Home / ಕವನ / ಕವಿತೆ / ಗೋರಿಗಳ ಸ್ವಗತ

ಗೋರಿಗಳ ಸ್ವಗತ

ಮಮ್ತಾಜ್ ನಾನೆಂತಹ ಬದ್‌ನಸೀಬ್* ನೋಡು
ನೀನು ಬಹಳ ಪುಣ್ಯವಂತೆ
ಬಾದಷಹ ಷಹಜಹಾನನು
ನಿನ್ನ ಅಮರ ಸೌಂದರ್ಯದ ಸ್ಮೃತಿಗೆ
ಸರಿಸಾಟಿಯಿಲ್ಲದ ಸುಂದರ ಇಮಾರತ್ತು ಕಟ್ಟಿಸಿದ.

ಶಹರ ಪಟ್ಟಣಗಳು ನರಕಕೂಪಗಳಾಗಿ
ನಿನ್ನ ಸಮಾಧಿಗೆ ಸಂಗಮರಮರಿಯ
ಹಾಲಿನಂತಹ ತಂಪು ಬೆಳದಿಂಗಳು
ನನ್ನ ಗೋರಿಯ ಸುತ್ತಲೂ ನೋಡು
ನಿಶಾನೆ ಅಳಿಸುತ್ತ ಕತ್ತಲ್ಲನ್ನಪ್ಪಿ ಮಲಗಿದೆ.

ನನ್ನದೆಂತಹ ಖೋಟಾ ನಸೀಬು ನೋಡು
ಸುತ್ತಲೂ ಮುಳ್ಳು ಕಂಟಿ ಗಿಡಗಳು
ನಿನಗೆ ಸಿಕ್ಕ ಸವಲತ್ತು, ದವಲತ್ತು ನನಗೆಲ್ಲಿ
ದಿನವೂ ರೊಟ್ಟಿಗಾಗಿ ಹೋರಾಡುತ್ತಲೇ ಸತ್ತೆ
ಹೆಣ ಹುಗಿಯಲು ಹಣ ಎಲ್ಲಿಂದ ತರಲಿ?
ನಿನ್ನ ಸಮಾಧಿಯನ್ನು ವಿಶ್ವವೇ ನೋಡುತ್ತಿದೆ

ನನ್ನ ಗೋರಿಯ ಗುರುತು ಹೇಗೆ ಉಳಿಸಲಿ?
ನಿನ್ನ ಸಮಾಧಿಯ ಮೇಲೆ ಗಲೀಫ್, ಹೂ, ಚಾದರ
ನನ್ನ ಗೋರಿ ಮೇಲೆ ಒಂದು ದಳವೂ ಇಲ್ಲ
ವಾರಸುದಾರರಿಲ್ಲದ ಪರದೇಶಿ ಗೋರಿ ನನ್ನದು.

ಬಡವರ ಗೋರಿಗೆ ಮಕಮಲ್ಲು ಚಾದರಿಲ್ಲ
ಗುರುತಿನ ಕಲ್ಲಿಲ್ಲ, ನೆರಳಿನ ಮರವಿಲ್ಲ
ಮುಮ್ತಾಜ್ ನೀನೆ ಪುಣ್ಯವಂತೆ ನೋಡು
ತಂಪುಬಿಳುಪಿನ ಸಂಗಮರಮರಿಯ ಛಾವಣಿ
ಕೆತ್ತನೆಯ ಸುಂದರ ಸಮಾಧಿ ನಿನ್ನದು.
ನನ್ನ ಹಾಳುಬಿದ್ದ ಸಮಾಧಿಗೆ ಸುಣ್ಣಬಣ್ಣವಿಲ್ಲ
ಒಣಗಿದ ಹೂವಿಗೂ ಗತಿಯಿಲ್ಲ ನೋಡು.

ನನ್ನ ಕಣ್ಣಿನಿಂದ ಉದುರಿದ ಉಪ್ಪು ನೀರಿಗೆ
ನರಕದ ನಿಗಿನಿಗಿ ಕೆಂಡದ ಬಿಸಿ ಬೂದಿಯಾಯ್ತು.
ಎಲ್ಲರ ಗೋರಿ ಖಬರಸ್ತಾನದಲ್ಲಿದ್ದರೆ ನಿನ್ನದು ಮಾತ್ರ
ಸುಂದರ ಯಮುನೆಯ ತಟದಲ್ಲಿದೆ.
ವಾರಸುದಾರರಿಲ್ಲದ ನನ್ನ ಪರದೇಶಿ ಗೋರಿಗೆ
ಅಸಂಖ್ಯಾತ ಬಡವರ ಕಣ್ಣೀರುಗಳೇ ಕೊಡುಗೆ ನೋಡು.
*****
* ಖೊಟ್ಟಿ ಹಣೆಬರಹ

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...