Home / ಕವನ / ಕವಿತೆ / ಪ್ರಾರ್ಥನೆ

ಪ್ರಾರ್ಥನೆ

|| ಓಮ್ ||


ಪರಮನೆ ನಿನ್ನ ಪರಿಯನು ಪರಿಕಿಸೆ
ಬರಿಸಿದೆ ಬಾರದ ಭವಗಳಲಿ
ತಿರೆಯಲಿ ಮೆರೆಯಲು ತನವನು ತರಿಸಿದೆ
ಅರಿಯದ ಜನನಿಯ ಜಠರದಲ್ಲಿ


ಆಗುವದೆಲ್ಲವು ಆಗಲಿದೇವನೆ
ಭೋಗಿಪ ಕರ್ಮವಭೋಗಿಸುವೆ
ನೀಗದ ದುಗುಡವ ಬೆಂಕೊಂಡಾಡಲಿ
ಭೋಗಿಪ ಕರ್ಮವ ಭೋಗಿಸುವೆ


ಕೇಸುವಿನೆಲೆಗಳ ಮೇಲೆಯ ಬೀಳುವ
ನೀರದು ಜಾರುವ ತೆರದಿಂದೆ
ಹೊಸಹೊಸ ಸಂಕಟ ಸಂಚಯವೆರಗುತ
ಮು೦ಕೊ೦ಡೋಡಲಿ ಮನದಿಂದೆ


ಟೊಂಗೆಯ ಮೇಲಣ ಮಂಗನತೆರದಲಿ
ಲಂಘನ ಗೆಯ್ಯುವ ಮನವನ್ನು
ಮೂಡಣಗೂಳಿಯ ಮೂಗಿನದಾಣದ
ತಿರುಗಿಸು ನಿನ್ನಡಿದಾವರೆಗೆ


ಕಾರುಣಾಂಬುಧಿ ಕನಿಕರ ತೋರೆಲೊ
ಕರಗುವ ಕರುಳಿನ ನಿಲಯಕ್ಕೆ
ಬಾಳಿನ ಬೆಳಕದು ಸಾಲದೆ ಸಾಗಿದೆ
ಕೇಳುವೆ ಶಾಂತಿಯ ಕುಡುದೊರೆಯೆ


ತಾಯಿಯು ನೀನೇ ತಂದೆಯ ನೀನೇ
ಬ೦ಧುವು ನೀನೇ ಬಳಗಗಳು
ನೀನೇ ದೇವನೆ ಜನತೆಯು ನೀನೇ
ಸರ್ವವು ನೀನೇ ಜಗದೀಶ


ಮಕ್ಕಳ ಮುದ್ದಿನ ಮಾತಿಂದಳಲುತೆ
ಬಿಕ್ಕುತ ಕೇಳುವೆ ದರುಶನವ
ಸತಿಪತಿ ಮಿಥುನದ ವಿರಹದ ಸರದೊಳು
ತೀಡುತ ಬೇಡುವೆ ಭೆಟ್ಟಿಯನು


ತಾಯಿಯೆ ಆದರೆ ತ೦ದೆಯೆ ಆದರೆ
ಪತಿನೀನಾದರೆ ಕಾಡುವೆಯ
ತಾಯಿಯ ತಂದೆಯ ಪಾಶದ ಪರಿಯನು
ಸತಿಪತಿ ಸಲುಗೆಯು ನೀ ನರಿಯ


ಕಾಡುವೆ ಯಾತಕೊ ಕಾಡಿಸಿ ಕಾಡಿಸಿ
ನೋಡುವೆ ಯಾತಕೊ ಪೊಡವಿಪನೆ
ಜೇಡನ ಹುಳುವಿನ ಬೀಡೊಳು ಬೀಳಿಸಿ
ಕಾಡಿಪ ಗಾಡಿಯದೇನಯ್ಯ

