Home / ಕವನ / ಅನುವಾದ / ಆಸ್ಪತ್ರೆಯಲ್ಲಿ

ಆಸ್ಪತ್ರೆಯಲ್ಲಿ

ಮೂಲ: ಜಯ ಗೋಸ್ವಾಮಿ

ಸ್ವಪ್ನಮೋಹಿತನಂತೆ ಸಾವನ್ನೂ ಬದಿಗಿಟ್ಟು
ನೀನು ನಿದ್ರಿಸುತ್ತಿರುವೆ
ನಿದ್ದೆ, ಎಚ್ಚರ, ಮತ್ತೆ ನಿದ್ದೆ ಎರಡೂ ನೆಲೆಗೆ
ಹೊರಳುತ್ತಲೇ ಇರುವೆ.
ನಾವು ಬಂದಿದ್ದೇವೆ ನಿನ್ನ ಕಾಣುವುದಕ್ಕೆ,
ನಿನ್ನ ಮಕ್ಕಳೊ ನಾವು
ಓ ಅರಸುಕುವರ, ಇದು ನಮ್ಮ ಭಾಗ್ಯ.

ನೀನು ಯುವಕನಲ್ಲ, ಇಲ್ಲಿ ಯುವಕರೆ ಇಲ್ಲ,
ಹೆಣ್ಣುಗಳ ತೋಳಲ್ಲಿ ತೋಳಿಟ್ಟು ಅವರೆಲ್ಲೂ
ಅಲೆಯುತ್ತಿದ್ದಾರೆ
ಮಳೆ ಸುರಿಯುವುದು ಸಂಜೆ ಬಾನೇ ಕಳಚಿದ ಹಾಗೆ,
ಯಾರೂ ಇಲ್ಲ ಇಲ್ಲಿ, ಪ್ರೀತಿಮಾತಾಡಲು
ಖಾಯಿಲೆ ಬಿದ್ದ ಕವಿಗೆ.

ಕಾಯಿಲೆಯೊ ಅಥವಾ ಸ್ವಪ್ನಮೋಹಿತನೊ?
ಮರುಳಾದಂತಿದೆ ಅವನು ಕನಸುಗಳಿಗೆ.

ಹಿರಿಯ ವ್ಯಕ್ತಿತ್ವವೊಂದು ಕನಸಿನುರಿಯಲ್ಲಿ ಬಿದ್ದು
ಸುಟ್ಟುಹೋಗುತ್ತಿದೆ,
ಆದರಿನ್ನೂ ನೀನು ಸ್ವಪ್ನಮಂತ್ರಗಳಲ್ಲಿ
ಅರ್ಥವೇನನ್ನೋ ಕಾಣುತ್ತಿರುವೆ.
ಎಲ್ಲ ವ್ಯಾಧಿಗಳನ್ನೂ ಪೃಥ್ವಿಯಾಚೆಗೆ ನಾವು ಗುಡಿಸಿಬಿಡುವಂತಾಗಲಿ,
ಎಲ್ಲ ವ್ಯಾಧಿಗಳೂ ಇಲ್ಲಿಂದ ತೊಲಗಲಿ.

ನಿಧಾನ ಮಳೆ ನಿಲ್ಲುವುದು, ಬರುತ್ತಾರೆ ಒಳಗೆ
ವರ್ಚಸ್ವೀ ತರುಣರು,
ಅಲ್ಲಿ ಕಾದಿದೆ ಅವರಿಗೊಂದು ಬೆರಗು;
ಆಗಷ್ಟೆ ಮುಗಿಸಿಟ್ಟ ಕವನ, ಬದಿಯಲ್ಲೇ
ಸಿಹಿತಿಂಡಿ ಪೊಟ್ಟಣ,
ಪಕ್ಕದಲ್ಲೇ ಒಂದು ಮುಗ್ಧ ಮಗುವಿನ ಹಾಗೆ
ನಿದ್ರಿಸುತ್ತಿದ್ದಾನೆ ವಿನಯ ಮಜುಂದಾರ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...