Home / ಕವನ / ಕವಿತೆ / ಕೊನೆ ಕೊನೆಯ ಕವಿತೆಗಳು

ಕೊನೆ ಕೊನೆಯ ಕವಿತೆಗಳು

ಕೊನೆ ಕೊನೆಯ ಕವಿತೆಗಳು ಕೊನೆ ಕೊನೆಯ ಕನಸುಗಳು
ಬೆಳಕು ಕಾಯುವುದೆ ಕತ್ತಲು
ಅಟ್ಟದ ಮೇಲೆ ಅಥವಾ ಕೆಳಗೆ

ಇದೀಗ ಇದ್ದವು ಈಗೆಲ್ಲಿ ಹೋದವು ಕಿಟಿಕಿ ಮೂಲಕ
ಅಥವ ಯಾರು ತೆರೆದರು ಬಾಗಿಲ ಚಿಲಕ ಇಷ್ಟು ಬೇಗ

ಮೈಕೈಗೆ ಮಸಿ ಹಿಡಿದವರ ಕೈಗೂ
ವಸಿ ಹಿಡಿದವರ ಮನಸಿಗೂ
ಸಿಗುತವೆ ಈ ಇಂಥ ಭಾವ

ಕೊನೆಯೂ ಇಷ್ಟೊಂದು ಲಘುವಾಗಿರುತ್ತದೆಯೆ
ಆರಂಭ ಕೊನೆತನಕ ಬರುತ್ತದೆಯೆ
ಹಿಡಿದು ಬಿಟ್ಟರೆ ಎಲ್ಲಿ ಹಾರಿಹೋಗುತ್ತವೋ

ನಮಗೂ ಆತಂಕ
ಅಂತೂ ಉಳಿದವು ಬಹಳೊಂದು ಕವಿತೆಗಳು ಬರೆಯದೇ
ಗುಹಾವಾಸಿಗಳ ಗುಹೆಯಲ್ಲಿ

ನೋಡಿದಿರ ಅಜ್ಜನ ಗಡ್ಡ ಎಂಬವುಗಳು ಅರ್ಥಾತ್
ರೇಶಿಮೆ ಹತ್ತಿ ಬೀಜಗಳು
ಗುರುತ್ವಾಕರ್ಷ ವಿನಾ ಅಕ್ಷರ ರೂಪಿಗಳು ಹಾರಿಹೋಗುವುದ

ಗಾಳಿ ಬೀಸಿದ ಕಡೆ ಫೂ ಎಂದರೂ ಸಾಕು
ಹೋಗಿ ಕೂತುಕೊಳ್ಳುತ್ತವೆ ಹೂವಿನ ಮೇಲೆ ಎಂದೇನಿಲ್ಲ
ಮುಳ್ಳಿನ ಮೇಲೆ ಕೂಡ ಬೇಲಿಯಲ್ಲಿ ಅಥವ ಕಲ್ಲಿನಲ್ಲಿ

ಯಾಕೆ ಹೂ ಯಾಕೆ ಮುಳ್ಳು ಯಾಕೆ ಕಲ್ಲು ವಿಧಾತನಿಗೆ ಗೊತ್ತು
ಅವೂ ಯೋಚಿಸುತ್ತವೆ ಕೂತು ಬಹಳ ಹೊತ್ತು

ವಿಷಯ ಅಸ್ಪಷ್ಟ
ಪೆನ್ನು ಹರಿದಲ್ಲಿ ಗೆರೆಗಳು
ಮಸಿ ಮುಗಿದಲ್ಲಿ ಮೇರೆಗಳು
ಅಂತಿಮವಾಗಿ ಏನು

ಘನ ಕಾವ್ಯಗಳೆದುರು ಹೀಗೆ ಸುಳಿಯುವುದಕ್ಕೆ
ಅದೆಂಥ ಧೈರ್ಯ ಅಥವಾ ಮುಗ್ಧತೆ
ಜನ ಕಂಡಿದ್ದಾರೆ ಚಂಡಮಾರುತಗಳಂಥ ಯುದ್ದಗಳ
ಗುಡಿ ಗುಡಾರಗಳನ್ನೆ ಎತ್ತಿಹಾಕಿವೆ ದುರ್ಗ ಅರಮನೆಗಳ
ನೆಲಸಮ ಮಾಡಿವೆ ಇನ್ನು ವಾಡೆಗಳ ಬೀದಿಗಳ ಹಾದಿಗಳ
ಮಾತೇನು
ಆರಂಭಿಸಿದವರಿದ್ದಾರೆ ಎಲ್ಲವನ್ನೂ ಮೊದಲಿಂದ
ಯಾವುದೂ ಮೊದಲಿಂದ ಅಲ್ಲಿ ಖರೆ
ಮೌಲ್ಯ ಕಳಕೊಂಡ ಮೈಲಿಗಲ್ಲುಗಳು ಸ್ವರೂಪವಿಲ್ಲದ ಸೈಜುಗಲ್ಲುಗಳು
ಇತಿಹಾಸ ಪಡೆಯದೆ
ಇತಿ

ಲೆಕ್ಕವಿಲ್ಲದ ಆತ್ಮಗಳ ಕಂಡೆ
ವಿದ್ಯುತ್ ತಂತಿಗಳ ಮೇಲೆ
ಆತ್ಮಗಳೊ ಮಳೆನೀರ ಬಿಂದುಗಳೊ
ಹೊಳೆಯುತ್ತವೆ ಕರಗುತ್ತವೆ ನಿರ್ಭಾವ ನಿರ್ಮಮ
ಮಾತಿಲ್ಲದ ಕವಿತೆಯೇ ನಿನಗಷ್ಟೆ ಗೊತ್ತು
ಅವು ಮಾತಾಡುವುದು ಯಾರ ಜೊತೆ
ನಿರಪೇಕ್ಷ ಜಗತ್ತಿನಲ್ಲಿ ಇರುವೆಗಳಂತೆ ಇವೆ
ತಮಗಿಂತ ಹತ್ತುಪಟ್ಟು ಭಾರವ ಹೊತ್ತು

ಸಾಲುಗಳೆ ಇಲ್ಲ
*****

Tagged:

Leave a Reply

Your email address will not be published. Required fields are marked *

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...