೧೦
ನಿಧಿಯನು ಬೇಡೆನು ಪದವಿಯ ಬೇಡೆನು
ಪದುಳದೆ ಬೇಡುವೆ ದರುಶನವ
ಹೃದಯದೆ ಕದಲದ ಬಕುತಿಯ ಬೆಳ್ಗೊಡೆ
ಬೇಡುವೆ ಕೇಳೆನು ಪರತನ್ನು

೧೧
ನಶಿಸದ ನಾಕದ ನಿ್ಧಿಯನು ಹೊಂದೆನು
ಜನಪದ ಸದನವು ಸೊರಗುತಿರೆ
ಜನುಮಾಂತರಗಳ ಜನಪದ ಸೇವೆಯ
ಜನುಮವ ನೀಡೈ ಪರಮೇಶ

೧೨
ದೇಹದ ದಾರ್ಢ್ಯವು ದಾಟುತಲೋಡುವ
ಮುನ್ನಮೆ ಸನ್ನುತ ಪರಮನನು
ಭವಸಂಸಾರದ ಬವರದ ಬಳಿವಿಡಿ
ದಾಡುತ ಪಾಡೆಲೆ ಒಡಲೊಡೆಯ

೧೩
ಕಾಣದ ವಿಶ್ವವು ಕಾಣುತಲೆದ್ದಿತು
ದೇವನ ಲೀಲಾ ಮಾತ್ರದಲಿ
ಲೀಲೆಯದೆಂತೋ ಬಾಲಕವೃಂದದ
ಗುರಿಗೊತ್ತಿಲ್ಲದ ಚೇಷ್ಟೆಯದೊ ?

೧೪
ಹುಡುಗರ ತ೦ಡವು ಹೂವಿನ ಮೇಲಿನ
ಹುಳಿಹುಪ್ಪಡಿಗಳ ಹಿಡಿಹಿಡಿದು
ಕಾಡುತ ನಲಿನಲಿದಾಡುತ ನೋಡುತ
ಪೀಡಿದ ನೀತಿಯಿದೇನಯ್ಯ

೧೫
ಭವಸಂಸಾರದ ಬವರದ ಬವಣೆಯ
ಬೇಳೊಳು ಪುಟಕಿಕ್ಕೇಳದಿರೆ
ಭುವನದ ಜೀವಿಯ ಬವಣೆಯನರಿಯುತ
ಬಗೆಹರಿಸುವ ಬಗೆ ತಾನರಿಯ

೧೬
ಜಾತಿಮತಂಗಳ ಕಲಹದ ಕೊಳೆಯಲಿ
ನೀತಿಯ ದೇವನ ಕಾಣದಿಹೆ
ಮಾತಿಗೆ ಮಾತಿಗೆ ಜಾತಿಯನೆತ್ತುವ
ಪಾಪಿ ಜನಗಳ ಕಾಣುತಿಹೆ

೧೭
ನೀತಿಯ ನುಳಿದಿಹ ಜಾತಿಯದೆಂತೋ
ಭೀತಿಯ ಬಿತ್ತುವ ಬವಣೆಯದು
ಹಿಂದುವನೆಲ್ಲವ ಕೊಂದಿಹ ಜಾತಿಯ
ಬಂಧನ ಬಿಡಿಸೈ ಜಗದೀಶ

೧೮
ಓಮಕ್ಷರದಾ ನಾಮದೆ ನೆನೆಸುವ
ಸೀಮೆಯ ದೇವನೆ ಎಲ್ಲಿಹೆಯೋ
ನಾಮದ ಮಾತ್ರದೆ ನರರಿಗೆ ಕಾಣುವ
ನೇಮವನೆಲ್ಲಿಯು ಕಾಣದಿಹೆ

೧೯
ಭೇದವ ತಿಳಿಯನಭೇದವ ತಿಳಿಯೆನು
ವಾದದ ಭೂಮಿಗೆ ಬೀಳದಿಹೆ
ಮೋದವು ತುಂಬಿರೆ ಹೃದಯವೆ ಭೇದಾ
ಭೇದದ ಬವಣೆಯ ನಾನರಿಯೆ

