Home / ಕವನ / ಕವಿತೆ / ಹಗಲು ಇರುಳು

ಹಗಲು ಇರುಳು

ಕತ್ತಲಿಗೂ ಬೆಳಕಿಗೂ ನಡೆಯಿತೊಮ್ಮೆ
ಮಾತಿನ ಚಕಮಕಿ
“ನಾನೇ ಶ್ರೇಷ್ಠ” ಅಂದಿತು ಕತ್ತಲು
ಪಟ್ಟು ಸಡಿಲಿಸದು ಬೆಳಕು

“ನಾನಿಲ್ಲದೆ ಲೋಕವೆಲ್ಲಾ ಕತ್ತಲೆ”
ಹೆಮ್ಮೆಯಿಂದ ಬೀಗಿತು ಬೆಳಕು
“ನಾನಿಲ್ಲದೆ ನಿನಗಾವ ಬೆಲೆ?”
ಪ್ರತಿವಾದಿಸಿತು ಕತ್ತಲು

ಪಾಠ ಕಲಿಸಲು ಬೆಳಕಿಗೆ
ಅಡಗಿಕುಳಿತಿತು ಕತ್ತಲು
ಬೆಳಕೇ ತುಂಬಿದ ಪ್ರಪಂಚದಲ್ಲಿ
ಲೋಪ-ಪಾಪಗಳೆಲ್ಲವೂ ಬೆತ್ತಲು

ರಾತ್ರಿಯಿಲ್ಲ, ನಿದಿರೆಯಿಲ್ಲ,
ಪಂಚರಂಗದ ಕನಸಿಲ್ಲ
ಮಂಕು ಬಡಿಯಿತು, ಮರುಳು ಕವಿಯಿತು
ಲೋಕದ ಜನರೆಲ್ಲರೂ ಸುಸ್ತು

ಎದೆಯುಬ್ಬಿಸಿ ಎದುರು ಬಂದಿತು ಕತ್ತಲೆ
ತೆರೆಗೆ ಸರಿಯಿತು ಬೆಳಕು ಇತ್ತಲೆ
ಜಗದಲ್ಲಿ ಅಂಧಕಾರದ ಯುಗ
ಲೋಕವೆಲ್ಲಾ ಕತ್ತಲಿನ ಸಾಮ್ರಾಜ್ಯವೀಗ

ಕತ್ತಲೆಯ ರುದ್ರನರ್ತನಕ್ಕೆ
ಜಡವಾಯಿತು ಜನಜೀವನ
ಬಡವಾಯಿತು ಜೀವಚೇತನ
ತಮ್ಮ ತನದಲ್ಲೇ ಅವೆರಡರ ಗಮನ

ಯುದ್ಧಕ್ಕೆ ಸಿದ್ಧವಾಯಿತು ರಂಗ
ದಿಟ್ಟಿಸಿತು ಒಂದನು ಇನ್ನೊಂದು
ಹಿಮ್ಮೆಟ್ಟಿಸಿತು ಬೆಳಕು ಕತ್ತಲನ್ನು
ಅಟ್ಟಿಸಹೊರಟಿತು ಕತ್ತಲು ಬೆಳಕನ್ನು

ಕೆರಳಿತು ಕದನದ ಉರಿ
ಅದರ ಮೇಲಿದು ಏರಿ
ಇದರ ಮೇಲದು ಹಾರಿ
ನಿಶ್ಚಯವಾಗದಾಯಿತು ವಿಜಯ

ನಡೆಯುತಲಿದೆ ಕಾದಾಟವಿನ್ನೂ
ಬೆಳಕು ಕತ್ತಲುಗಳ ನಡುವೆ
ಮುಗಿಯುವುದು ಎಂದೋ? ಮುಗಿಯದೋ ಎಂದೂ?
ಕೊನೆಗಾಣುವುದು ಅದೆಂತೋ?
*****

Tagged:

Leave a Reply

Your email address will not be published. Required fields are marked *

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...