Home / ಕವನ / ಅನುವಾದ / ಆಸ್ಪತ್ರೆಯಲ್ಲಿ

ಆಸ್ಪತ್ರೆಯಲ್ಲಿ

ಮೂಲ: ಜಯ ಗೋಸ್ವಾಮಿ

ಸ್ವಪ್ನಮೋಹಿತನಂತೆ ಸಾವನ್ನೂ ಬದಿಗಿಟ್ಟು
ನೀನು ನಿದ್ರಿಸುತ್ತಿರುವೆ
ನಿದ್ದೆ, ಎಚ್ಚರ, ಮತ್ತೆ ನಿದ್ದೆ ಎರಡೂ ನೆಲೆಗೆ
ಹೊರಳುತ್ತಲೇ ಇರುವೆ.
ನಾವು ಬಂದಿದ್ದೇವೆ ನಿನ್ನ ಕಾಣುವುದಕ್ಕೆ,
ನಿನ್ನ ಮಕ್ಕಳೊ ನಾವು
ಓ ಅರಸುಕುವರ, ಇದು ನಮ್ಮ ಭಾಗ್ಯ.

ನೀನು ಯುವಕನಲ್ಲ, ಇಲ್ಲಿ ಯುವಕರೆ ಇಲ್ಲ,
ಹೆಣ್ಣುಗಳ ತೋಳಲ್ಲಿ ತೋಳಿಟ್ಟು ಅವರೆಲ್ಲೂ
ಅಲೆಯುತ್ತಿದ್ದಾರೆ
ಮಳೆ ಸುರಿಯುವುದು ಸಂಜೆ ಬಾನೇ ಕಳಚಿದ ಹಾಗೆ,
ಯಾರೂ ಇಲ್ಲ ಇಲ್ಲಿ, ಪ್ರೀತಿಮಾತಾಡಲು
ಖಾಯಿಲೆ ಬಿದ್ದ ಕವಿಗೆ.

ಕಾಯಿಲೆಯೊ ಅಥವಾ ಸ್ವಪ್ನಮೋಹಿತನೊ?
ಮರುಳಾದಂತಿದೆ ಅವನು ಕನಸುಗಳಿಗೆ.

ಹಿರಿಯ ವ್ಯಕ್ತಿತ್ವವೊಂದು ಕನಸಿನುರಿಯಲ್ಲಿ ಬಿದ್ದು
ಸುಟ್ಟುಹೋಗುತ್ತಿದೆ,
ಆದರಿನ್ನೂ ನೀನು ಸ್ವಪ್ನಮಂತ್ರಗಳಲ್ಲಿ
ಅರ್ಥವೇನನ್ನೋ ಕಾಣುತ್ತಿರುವೆ.
ಎಲ್ಲ ವ್ಯಾಧಿಗಳನ್ನೂ ಪೃಥ್ವಿಯಾಚೆಗೆ ನಾವು ಗುಡಿಸಿಬಿಡುವಂತಾಗಲಿ,
ಎಲ್ಲ ವ್ಯಾಧಿಗಳೂ ಇಲ್ಲಿಂದ ತೊಲಗಲಿ.

ನಿಧಾನ ಮಳೆ ನಿಲ್ಲುವುದು, ಬರುತ್ತಾರೆ ಒಳಗೆ
ವರ್ಚಸ್ವೀ ತರುಣರು,
ಅಲ್ಲಿ ಕಾದಿದೆ ಅವರಿಗೊಂದು ಬೆರಗು;
ಆಗಷ್ಟೆ ಮುಗಿಸಿಟ್ಟ ಕವನ, ಬದಿಯಲ್ಲೇ
ಸಿಹಿತಿಂಡಿ ಪೊಟ್ಟಣ,
ಪಕ್ಕದಲ್ಲೇ ಒಂದು ಮುಗ್ಧ ಮಗುವಿನ ಹಾಗೆ
ನಿದ್ರಿಸುತ್ತಿದ್ದಾನೆ ವಿನಯ ಮಜುಂದಾರ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...