೨೦
ಮುಗಿಲಿನ ಮಡಲಲಿ ಮಿಡಿಮಿಡಿದಾಡುವ
ಮೋಡದ ಗಾಡಿಗೆ ಮೈಮರೆವೆ
ಎಲ್ಲಿಹೆ ದೇವನೆ ನಿಲ್ಲದೆ ಬಾರೆಲೊ
ಲಲ್ಲೆಯಮೆಲ್ಲುಲಿಸಲಿಗೆಯಲಿ

೨೧
ಬಾರೆಲೊ ದೇವನೆ ಆ೦ಬರದಿಂಬಿನ
ವಿವರದ ಲಂಬಿಸಿ ಚುಂಬಿಸುವ
ವನಪಿನ ಮೋಹದ ಮಗಿಲಿನ ಮೊನೆಯದು
ಮನವನು ಮಾರಿಸಿ ಕುಣಿಸುತಿದೆ

೨೨
ತೇಜದೆ ಬೆಳಗುವೆ ತೇಜವ ಕೊಡುನೀ
ವೀರ್ಯಕೆ ಇರ್ಕೆಯು ನೀನಿರುವೆ
ವೀರ್ಯವ ಕೊಡುನೀ ಒಲವನು ಕೊಡುನೀ
ಬಲವಂತನು ನೀನಾಗಿರುವೆ

೨೩
ಓಜವ ಕೊಡುನೀ ಓಜವು ನೀನೇ
ಮನ್ಯುಗೆ ಮನೆ ನೀನಾಗಿರುವೆ
ಮನ್ಯುವ ಕೊಡುನೀ ಸಹನವ ಕೊಡುನೀ
ಸಹನದ ಸೀಮಾಪುರುಷನಿಹೆ.
*****

Tagged:

Leave a Reply

Your email address will not be published. Required fields are marked *

ನಾಣಿಗೆ ಒಲೆಯಲ್ಲಿ ಬೆಂಕಿ ಭಗಭಗ ಉರಿತಾನೇ ಇದೆ. ಅರ್ಧ ಹೊರಗೆ ಇನ್ನರ್ಧ ಒಳಗೆ ಉರಿತಿದ್ದ ತೆಂಗಿನ ಸೋಗೆಗಳನ್ನು ಕಂಡ ಸಂಪ್ರೀತ ಗಾಬರಿಯಾದಂತಾಗಿ ಎಲ್ಲ ಸೇರಿಸಿ ಒಳಗೆ ತುರುಕಿದ. ಅದೇ ತಾನೆ ಕಾಲೇಜು ಮುಗಿಸಿ ಮನೆಗೆ ಬರ್‍ತಾ ಇದ್ದ. ದೂರ ಕೊಂಚ ಹೆಚು ಎಂದು ಒಳದಾರಿಯಾಗಿ ಮನೆಯ ಹಿತ್ತಲ ದಾರ...

ಇವತ್ತೆಲ್ಲಾ ಜೋರು ಮಳೆ ದಬದಬ ಬೀಳ್ತಾನೆ ಇದೆ. ದಿಗಿಲು ಹುಟ್ಸಿದ್ಹಂಗೆ, ನನ್ನ ಕೈಯಲ್ಲಿ ಹೊರಗೆ ಬರೋಕ್ಕು ಆಗಲ್ಲ, ಒಂದೇ ಸಮಗೆ ಉಸಿರು ಕಟ್ಟಿದ್ಹಾಂಗೂ ಆಗ್ತಿದೆ ಕಣ್ರೀ. ಕುಂಜಳಿ ತೆಕ್ಕೆಗೆ ಬಂದ ಪಾಂಜನ ಕೊಕ್ಕಲ್ಲಿ ಕೊಕ್ಕಿಟ್ಟು ನೋವ ಉಲಿಯಿತು. ಯಾಕೋ? ಮೈ ಹುಷಾರಿಲ್ವಾ? ಹಾಗಾದ್ರೇ ಬೆ...

