Home / ಲೇಖನ / ಇತರೆ / ಕುರ್-ಆನ್ ಕತೆ

ಕುರ್-ಆನ್ ಕತೆ

ಬಹಳಷ್ಟು ಜನರಿಗೆ ಕುರ್-ಆನ್ ಬಗ್ಗೆ ತಿಳಿದಿಲ್ಲ. ಎಲ್ಲರಿಗೆ ತಿಳಿದಿರುವ ಅವಶ್ಯಕತೆ ಏನಿದೆ? ಎಂದು ನೀವೆಲ್ಲ ಕೇಳಬಹುದೇನೋ….

ಹೌದು! ನಮ್ಮ ದೇಶ ಸರ್ವಧರ್ಮಗಳ ಸಮನ್ವಯ ದೇಶ. ಎಲ್ಲ ಧರ್ಮಗಳ ಸಾರ ಒಂದೇ. ಅದು ತಿಳಿದಿದ್ದರೆ ಒಳ್ಳೆಯದಲ್ಲವೇ?

ಲಂಡನ್‌ನ ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಇರುವ ಕುರ್-ಆನ್ ಹಸ್ತಪ್ರತಿಯೊಂದರ ತುಣುಕುಗಳು ಇಡೀ ವಿಶ್ವದಲ್ಲಿರುವ ತೀರಾ ಹಳೆಯ ಕುರ್-ಆನ್ ಹಸ್ತಪತಿಗಳಲ್ಲಿ ಒಂದು ಮೊತ್ತ ಮೊದಲನೆಯದೆಂದು ಜುಲೈ ೨೦೧೫ ರ ತಿಂಗಳಲ್ಲಿ ಸಂಶೋಧಕರು ಸತ್ಯವನ್ನು ಹೊರಗೆಡವಿದ್ದಾರೆ!

ಈ ಹಸ್ತ ಪ್ರತಿಯು ೧೩೭೦ ವರ್ಷಗಳಷ್ಟು ತೀರಾ ಹಳೆಯದಾಗಿದ್ದು ಪ್ರವಾದಿ ಮುಹಮ್ಮದ್ ಅವರ ಕಾಲಕ್ಕೆ ಸಂಪರ್ಕಕ್ಕೆ ತೀರಾ ನಿಕಟ ಸಂಬಂಧವಿದೆಯೆಂದು ಸಂಶೋಧಕರು ಪತ್ತೆ ಹಚ್ಚಿರುವರು. ಇದು ಚರ್‍ಮದ ಹಾಳೆಗಳನ್ನು ಹೊಂದಿದೆ. ಇದನ್ನು ಈಗಾಗಲೇ ಸಂಶೋಧಕರು ರೇಡಿಯೊ ಕಾರ್ಬನ್ ವಿಶ್ಲೇಷಣೆಗೆ ಒಳಪಡಿಸಿರುವರು.

ಹೀಗಾಗಿ ಈ ಹಸ್ತಪ್ರತಿಯು ೫೬೮ ರಿಂದ ೬೪೫ ನೆಯ ಇಸವಿಯಲ್ಲಿ ಸೃಷ್ಠಿಯಾಗಿದೆಯೆಂಬ ಒಮ್ಮತಕ್ಕೆ ಬಂದಿರುವರು.

ಈ ಸಂಶೋಧನೆಯು ನೂರಕ್ಕೆ ನೂರರಷ್ಟು ಖಚಿತವಾದುದ್ದು ನಿಖರವಾದುದ್ದು ಎಂದು ಇವರು ತಿಳಿಸಿರುವರು.

ಕಾರಣ- ಈ ಕುರ್ ಆನ್‌ನಲ್ಲಿ ಯಾವುದೇ ಸೇರ್ಪಡೆ ಬದಲಾವಣೆ ತಿದ್ದುಪಡಿ ಇರುವುದಿಲ್ಲ. ಮುಹಮ್ಮದ್ ಅವರ ದಿವ್ಯ ಸಂದೇಶವನ್ನೊಳಗೊಂಡಿರುವುದರಿಂದ ಇದೊಂದು ಪರಮ ಪವಿತ್ರ ಕುರ್‌ಆನ್ ಎಂದೇ ಖ್ಯಾತವಾಗಿರುವುದು.

ಇದರಲ್ಲಿ ಹಿಜಾಜಿ ಎಂದು ಕರೆಯಲಾಗುವ ಅರೇಬಿಕ್‌ ಆರಂಭಿಕ ಕಾಲದ ಲಿಪಿಯನ್ನು ಈ ಗ್ರಂಥದಲ್ಲಿ ಬಳಸಿರುವುದೊಂದು ವಿಶೇಷವಾಗಿದೆ.

ಇದು- ಬರ್ಮಿಂಗ್ ಹ್ಯಾಮ್ ವಿಶ್ವವಿದ್ಯಾಲಯದ ಮಧ್ಯಪ್ರಾಚ್ಯ ಹಸ್ತಪ್ರತಿ ವಿಭಾಗದಲ್ಲಿ ಈ ಮಹಾ ಕುರ್‌ಆನ್ ಹಸ್ತ ಪ್ರತಿ ಇದೆ. ಇದನ್ನು ಬಲು ಅಮೂಲ್ಯವಾಗಿ ಅಪರೂಪವೆಂಬಂತೆ ಸಂರಕ್ಷಿಸಿ ಇಡಲಾಗಿದೆ.

ಬರ್ಮಿಂಗ್ ಹ್ಯಾಮ್‌ಗೆ ಯಾರೇ ಹೋಗಲಿ ವಿಶೇಷವಾಗಿ ಮುಸ್ಲಿಮ್ ಬಾಂಧವರು ಭೇಟಿ ನೀಡಿದವರೆಲ್ಲ ತಪ್ಪದೆ, ಮರೆಯದೆ, ಅದನ್ನು ವೀಕ್ಷಿಸಿ, ಅದಕ್ಕೆ ನಮಸ್ಕರಿಸಿ ಬರುವರು.

ಇದು ಕುರ್‌-ಆನ್ ಮಹತ್ವವೆಂದರೆ…
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...