Home / ಕವನ / ಕವಿತೆ / ತಂತಾನೆ ನೋಡಿಕೊಂಡರೆ?

ತಂತಾನೆ ನೋಡಿಕೊಂಡರೆ?

ಎಲೆಲ್ಲೆಲ್ಲಿ ನೋಡಿದರೂ ಎಲ್ಲಾರೂ ಕಾಣಿಸ್ತಾರೆ, ನಾನೇ ಮಾತ್ರ ಕಾಣ್ಸೋದಿಲ್ಲ|
ನಾನಿದ್ದದ್ದೇ ಸುಳ್ಳೋ? ಹೇಳಾಕಿಲ್ಲ.
ಇದ್ದೇನೆಂದ್ರೂ-ಇದ್ದಾಂಗಿಲ್ಲ| ಏಸು ವರ್ಷ ಕಳೆದ್ರೂ ಬೆಳದ್ಹಾಂಗಿಲ್ಲ |
ಬುದ್ಧಿಯಂತೂ ಬರಲೇ ಇಲ್ಲ| ಹೋಗಿದ್ರೇ ಬರಬೇಕಲ್ಲ|
ಹೋದ ಬುದ್ಧಿ ತಿಂದ ಮುದ್ದಿ ಬರೋದುಂಟೇ?
ಬರತಽದಂದ್ರೆ ಬೇರೇ ದಾರಿಗುಂಟೇ ||

ಹೀಚು ಹೋಗಿ ಮಿಡಿ ಆಯ್ತು | ಕಾಯಿ ಹೋಗಿ ಹಣ್ಣು ಆಯ್ತು |
ಬದಲೀ ಬಣ್ಣೇ ಬರಲಿಲ್ಲ| ರುಚಿಯೇನೋ ತರಲಿಲ್ಲ|
ಹಳೇದಾದ್ರು ಹುಳಿ ಹೋಗಲಿಲ್ಲ | ಪಾಡುಗೊಂಡು ಮಧುರಾಗಲಿಲ್ಲ|
ಹಣ್ಣೆಂದು ಕರೆಯೋದ್ಹ್ಯಾಂಗ ಹುಣಸೀಕಾಯಿಗೆ ?
ಕಸುಕಿದ್ರು ಹುಣಸಿನಕಾಯಿ, ಹಣ್ಣಾದ್ರು ಹುಣಸಿನಕಾಯಿ
ಯಾಕೆಂದು ಕೇಳಬೇಡಿ ಹಾಕಿನೋಡಿ ಬಾಯಿಗೆ! ||

ಇದ್ದ ಗುಣ ಇದ್ದೇ ಇತ್ತು | ಬಣ್ಣ ಮಾತ್ರ ಬದಲಾಗಿತ್ತು|
ಸಕ್ರಿಮಾತ್ರ ಬೆರೀಲಿಲ್ಲ ಹುಳಿಹುಳಿ ಜೊಂಡಿಗೆ|
ಮೈ ಆಯ್ತು ಮೆತ್ತಗೆ | ಆಯುಷ್ಯ ಬಂತು ಹತ್ತೆಗೆ|
ಗುಣಾ ಹೋಗದಿದ್ರೆ ಈಡುಮಾಡಬೇಕು ಗುಂಡಿಗೆ ||

ತೆಂಗಿನಕಾಯಿ ಇನ್ನೊಂದು ಜಾತಿ | ದಿನಗಳೆದಂತೆ ಬಿರುಸಾಗತೈತಿ |
ಅಂಬವರುಂಟು ಹುಣಸಿಹಣ್ಣು | ಅಂದವರುಂಟೆ ತೆಂಗಿನಹಣ್ಣು? ||

ತೊಂಗಲಿಲ್ಲ ತಿಸಿಲಿಲ್ಲ ಮರ ಬೆಳೀತು ಮುಗಿಲಿಗೆ |
ಇಳಿದು ಬರುವ ಎಣಿಕೀ ಹಾಕದೆ, ಕಾಯಿ ಏರಿತು ಚಂಡಿಗೆ |
ನೇಣುಹಾಕಿ ನೇತಾಡುವನು ಜಿಗಿದು ಬಿದ್ರೆ ಭೂಮಿಗೆ|
ಸೀಳಿ ಹೋಗಬೇಕು, ಸೋರಿ ಹೋಗಬೇಕು ಸಾವಿಗೆ ||

ತಿನ್ನೋದೇನು ಸುಲಭವಲ್ಲ ತೆಂಗಿನಕಾಯಿ
ಜುಟ್ಟು ಕಿತ್ತಿ ಪರಟೇ ಒಡೆದು ತಗೀಬೇಕು ಬಾಯಿ ||
ಹಲ್ಲು ತಗೀದಿದ್ರೆ ಆಗಬೇಕಾಗ್ತಾದ ನಾಯಿ
ಹೈರಾಣಕಂಜಿ ಬಿಡೂದಕ್ಕಿಂತ ಹೆಚ್ಚುತಿಂದು ಸಾಯಿ ||

ತೆಂಗಿನ ಹಾಗೆ ಬಿರುಸು. ಹುಣಿಸೆಯಂತೆ ಹುಳುಚು |
ನನ್ನ ರುಚಿ ನನಗೇ ಬೇಡ | ಹೆರವರಿಗಂತೂ ಮೊದಲೇ ಬೇಡ ||
ಇದ್ದ ಕಣ್ಣು ಮುಚ್ಚಿಕೊಂಡು ತಂತಾನೆ ನೋಡಿಕೊಂಡರೆ
ಕಾಣಿಸ್ತೇನೋ ಕಾಣೊದಿಲ್ಲೋ ನೋಡಬೇಕು ಹಾಗಾದರೆ ||
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...