ಪ್ರಮಿಲಾ; ನಿನಗೇನೆಂದು ಓಲೆ ಬರೆಯಲಿ? ಯಾವ ಬಣ್ಣದ ಮಸಿಯಿಂದ ಓಲೆ ಬರೆಯಲಿ? ಹೊಳೆಯಿತು. ನಾನು ನಿನಗೆ ಯಾವ ಹಸ್ತದಿಂದ ವಚಸನನ್ನಿತ್ತಿದೆನೋ ಆ ಹಸ್ತವನ್ನೇ ಕುಕ್ಕಿ ಅದರ ನೆತ್ತರನನ್ನು ಹೀರಿ ಅದರಿಂದ ಈ ಓಲೆ ಬರೆಯುವದೇ ಉಚಿತವು. ನೀನು ಮರಾಠಾ ಜಾತಿಯವಳು; ನಾನ ಬ್ರಾಹ್ಮಣ ನಿನ್ನೊಡನೆ ಮದು...

ದಳವಾಯಿ ಪದವಿಯಲ್ಲಿದ್ದು ಹೈದರಲ್ಲಿಯು ನಂಜರಾಜಯ್ಯನನ್ನು ಕೊಣನೂರಿಗೆ ಕಳುಹಿಸಿದ ಬಳಿಕ ರಾಜಧಾನಿಗೆ ಬಂದು ಮೈಸೂರಿನ ಮುತ್ತಿಗೆಯಲ್ಲಿ ನಡೆದ ವೆಚ್ಚಕ್ಕಾಗಿ ತನಗೆ ಇದ್ದ ಆದಾಯ ಸಾಲದೆಂದೂ ಇನ್ನೂ ಹೆಚ್ಚಿನ ಆದಾಯವು ಬೇಕೆಂದೂ ರಾಜರಲ್ಲಿ ಅರಿಕೆ ಮಾಡಿದನು. ಖಂಡೇರಾಯನಿಗೆ ಇದು ಹೈದರನ ಹಣದಾಸೆ...

ಆಗಷ್ಟೇ ಹಾಸಿಗೆಗೆ ಅಡ್ಡಾದ ಕೆರೆಕೇರಿಯ ಉಮ್ಮಣ್ಣ ಭಟ್ಟರಿಗೆ ಮಗ್ಗಲು ಬದಲಿಸುವ ಕೆಲಸನೇ ಆಗ್ಹೋಯ್ತು. ನಿದ್ದೆ ಜಪ್ಪಯ್ಯ ಎಂದರೂ ಹತ್ತಿರ ಸುಳಿಯುತ್ತಿಲ್ಲ. ಪಕ್ಕದ ಕೋಣೆಯಲ್ಲಿ ವಯಸ್ಸಾದ ತಾಯಿಯ ಕೆಮ್ಮು ಮುಲುಗುವಿಕೆ.ಉಸ್ಸು.. ಉಸ್ಸು.. ಕೇಳಿ ಬರುತ್ತಲೂ ಭಟ್ಟರಿಗೆ ಎದೆಗೆ ಇಕ್ಕಳದಿಂದ ಬ...

ಮೈಸೂರಿನ ಸೈನ್ಯದಲ್ಲಿ ದಳವಾಯಿಗಳ ಕಾಲದಲ್ಲಿ ಇವರಿಬ್ಬರೂ ಶೂರರೆಂದು ಹೆಸರುಪಡೆದಿದ್ದವರು. ಹರಿಸಿಂಗನನ್ನು ದಳವಾಯಿ ದೇವರಾಜಯ್ಯನು ಕೆಲಸದಲ್ಲಿ ಸೇರಿಸಿಕೊಂಡು ಸನ್ಮಾನಿಸುತ್ತಲಿದ್ದನು; ಕರಾಚೂರಿ ನಂಜರಾಜಯ್ಯನು ಹೈದರನನ್ನು ಕೆಲಸಕ್ಕೆ ಸೇರಿಸಿ ದೊಡ್ಡವನನ್ನಾಗಿಮಾಡಿದನು. ಹೈದರನು ಶೂರನೂ ...