Home / ಕವನ / ಕವಿತೆ / ಎಲ್ಲಿಂದಲೋ ಬಂದವರು

ಎಲ್ಲಿಂದಲೋ ಬಂದವರು

ಮಹಾನಗರಗಳ ಕಟ್ಟುವವರು
ಬೀದಿಯಲ್ಲಿ ಮಲಗುವವರು
ಮನೆಮನೆಯ ಮನೆಗೆಲಸ ಮಾಡಿ
ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಂಡವರು
ಎಲ್ಲಿಂದಲೋ ಬಂದವರು
ಎಲ್ಲಿಯೂ ನೆಲೆ ಇಲ್ಲದವರು.

ತರಕಾರಿ, ಬೇಳೆ, ಕಾಳು, ಅಕ್ಕಿ ಬೆಲೆ ಗಗನಕ್ಕೇರಿ
ಕೊಳ್ಳಲು ಸಾಧ್ಯವಾಗದ ಸ್ಥಿತಿಯವರು
ಮಳೆಯೂ ಇಲ್ಲ ಬೆಳೆಯೂ ಇಲ್ಲದ ಬೆಂಗಾಡಿನಿಂದ
ಉತ್ತರದ ಗಾಳಿಯಲ್ಲಿ ಗುಳೆ ಬಂದ ಇವರು
ಎಲ್ಲಿಂದಲೋ ಬಂದವರು
ಎಲ್ಲಿಯೂ ನೆಲೆ ಇಲ್ಲದವರು.

ಮನೆಯ ಗಚ್ಚು, ಗಾರೆ ಕೆಲಸ ಮುಗಿವವರೆಗೂ
ಅಲ್ಲಿಯೇ ಠಿಕಾಣಿ ಹೂಡಿ ಮಕ್ಕಳು ಬೀದಿಪಾಲು
ಇವರ ಹೆಣ್ಣು ಮಗು ಕಾಣೆಯಾಗುತ್ತದೆ
ಹರೆಯದ ಹೆಣ್ಣು ಹುಡುಗಿಯೂ ಕಾಣೆಯಾಗುತ್ತಾಳೆ
ಪೋಲೀಸರಿಗೆ ವರದಿಯೂ ಆಗುವುದಿಲ್ಲ
ಎಲ್ಲಿಂದಲೋ ಬಂದವರು
ಎಲ್ಲಿಯೂ ನೆಲೆ ಇಲ್ಲದವರು.

ಪುರುಷರಿಗೂ ಮೀರಿಸುವ ದುಡಿಮೆಯವರು
ಇಟ್ಟಿಗೆ, ಸಿಮೆಂಟು, ಕಲ್ಲು, ಸಲಕರಣೆ ಎತ್ತುವವರು
ಗೇಣು ಹೊಟ್ಟೆಗಾಗಿ ಎಲ್ಲ ಸಹಾಸ ಮಾಡುವವರು
ಇವರಿಗಿಲ್ಲ ಪೆನ್ ಷನ್, ರಿಟಾಯರ್ಮೆಂಟುಗಳು
ಇವರೆಂದಿಗೂ ಸಾಹಸ ಪ್ರಶಸ್ತಿ ಪಡೆದಲಾರದವರು
ಎಲ್ಲಿಂದಲೋ ಬಂದವರು
ಎಲ್ಲಿಯೂ ನೆಲೆ ಇಲ್ಲದವರು.

ಬಯಲು ಆಲಯದೊಳಗೆ ನೆಲೆ ನಿಂತು
ಶೌಚ, ಬಚ್ಚಲುಗಳಿಲ್ಲದ ಟೆಂಟಿನಲ್ಲಿ ಬದುಕು
ಇವರಿಗಿಲ್ಲ ಆಧಾರ, ರೇಶನ್, ಚುನಾವಣಾ ಕಾರ್ಡುಗಳು
ಈ ಕಟ್ಟಡ ಮುಗಿದ ಬಳಿಕ ಮತ್ತೊಂದು
ಅಲೆಮಾರಿಗಳಿಗಿಲ್ಲ ನೆಮ್ಮದಿಯ ನಾಳೆಗಳು.
ಎಲ್ಲಿಂದಲೋ ಬಂದವರು
ಎಲ್ಲಿಯೂ ನೆಲೆ ಇಲ್ಲದವರು
*****

Tagged:

Leave a Reply

Your email address will not be published. Required fields are marked *

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...