Home / ಕವನ / ಕವಿತೆ / ಎಲ್ಲಿಂದಲೋ ಬಂದವರು

ಎಲ್ಲಿಂದಲೋ ಬಂದವರು

ಮಹಾನಗರಗಳ ಕಟ್ಟುವವರು
ಬೀದಿಯಲ್ಲಿ ಮಲಗುವವರು
ಮನೆಮನೆಯ ಮನೆಗೆಲಸ ಮಾಡಿ
ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಂಡವರು
ಎಲ್ಲಿಂದಲೋ ಬಂದವರು
ಎಲ್ಲಿಯೂ ನೆಲೆ ಇಲ್ಲದವರು.

ತರಕಾರಿ, ಬೇಳೆ, ಕಾಳು, ಅಕ್ಕಿ ಬೆಲೆ ಗಗನಕ್ಕೇರಿ
ಕೊಳ್ಳಲು ಸಾಧ್ಯವಾಗದ ಸ್ಥಿತಿಯವರು
ಮಳೆಯೂ ಇಲ್ಲ ಬೆಳೆಯೂ ಇಲ್ಲದ ಬೆಂಗಾಡಿನಿಂದ
ಉತ್ತರದ ಗಾಳಿಯಲ್ಲಿ ಗುಳೆ ಬಂದ ಇವರು
ಎಲ್ಲಿಂದಲೋ ಬಂದವರು
ಎಲ್ಲಿಯೂ ನೆಲೆ ಇಲ್ಲದವರು.

ಮನೆಯ ಗಚ್ಚು, ಗಾರೆ ಕೆಲಸ ಮುಗಿವವರೆಗೂ
ಅಲ್ಲಿಯೇ ಠಿಕಾಣಿ ಹೂಡಿ ಮಕ್ಕಳು ಬೀದಿಪಾಲು
ಇವರ ಹೆಣ್ಣು ಮಗು ಕಾಣೆಯಾಗುತ್ತದೆ
ಹರೆಯದ ಹೆಣ್ಣು ಹುಡುಗಿಯೂ ಕಾಣೆಯಾಗುತ್ತಾಳೆ
ಪೋಲೀಸರಿಗೆ ವರದಿಯೂ ಆಗುವುದಿಲ್ಲ
ಎಲ್ಲಿಂದಲೋ ಬಂದವರು
ಎಲ್ಲಿಯೂ ನೆಲೆ ಇಲ್ಲದವರು.

ಪುರುಷರಿಗೂ ಮೀರಿಸುವ ದುಡಿಮೆಯವರು
ಇಟ್ಟಿಗೆ, ಸಿಮೆಂಟು, ಕಲ್ಲು, ಸಲಕರಣೆ ಎತ್ತುವವರು
ಗೇಣು ಹೊಟ್ಟೆಗಾಗಿ ಎಲ್ಲ ಸಹಾಸ ಮಾಡುವವರು
ಇವರಿಗಿಲ್ಲ ಪೆನ್ ಷನ್, ರಿಟಾಯರ್ಮೆಂಟುಗಳು
ಇವರೆಂದಿಗೂ ಸಾಹಸ ಪ್ರಶಸ್ತಿ ಪಡೆದಲಾರದವರು
ಎಲ್ಲಿಂದಲೋ ಬಂದವರು
ಎಲ್ಲಿಯೂ ನೆಲೆ ಇಲ್ಲದವರು.

ಬಯಲು ಆಲಯದೊಳಗೆ ನೆಲೆ ನಿಂತು
ಶೌಚ, ಬಚ್ಚಲುಗಳಿಲ್ಲದ ಟೆಂಟಿನಲ್ಲಿ ಬದುಕು
ಇವರಿಗಿಲ್ಲ ಆಧಾರ, ರೇಶನ್, ಚುನಾವಣಾ ಕಾರ್ಡುಗಳು
ಈ ಕಟ್ಟಡ ಮುಗಿದ ಬಳಿಕ ಮತ್ತೊಂದು
ಅಲೆಮಾರಿಗಳಿಗಿಲ್ಲ ನೆಮ್ಮದಿಯ ನಾಳೆಗಳು.
ಎಲ್ಲಿಂದಲೋ ಬಂದವರು
ಎಲ್ಲಿಯೂ ನೆಲೆ ಇಲ್ಲದವರು
*****

Tagged:

Leave a Reply

Your email address will not be published. Required fields are marked *

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...