Home / ಲೇಖನ / ಇತರೆ / ಕುರ್-ಆನ್ ಕತೆ

ಕುರ್-ಆನ್ ಕತೆ

ಬಹಳಷ್ಟು ಜನರಿಗೆ ಕುರ್-ಆನ್ ಬಗ್ಗೆ ತಿಳಿದಿಲ್ಲ. ಎಲ್ಲರಿಗೆ ತಿಳಿದಿರುವ ಅವಶ್ಯಕತೆ ಏನಿದೆ? ಎಂದು ನೀವೆಲ್ಲ ಕೇಳಬಹುದೇನೋ….

ಹೌದು! ನಮ್ಮ ದೇಶ ಸರ್ವಧರ್ಮಗಳ ಸಮನ್ವಯ ದೇಶ. ಎಲ್ಲ ಧರ್ಮಗಳ ಸಾರ ಒಂದೇ. ಅದು ತಿಳಿದಿದ್ದರೆ ಒಳ್ಳೆಯದಲ್ಲವೇ?

ಲಂಡನ್‌ನ ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಇರುವ ಕುರ್-ಆನ್ ಹಸ್ತಪ್ರತಿಯೊಂದರ ತುಣುಕುಗಳು ಇಡೀ ವಿಶ್ವದಲ್ಲಿರುವ ತೀರಾ ಹಳೆಯ ಕುರ್-ಆನ್ ಹಸ್ತಪತಿಗಳಲ್ಲಿ ಒಂದು ಮೊತ್ತ ಮೊದಲನೆಯದೆಂದು ಜುಲೈ ೨೦೧೫ ರ ತಿಂಗಳಲ್ಲಿ ಸಂಶೋಧಕರು ಸತ್ಯವನ್ನು ಹೊರಗೆಡವಿದ್ದಾರೆ!

ಈ ಹಸ್ತ ಪ್ರತಿಯು ೧೩೭೦ ವರ್ಷಗಳಷ್ಟು ತೀರಾ ಹಳೆಯದಾಗಿದ್ದು ಪ್ರವಾದಿ ಮುಹಮ್ಮದ್ ಅವರ ಕಾಲಕ್ಕೆ ಸಂಪರ್ಕಕ್ಕೆ ತೀರಾ ನಿಕಟ ಸಂಬಂಧವಿದೆಯೆಂದು ಸಂಶೋಧಕರು ಪತ್ತೆ ಹಚ್ಚಿರುವರು. ಇದು ಚರ್‍ಮದ ಹಾಳೆಗಳನ್ನು ಹೊಂದಿದೆ. ಇದನ್ನು ಈಗಾಗಲೇ ಸಂಶೋಧಕರು ರೇಡಿಯೊ ಕಾರ್ಬನ್ ವಿಶ್ಲೇಷಣೆಗೆ ಒಳಪಡಿಸಿರುವರು.

ಹೀಗಾಗಿ ಈ ಹಸ್ತಪ್ರತಿಯು ೫೬೮ ರಿಂದ ೬೪೫ ನೆಯ ಇಸವಿಯಲ್ಲಿ ಸೃಷ್ಠಿಯಾಗಿದೆಯೆಂಬ ಒಮ್ಮತಕ್ಕೆ ಬಂದಿರುವರು.

ಈ ಸಂಶೋಧನೆಯು ನೂರಕ್ಕೆ ನೂರರಷ್ಟು ಖಚಿತವಾದುದ್ದು ನಿಖರವಾದುದ್ದು ಎಂದು ಇವರು ತಿಳಿಸಿರುವರು.

ಕಾರಣ- ಈ ಕುರ್ ಆನ್‌ನಲ್ಲಿ ಯಾವುದೇ ಸೇರ್ಪಡೆ ಬದಲಾವಣೆ ತಿದ್ದುಪಡಿ ಇರುವುದಿಲ್ಲ. ಮುಹಮ್ಮದ್ ಅವರ ದಿವ್ಯ ಸಂದೇಶವನ್ನೊಳಗೊಂಡಿರುವುದರಿಂದ ಇದೊಂದು ಪರಮ ಪವಿತ್ರ ಕುರ್‌ಆನ್ ಎಂದೇ ಖ್ಯಾತವಾಗಿರುವುದು.

ಇದರಲ್ಲಿ ಹಿಜಾಜಿ ಎಂದು ಕರೆಯಲಾಗುವ ಅರೇಬಿಕ್‌ ಆರಂಭಿಕ ಕಾಲದ ಲಿಪಿಯನ್ನು ಈ ಗ್ರಂಥದಲ್ಲಿ ಬಳಸಿರುವುದೊಂದು ವಿಶೇಷವಾಗಿದೆ.

ಇದು- ಬರ್ಮಿಂಗ್ ಹ್ಯಾಮ್ ವಿಶ್ವವಿದ್ಯಾಲಯದ ಮಧ್ಯಪ್ರಾಚ್ಯ ಹಸ್ತಪ್ರತಿ ವಿಭಾಗದಲ್ಲಿ ಈ ಮಹಾ ಕುರ್‌ಆನ್ ಹಸ್ತ ಪ್ರತಿ ಇದೆ. ಇದನ್ನು ಬಲು ಅಮೂಲ್ಯವಾಗಿ ಅಪರೂಪವೆಂಬಂತೆ ಸಂರಕ್ಷಿಸಿ ಇಡಲಾಗಿದೆ.

ಬರ್ಮಿಂಗ್ ಹ್ಯಾಮ್‌ಗೆ ಯಾರೇ ಹೋಗಲಿ ವಿಶೇಷವಾಗಿ ಮುಸ್ಲಿಮ್ ಬಾಂಧವರು ಭೇಟಿ ನೀಡಿದವರೆಲ್ಲ ತಪ್ಪದೆ, ಮರೆಯದೆ, ಅದನ್ನು ವೀಕ್ಷಿಸಿ, ಅದಕ್ಕೆ ನಮಸ್ಕರಿಸಿ ಬರುವರು.

ಇದು ಕುರ್‌-ಆನ್ ಮಹತ್ವವೆಂದರೆ…
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...