Home / ಕವನ / ಕವಿತೆ / ಪ್ರಾರ್ಥನೆ

ಪ್ರಾರ್ಥನೆ

|| ಓಮ್ ||


ಪರಮನೆ ನಿನ್ನ ಪರಿಯನು ಪರಿಕಿಸೆ
ಬರಿಸಿದೆ ಬಾರದ ಭವಗಳಲಿ
ತಿರೆಯಲಿ ಮೆರೆಯಲು ತನವನು ತರಿಸಿದೆ
ಅರಿಯದ ಜನನಿಯ ಜಠರದಲ್ಲಿ


ಆಗುವದೆಲ್ಲವು ಆಗಲಿದೇವನೆ
ಭೋಗಿಪ ಕರ್ಮವಭೋಗಿಸುವೆ
ನೀಗದ ದುಗುಡವ ಬೆಂಕೊಂಡಾಡಲಿ
ಭೋಗಿಪ ಕರ್ಮವ ಭೋಗಿಸುವೆ


ಕೇಸುವಿನೆಲೆಗಳ ಮೇಲೆಯ ಬೀಳುವ
ನೀರದು ಜಾರುವ ತೆರದಿಂದೆ
ಹೊಸಹೊಸ ಸಂಕಟ ಸಂಚಯವೆರಗುತ
ಮು೦ಕೊ೦ಡೋಡಲಿ ಮನದಿಂದೆ


ಟೊಂಗೆಯ ಮೇಲಣ ಮಂಗನತೆರದಲಿ
ಲಂಘನ ಗೆಯ್ಯುವ ಮನವನ್ನು
ಮೂಡಣಗೂಳಿಯ ಮೂಗಿನದಾಣದ
ತಿರುಗಿಸು ನಿನ್ನಡಿದಾವರೆಗೆ


ಕಾರುಣಾಂಬುಧಿ ಕನಿಕರ ತೋರೆಲೊ
ಕರಗುವ ಕರುಳಿನ ನಿಲಯಕ್ಕೆ
ಬಾಳಿನ ಬೆಳಕದು ಸಾಲದೆ ಸಾಗಿದೆ
ಕೇಳುವೆ ಶಾಂತಿಯ ಕುಡುದೊರೆಯೆ


ತಾಯಿಯು ನೀನೇ ತಂದೆಯ ನೀನೇ
ಬ೦ಧುವು ನೀನೇ ಬಳಗಗಳು
ನೀನೇ ದೇವನೆ ಜನತೆಯು ನೀನೇ
ಸರ್ವವು ನೀನೇ ಜಗದೀಶ


ಮಕ್ಕಳ ಮುದ್ದಿನ ಮಾತಿಂದಳಲುತೆ
ಬಿಕ್ಕುತ ಕೇಳುವೆ ದರುಶನವ
ಸತಿಪತಿ ಮಿಥುನದ ವಿರಹದ ಸರದೊಳು
ತೀಡುತ ಬೇಡುವೆ ಭೆಟ್ಟಿಯನು


ತಾಯಿಯೆ ಆದರೆ ತ೦ದೆಯೆ ಆದರೆ
ಪತಿನೀನಾದರೆ ಕಾಡುವೆಯ
ತಾಯಿಯ ತಂದೆಯ ಪಾಶದ ಪರಿಯನು
ಸತಿಪತಿ ಸಲುಗೆಯು ನೀ ನರಿಯ


ಕಾಡುವೆ ಯಾತಕೊ ಕಾಡಿಸಿ ಕಾಡಿಸಿ
ನೋಡುವೆ ಯಾತಕೊ ಪೊಡವಿಪನೆ
ಜೇಡನ ಹುಳುವಿನ ಬೀಡೊಳು ಬೀಳಿಸಿ
ಕಾಡಿಪ ಗಾಡಿಯದೇನಯ್ಯ

೧೦
ನಿಧಿಯನು ಬೇಡೆನು ಪದವಿಯ ಬೇಡೆನು
ಪದುಳದೆ ಬೇಡುವೆ ದರುಶನವ
ಹೃದಯದೆ ಕದಲದ ಬಕುತಿಯ ಬೆಳ್ಗೊಡೆ
ಬೇಡುವೆ ಕೇಳೆನು ಪರತನ್ನು

೧೧
ನಶಿಸದ ನಾಕದ ನಿ್ಧಿಯನು ಹೊಂದೆನು
ಜನಪದ ಸದನವು ಸೊರಗುತಿರೆ
ಜನುಮಾಂತರಗಳ ಜನಪದ ಸೇವೆಯ
ಜನುಮವ ನೀಡೈ ಪರಮೇಶ

೧೨
ದೇಹದ ದಾರ್ಢ್ಯವು ದಾಟುತಲೋಡುವ
ಮುನ್ನಮೆ ಸನ್ನುತ ಪರಮನನು
ಭವಸಂಸಾರದ ಬವರದ ಬಳಿವಿಡಿ
ದಾಡುತ ಪಾಡೆಲೆ ಒಡಲೊಡೆಯ

೧೩
ಕಾಣದ ವಿಶ್ವವು ಕಾಣುತಲೆದ್ದಿತು
ದೇವನ ಲೀಲಾ ಮಾತ್ರದಲಿ
ಲೀಲೆಯದೆಂತೋ ಬಾಲಕವೃಂದದ
ಗುರಿಗೊತ್ತಿಲ್ಲದ ಚೇಷ್ಟೆಯದೊ ?

