Home / ಕವನ / ಕವಿತೆ / ಹಗಲು ಇರುಳು

ಹಗಲು ಇರುಳು

ಕತ್ತಲಿಗೂ ಬೆಳಕಿಗೂ ನಡೆಯಿತೊಮ್ಮೆ
ಮಾತಿನ ಚಕಮಕಿ
“ನಾನೇ ಶ್ರೇಷ್ಠ” ಅಂದಿತು ಕತ್ತಲು
ಪಟ್ಟು ಸಡಿಲಿಸದು ಬೆಳಕು

“ನಾನಿಲ್ಲದೆ ಲೋಕವೆಲ್ಲಾ ಕತ್ತಲೆ”
ಹೆಮ್ಮೆಯಿಂದ ಬೀಗಿತು ಬೆಳಕು
“ನಾನಿಲ್ಲದೆ ನಿನಗಾವ ಬೆಲೆ?”
ಪ್ರತಿವಾದಿಸಿತು ಕತ್ತಲು

ಪಾಠ ಕಲಿಸಲು ಬೆಳಕಿಗೆ
ಅಡಗಿಕುಳಿತಿತು ಕತ್ತಲು
ಬೆಳಕೇ ತುಂಬಿದ ಪ್ರಪಂಚದಲ್ಲಿ
ಲೋಪ-ಪಾಪಗಳೆಲ್ಲವೂ ಬೆತ್ತಲು

ರಾತ್ರಿಯಿಲ್ಲ, ನಿದಿರೆಯಿಲ್ಲ,
ಪಂಚರಂಗದ ಕನಸಿಲ್ಲ
ಮಂಕು ಬಡಿಯಿತು, ಮರುಳು ಕವಿಯಿತು
ಲೋಕದ ಜನರೆಲ್ಲರೂ ಸುಸ್ತು

ಎದೆಯುಬ್ಬಿಸಿ ಎದುರು ಬಂದಿತು ಕತ್ತಲೆ
ತೆರೆಗೆ ಸರಿಯಿತು ಬೆಳಕು ಇತ್ತಲೆ
ಜಗದಲ್ಲಿ ಅಂಧಕಾರದ ಯುಗ
ಲೋಕವೆಲ್ಲಾ ಕತ್ತಲಿನ ಸಾಮ್ರಾಜ್ಯವೀಗ

ಕತ್ತಲೆಯ ರುದ್ರನರ್ತನಕ್ಕೆ
ಜಡವಾಯಿತು ಜನಜೀವನ
ಬಡವಾಯಿತು ಜೀವಚೇತನ
ತಮ್ಮ ತನದಲ್ಲೇ ಅವೆರಡರ ಗಮನ

ಯುದ್ಧಕ್ಕೆ ಸಿದ್ಧವಾಯಿತು ರಂಗ
ದಿಟ್ಟಿಸಿತು ಒಂದನು ಇನ್ನೊಂದು
ಹಿಮ್ಮೆಟ್ಟಿಸಿತು ಬೆಳಕು ಕತ್ತಲನ್ನು
ಅಟ್ಟಿಸಹೊರಟಿತು ಕತ್ತಲು ಬೆಳಕನ್ನು

ಕೆರಳಿತು ಕದನದ ಉರಿ
ಅದರ ಮೇಲಿದು ಏರಿ
ಇದರ ಮೇಲದು ಹಾರಿ
ನಿಶ್ಚಯವಾಗದಾಯಿತು ವಿಜಯ

ನಡೆಯುತಲಿದೆ ಕಾದಾಟವಿನ್ನೂ
ಬೆಳಕು ಕತ್ತಲುಗಳ ನಡುವೆ
ಮುಗಿಯುವುದು ಎಂದೋ? ಮುಗಿಯದೋ ಎಂದೂ?
ಕೊನೆಗಾಣುವುದು ಅದೆಂತೋ?
*****

Tagged:

Leave a Reply

Your email address will not be published. Required fields are marked *

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...

ಶೋಭಾ, ನಿನ್ನ ಎಲ್ಲಾ ಕಾಗದಗಳೂ ತಲುಪಿವೆ. ಓದುತ್ತಲೂ ಇದ್ದೇನೆ. ‘ತಂಪೆರೆಯುವ ನಿನ್ನ ಕಾಗದಗಳನ್ನು ದಿನಾ ಎದುರು ನೋಡುತ್ತಿರುತ್ತೇನೆ. ಅಬ್ಬಾ! ಎಷ್ಟು ಪ್ರಶ್ನೆಗಳನ್ನು ಕೇಳಿದ್ದೀಯಾ? ಬರೆಯುವ ಶಕ್ತಿ ಬರಲೀಂತ ಕಾಯ್ತಾ ಇದ್ದೆ. ಮಾನಸಿಕ ವಿಪ್ಲವದಲ್ಲಿ ಮನಸ್ಸು, ದೇಹ ಎಲ್ಲವೂ ಕೊರಡಿನಂತಾ...