದರೆ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನವಾಬಿ ಮಲ್ಲಿಗಿ ಹೂವಿನ ಗಜರಾ
Next post ನಗೆ ಡಂಗುರ – ೬೧

ಸಣ್ಣ ಕತೆ

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

cheap jordans|wholesale air max|wholesale jordans|wholesale jewelry|wholesale jerseys