೧೪
ಹುಡುಗರ ತ೦ಡವು ಹೂವಿನ ಮೇಲಿನ
ಹುಳಿಹುಪ್ಪಡಿಗಳ ಹಿಡಿಹಿಡಿದು
ಕಾಡುತ ನಲಿನಲಿದಾಡುತ ನೋಡುತ
ಪೀಡಿದ ನೀತಿಯಿದೇನಯ್ಯ

೧೫
ಭವಸಂಸಾರದ ಬವರದ ಬವಣೆಯ
ಬೇಳೊಳು ಪುಟಕಿಕ್ಕೇಳದಿರೆ
ಭುವನದ ಜೀವಿಯ ಬವಣೆಯನರಿಯುತ
ಬಗೆಹರಿಸುವ ಬಗೆ ತಾನರಿಯ

೧೬
ಜಾತಿಮತಂಗಳ ಕಲಹದ ಕೊಳೆಯಲಿ
ನೀತಿಯ ದೇವನ ಕಾಣದಿಹೆ
ಮಾತಿಗೆ ಮಾತಿಗೆ ಜಾತಿಯನೆತ್ತುವ
ಪಾಪಿ ಜನಗಳ ಕಾಣುತಿಹೆ

೧೭
ನೀತಿಯ ನುಳಿದಿಹ ಜಾತಿಯದೆಂತೋ
ಭೀತಿಯ ಬಿತ್ತುವ ಬವಣೆಯದು
ಹಿಂದುವನೆಲ್ಲವ ಕೊಂದಿಹ ಜಾತಿಯ
ಬಂಧನ ಬಿಡಿಸೈ ಜಗದೀಶ

೧೮
ಓಮಕ್ಷರದಾ ನಾಮದೆ ನೆನೆಸುವ
ಸೀಮೆಯ ದೇವನೆ ಎಲ್ಲಿಹೆಯೋ
ನಾಮದ ಮಾತ್ರದೆ ನರರಿಗೆ ಕಾಣುವ
ನೇಮವನೆಲ್ಲಿಯು ಕಾಣದಿಹೆ

೧೯
ಭೇದವ ತಿಳಿಯನಭೇದವ ತಿಳಿಯೆನು
ವಾದದ ಭೂಮಿಗೆ ಬೀಳದಿಹೆ
ಮೋದವು ತುಂಬಿರೆ ಹೃದಯವೆ ಭೇದಾ
ಭೇದದ ಬವಣೆಯ ನಾನರಿಯೆ

೨೦
ಮುಗಿಲಿನ ಮಡಲಲಿ ಮಿಡಿಮಿಡಿದಾಡುವ
ಮೋಡದ ಗಾಡಿಗೆ ಮೈಮರೆವೆ
ಎಲ್ಲಿಹೆ ದೇವನೆ ನಿಲ್ಲದೆ ಬಾರೆಲೊ
ಲಲ್ಲೆಯಮೆಲ್ಲುಲಿಸಲಿಗೆಯಲಿ

೨೧
ಬಾರೆಲೊ ದೇವನೆ ಆ೦ಬರದಿಂಬಿನ
ವಿವರದ ಲಂಬಿಸಿ ಚುಂಬಿಸುವ
ವನಪಿನ ಮೋಹದ ಮಗಿಲಿನ ಮೊನೆಯದು
ಮನವನು ಮಾರಿಸಿ ಕುಣಿಸುತಿದೆ

೨೨
ತೇಜದೆ ಬೆಳಗುವೆ ತೇಜವ ಕೊಡುನೀ
ವೀರ್ಯಕೆ ಇರ್ಕೆಯು ನೀನಿರುವೆ
ವೀರ್ಯವ ಕೊಡುನೀ ಒಲವನು ಕೊಡುನೀ
ಬಲವಂತನು ನೀನಾಗಿರುವೆ

೨೩
ಓಜವ ಕೊಡುನೀ ಓಜವು ನೀನೇ
ಮನ್ಯುಗೆ ಮನೆ ನೀನಾಗಿರುವೆ
ಮನ್ಯುವ ಕೊಡುನೀ ಸಹನವ ಕೊಡುನೀ
ಸಹನದ ಸೀಮಾಪುರುಷನಿಹೆ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...