ಬಲಿ

ಹಸಿದ ಕತ್ತಿಗೆ ಕತ್ತುಕೊಡಲಿರುವ
ನಿನಗೇನು ಗೊತ್ತು
ಜೀವಕ್ಕೆ ಬಂದಿರುವ ಕುತ್ತು, ಆಪತ್ತು?
ಗೊತ್ತಾದರೂ ನೀನೇನು ಮಾಡಲಾದೀತು?

ಬಲಿಕೊಟ್ಟು ಬಲಪಡೆಯುವವರ
ಸ್ವಾರ್ಥ ಅರ್ಥವಾಗಲಿಲ್ಲ ನಿನಗೆ
ನಿನಗೆಂತು ಅರ್ಥವಾದೀತು?
ಕಪಟ ನಗೆಯ ಹೊಗೆ ಮುಚ್ಚೀತು ಎಲ್ಲವನು

ಚಪ್ಪರ ಸಿಂಗರಿಸಿದೆ, ಸಪ್ಪಳ ಮೇಳೈಸಿದೆ
ಕಹಳೆ, ಕೊಂಬುಗಳ ನಾದ ಪಸರಿಸಿದೆ
ಬಲಿಗಾರನ ಕೈಯ್ಯ ಖಡ್ಗ ಗುಡುಗಿದೆ
ಬಲಿಗೆ ಸಿದ್ಧವಾಗಿದೆ ಪೀಠ

ಕಂಬಕ್ಕೆ ಕಟ್ಟಿದ ಮಾವಿನ ತೋರಣ
ಆಗಿದೆ ನಿನಗೆ ಅಂತಿಮ ಭೋಜನ
ಎತ್ತಿದ ಮಚ್ಚು, ಬಿದ್ದ ಹೊಡೆತ
ಮರುಕ್ಷಣ ನಿನ್ನ ಪ್ರಾಣ ಹರಣ

ದೇಶಭಕ್ತರ ಬಲಿದಾನಕ್ಕೊಂದು ಗುರಿಯಿದೆ
ನಿನ್ನ ಬಲಿಗೇನಿದೆ ಅರ್ಥ?
ಅಂಧ ಭಕ್ತರ ಪ್ರಪಂಚದಲ್ಲಿ
ಎಲ್ಲವೂ ಅನರ್ಥ, ಅಪಾರ್ಥ

ಬೆಳೆಸಿ, ಬಳಸಿಕೊಳ್ಳುವವರ ಭಕ್ತಿ ಪ್ರದರ್ಶನದ
ಉರುಳಿಗೆ ಕೊರಳು ಕೊಟ್ಟೆಯಾ ನೀನು?
ಮೂಕ ಪ್ರಾಣಿಯ ಪ್ರಾಣ ಭಿಕ್ಷೆಯನ್ನು
ಯಾವ ದೇವತಾನೇ ಕೇಳಿಯಾನು?.
*****

Tagged:

Leave a Reply

Your email address will not be published. Required fields are marked *

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...