Home / ಕವನ / ಕವಿತೆ / ಸಾಮ್ರಾಜ್ಯಗಳ ಸಮಾಧಿಯಿಂದ

ಸಾಮ್ರಾಜ್ಯಗಳ ಸಮಾಧಿಯಿಂದ

ಖುರಪುಟದ ಹೆಜ್ಜೆ ಬಡಿತದ ಶಬ್ದ,
ಭಗ್ನ ಅವಶೇಷಗಳಡಿ ಕಾಲನ ಉಸಿರು
ಮುರಿದು ಬಿದ್ದಚಕ್ರದ ಗಾಲಿ,
ಗಡಿಯಾರ ಮುಳ್ಳಿನ ರಿಂಗಣ
ಕಾಮನ ಬಿಲ್ಲಿನ ನೆರಳು ಸಿಗದು.

ಆಗಸದಲಿ ಹರಡಿದ ಬಟ್ಟೆಯಲ್ಲಿ
ತೆಗೆದಿಟ್ಟ ಚುಕ್ಕಿಗಳ ಮೂಟೆ
ಮೌನ ಬಿಕ್ಕುವ ಮಾತುಗಳನ್ನು
ಕೊಳೆಹಾಕಿದೆ ಹಳೆಯ ಕಪಾಟಿನಲ್ಲಿ
ಕೊಂಪೆ ಸಾಮ್ರಾಜ್ಯದ ಪಳಯುಳಿಕೆ

ಹಳಸಿದ ಸಾಕ್ಷ್ಯಗಳ ಚೀಲದಲ್ಲಿ
ಪತನವಾದ ಹಳೇ ಸಾಮ್ರಾಜ್ಯ
ಭಾವಿ ಕಟ್ಟೆಯ ಗಡಗಡೆ ಶಬ್ದ
ಜೊತುಬಿದ್ದ ದಳಪತಿಯ ಖಡ್ಗಕ್ಕೆ
ಜೇನು ಹುಳು ಗೂಡುಕಟ್ಟಿ.
ಎಷ್ಟೊಂದು ಪ್ರಾತಿನಿಧಿಕ ತಿಕ್ಕಾಟ
ಸಿಂಹಾಸನ ಪಲ್ಲಕ್ಕಿಗಳಡಿ
ಆಕಾಶಕ್ಕೆ ಏಣಿ ಹಾಕಿದೆ
ಪರಾಕು, ಪತಾಕೆಗಳ ಉತ್ಪನನದಲ್ಲಿ
ಇಲಿ, ಹೆಗ್ಗಣಗಳ ಜಿರಲೆ ಹರಿದಾಟ.

ಸಾಮ್ರಾಜ್ಯಗಳ ಸಮಾಧಿಯಲ್ಲಿ
ಇಂಗಿಹೋದ ರಕ್ತ ಮಾಂಸಗಳು
ತೇಲಾಡುವ ಅಸ್ತಿ ಪಂಜರಗಳು
ಅವಶೇಷ ಪ್ರೇತಾತ್ಮ
ಕಾಲವಾದ ಅಧಿಪತ್ಯ
ಕ್ಷೀಣ ಕಾಲನ ಬಿಕ್ಕುಗಳು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...