Home / ಕವನ / ಕವಿತೆ / ದೊಡ್ಡೋನ್ ಯೆಸರು

ದೊಡ್ಡೋನ್ ಯೆಸರು

ನಂ ಊರ್‍ನಾಗ್ ಒಂದ್ ದೊಡ್ಡ್ ಕಟ್ಟೇಯ್ತೆ –
ಲಸ್ಮಪ್ಪನ್ ಕಟ್ಟೇಂತ;
ಅಂಗೇ ನೋಡ್ತೀನ್ ನಮ್ಮೂರ್‌ ಕಟ್ಟೇಗ್
ಈ ಯೆಸರ್‌ ಯಾಕ್ ಬಂತೂಂತ. ೧

ಲಸ್ಮಪ್ಪೇನೋ ಲಸ್ಸಾದ್ಕಾರಿ !
ಕಟ್ಟೇಗ್ ಔನ್ದೇನ್ ಅಂಗು ?
ಪೈಸಾ ಕೊಟ್ಟೋರ್ ಪ್ರಜೆಗೋಳ್ ನಾವು !
ಅದೇ ಅನುಮಾನ್ ನಂಗು ! ೨

ಇಂಜ್ನೀರ್ ಸಾಬ್ರು ಉಸ್ತ್ವಾರೀಗೆ,
ಕೆಲಸಕ್ ಮೇಸ್ತ್ರಿ ಗ್ಯಾಂಗು !
ಯೆಸರ್ ಈಸ್ಕೊಳ್ಳಾಕ್ ಮಾತ್ರ ಲಸ್ಮ !
ಫೌಲ್ ಮಾಡ್ ಕೊಟ್ಟ ಟಾಂಗು ! ೩

ಯಿಂಗೇ ಸೌಕಾರ್ ರಂಗೈನ್ ಎಸರೀಗ್
ನಮೂರ್ ಬೀದಿ ಬಿಡದಿ !
ರಸ್ತೇನ್ ಔನೇನ್ ತೋಟ ತಿಮ್ನಂಗ್
ಗುಡಿಸ್ಯಾನ್ ಪೊರ್‍ಕೆ ಇಡದಿ? ೪

ಅಂಗೇ ಸುಂಕೆ ನೋಡ್ತಾನೀವ್ನಿ
ನಾನೂ ವುಟ್ದಾಗ್ಲಿಂದ-
ಚಿಕ್ಕೋರ್ ಕಸ್ಟ್ ಬಿದ್ ಬೆಳಸಿದ್ ನುಂಗಾಕ್
ದೊಡ್ಡೋನ್ ಸಿದ್ಧ ಅಂದ ! ೫

ದೊಡ್ಡೋನ್ ವೊಟ್ಟೆ ಬಲೆ ದೊಡ್ದಣ್ಣ !
ಕಂಡಿದ್ ಗುಳುಂ ! ಸ್ವಾಹ !
ತಿಂದಿ ತೇಗ್ತ ಕುಡಿತಿದ್ದಸ್ಟೂ
ಏರ್‍ತೈತ್ ಅಸುವು ದಾಹ ! ೬

ಲಕ್ಸ ಚಿಕ್ಕೋರ್ ಮಾಡಿದ್ ಕೆಲಸ
ದೊಡ್ಡೋನ್ ಒಬ್ಬಂಗ್ ಎಸರು !
ಇಂತಾ ದೊಡ್ಡೋರ್ ದೊಡ್ದ್ ಎಸರೂಂದ್ರೆ-
ಲಗ್ನ್ ಆಗ್ದೇನೆ ಬಸರು | ೭
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...