Home / ಕವನ / ಕವಿತೆ / ಗೋರಿಗಳ ಸ್ವಗತ

ಗೋರಿಗಳ ಸ್ವಗತ

ಮಮ್ತಾಜ್ ನಾನೆಂತಹ ಬದ್‌ನಸೀಬ್* ನೋಡು
ನೀನು ಬಹಳ ಪುಣ್ಯವಂತೆ
ಬಾದಷಹ ಷಹಜಹಾನನು
ನಿನ್ನ ಅಮರ ಸೌಂದರ್ಯದ ಸ್ಮೃತಿಗೆ
ಸರಿಸಾಟಿಯಿಲ್ಲದ ಸುಂದರ ಇಮಾರತ್ತು ಕಟ್ಟಿಸಿದ.

ಶಹರ ಪಟ್ಟಣಗಳು ನರಕಕೂಪಗಳಾಗಿ
ನಿನ್ನ ಸಮಾಧಿಗೆ ಸಂಗಮರಮರಿಯ
ಹಾಲಿನಂತಹ ತಂಪು ಬೆಳದಿಂಗಳು
ನನ್ನ ಗೋರಿಯ ಸುತ್ತಲೂ ನೋಡು
ನಿಶಾನೆ ಅಳಿಸುತ್ತ ಕತ್ತಲ್ಲನ್ನಪ್ಪಿ ಮಲಗಿದೆ.

ನನ್ನದೆಂತಹ ಖೋಟಾ ನಸೀಬು ನೋಡು
ಸುತ್ತಲೂ ಮುಳ್ಳು ಕಂಟಿ ಗಿಡಗಳು
ನಿನಗೆ ಸಿಕ್ಕ ಸವಲತ್ತು, ದವಲತ್ತು ನನಗೆಲ್ಲಿ
ದಿನವೂ ರೊಟ್ಟಿಗಾಗಿ ಹೋರಾಡುತ್ತಲೇ ಸತ್ತೆ
ಹೆಣ ಹುಗಿಯಲು ಹಣ ಎಲ್ಲಿಂದ ತರಲಿ?
ನಿನ್ನ ಸಮಾಧಿಯನ್ನು ವಿಶ್ವವೇ ನೋಡುತ್ತಿದೆ

ನನ್ನ ಗೋರಿಯ ಗುರುತು ಹೇಗೆ ಉಳಿಸಲಿ?
ನಿನ್ನ ಸಮಾಧಿಯ ಮೇಲೆ ಗಲೀಫ್, ಹೂ, ಚಾದರ
ನನ್ನ ಗೋರಿ ಮೇಲೆ ಒಂದು ದಳವೂ ಇಲ್ಲ
ವಾರಸುದಾರರಿಲ್ಲದ ಪರದೇಶಿ ಗೋರಿ ನನ್ನದು.

ಬಡವರ ಗೋರಿಗೆ ಮಕಮಲ್ಲು ಚಾದರಿಲ್ಲ
ಗುರುತಿನ ಕಲ್ಲಿಲ್ಲ, ನೆರಳಿನ ಮರವಿಲ್ಲ
ಮುಮ್ತಾಜ್ ನೀನೆ ಪುಣ್ಯವಂತೆ ನೋಡು
ತಂಪುಬಿಳುಪಿನ ಸಂಗಮರಮರಿಯ ಛಾವಣಿ
ಕೆತ್ತನೆಯ ಸುಂದರ ಸಮಾಧಿ ನಿನ್ನದು.
ನನ್ನ ಹಾಳುಬಿದ್ದ ಸಮಾಧಿಗೆ ಸುಣ್ಣಬಣ್ಣವಿಲ್ಲ
ಒಣಗಿದ ಹೂವಿಗೂ ಗತಿಯಿಲ್ಲ ನೋಡು.

ನನ್ನ ಕಣ್ಣಿನಿಂದ ಉದುರಿದ ಉಪ್ಪು ನೀರಿಗೆ
ನರಕದ ನಿಗಿನಿಗಿ ಕೆಂಡದ ಬಿಸಿ ಬೂದಿಯಾಯ್ತು.
ಎಲ್ಲರ ಗೋರಿ ಖಬರಸ್ತಾನದಲ್ಲಿದ್ದರೆ ನಿನ್ನದು ಮಾತ್ರ
ಸುಂದರ ಯಮುನೆಯ ತಟದಲ್ಲಿದೆ.
ವಾರಸುದಾರರಿಲ್ಲದ ನನ್ನ ಪರದೇಶಿ ಗೋರಿಗೆ
ಅಸಂಖ್ಯಾತ ಬಡವರ ಕಣ್ಣೀರುಗಳೇ ಕೊಡುಗೆ ನೋಡು.
*****
* ಖೊಟ್ಟಿ ಹಣೆಬರಹ

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...