Home / ಕವನ / ಕವಿತೆ / ಎಲ್ಲಿಂದಲೋ ಬಂದವರು

ಎಲ್ಲಿಂದಲೋ ಬಂದವರು

ಮಹಾನಗರಗಳ ಕಟ್ಟುವವರು
ಬೀದಿಯಲ್ಲಿ ಮಲಗುವವರು
ಮನೆಮನೆಯ ಮನೆಗೆಲಸ ಮಾಡಿ
ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಂಡವರು
ಎಲ್ಲಿಂದಲೋ ಬಂದವರು
ಎಲ್ಲಿಯೂ ನೆಲೆ ಇಲ್ಲದವರು.

ತರಕಾರಿ, ಬೇಳೆ, ಕಾಳು, ಅಕ್ಕಿ ಬೆಲೆ ಗಗನಕ್ಕೇರಿ
ಕೊಳ್ಳಲು ಸಾಧ್ಯವಾಗದ ಸ್ಥಿತಿಯವರು
ಮಳೆಯೂ ಇಲ್ಲ ಬೆಳೆಯೂ ಇಲ್ಲದ ಬೆಂಗಾಡಿನಿಂದ
ಉತ್ತರದ ಗಾಳಿಯಲ್ಲಿ ಗುಳೆ ಬಂದ ಇವರು
ಎಲ್ಲಿಂದಲೋ ಬಂದವರು
ಎಲ್ಲಿಯೂ ನೆಲೆ ಇಲ್ಲದವರು.

ಮನೆಯ ಗಚ್ಚು, ಗಾರೆ ಕೆಲಸ ಮುಗಿವವರೆಗೂ
ಅಲ್ಲಿಯೇ ಠಿಕಾಣಿ ಹೂಡಿ ಮಕ್ಕಳು ಬೀದಿಪಾಲು
ಇವರ ಹೆಣ್ಣು ಮಗು ಕಾಣೆಯಾಗುತ್ತದೆ
ಹರೆಯದ ಹೆಣ್ಣು ಹುಡುಗಿಯೂ ಕಾಣೆಯಾಗುತ್ತಾಳೆ
ಪೋಲೀಸರಿಗೆ ವರದಿಯೂ ಆಗುವುದಿಲ್ಲ
ಎಲ್ಲಿಂದಲೋ ಬಂದವರು
ಎಲ್ಲಿಯೂ ನೆಲೆ ಇಲ್ಲದವರು.

ಪುರುಷರಿಗೂ ಮೀರಿಸುವ ದುಡಿಮೆಯವರು
ಇಟ್ಟಿಗೆ, ಸಿಮೆಂಟು, ಕಲ್ಲು, ಸಲಕರಣೆ ಎತ್ತುವವರು
ಗೇಣು ಹೊಟ್ಟೆಗಾಗಿ ಎಲ್ಲ ಸಹಾಸ ಮಾಡುವವರು
ಇವರಿಗಿಲ್ಲ ಪೆನ್ ಷನ್, ರಿಟಾಯರ್ಮೆಂಟುಗಳು
ಇವರೆಂದಿಗೂ ಸಾಹಸ ಪ್ರಶಸ್ತಿ ಪಡೆದಲಾರದವರು
ಎಲ್ಲಿಂದಲೋ ಬಂದವರು
ಎಲ್ಲಿಯೂ ನೆಲೆ ಇಲ್ಲದವರು.

ಬಯಲು ಆಲಯದೊಳಗೆ ನೆಲೆ ನಿಂತು
ಶೌಚ, ಬಚ್ಚಲುಗಳಿಲ್ಲದ ಟೆಂಟಿನಲ್ಲಿ ಬದುಕು
ಇವರಿಗಿಲ್ಲ ಆಧಾರ, ರೇಶನ್, ಚುನಾವಣಾ ಕಾರ್ಡುಗಳು
ಈ ಕಟ್ಟಡ ಮುಗಿದ ಬಳಿಕ ಮತ್ತೊಂದು
ಅಲೆಮಾರಿಗಳಿಗಿಲ್ಲ ನೆಮ್ಮದಿಯ ನಾಳೆಗಳು.
ಎಲ್ಲಿಂದಲೋ ಬಂದವರು
ಎಲ್ಲಿಯೂ ನೆಲೆ ಇಲ್ಲದವರು
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...