Home / ಕವನ / ಕವಿತೆ / ಕೊನೆ ಕೊನೆಯ ಕವಿತೆಗಳು

ಕೊನೆ ಕೊನೆಯ ಕವಿತೆಗಳು

ಕೊನೆ ಕೊನೆಯ ಕವಿತೆಗಳು ಕೊನೆ ಕೊನೆಯ ಕನಸುಗಳು
ಬೆಳಕು ಕಾಯುವುದೆ ಕತ್ತಲು
ಅಟ್ಟದ ಮೇಲೆ ಅಥವಾ ಕೆಳಗೆ

ಇದೀಗ ಇದ್ದವು ಈಗೆಲ್ಲಿ ಹೋದವು ಕಿಟಿಕಿ ಮೂಲಕ
ಅಥವ ಯಾರು ತೆರೆದರು ಬಾಗಿಲ ಚಿಲಕ ಇಷ್ಟು ಬೇಗ

ಮೈಕೈಗೆ ಮಸಿ ಹಿಡಿದವರ ಕೈಗೂ
ವಸಿ ಹಿಡಿದವರ ಮನಸಿಗೂ
ಸಿಗುತವೆ ಈ ಇಂಥ ಭಾವ

ಕೊನೆಯೂ ಇಷ್ಟೊಂದು ಲಘುವಾಗಿರುತ್ತದೆಯೆ
ಆರಂಭ ಕೊನೆತನಕ ಬರುತ್ತದೆಯೆ
ಹಿಡಿದು ಬಿಟ್ಟರೆ ಎಲ್ಲಿ ಹಾರಿಹೋಗುತ್ತವೋ

ನಮಗೂ ಆತಂಕ
ಅಂತೂ ಉಳಿದವು ಬಹಳೊಂದು ಕವಿತೆಗಳು ಬರೆಯದೇ
ಗುಹಾವಾಸಿಗಳ ಗುಹೆಯಲ್ಲಿ

ನೋಡಿದಿರ ಅಜ್ಜನ ಗಡ್ಡ ಎಂಬವುಗಳು ಅರ್ಥಾತ್
ರೇಶಿಮೆ ಹತ್ತಿ ಬೀಜಗಳು
ಗುರುತ್ವಾಕರ್ಷ ವಿನಾ ಅಕ್ಷರ ರೂಪಿಗಳು ಹಾರಿಹೋಗುವುದ

ಗಾಳಿ ಬೀಸಿದ ಕಡೆ ಫೂ ಎಂದರೂ ಸಾಕು
ಹೋಗಿ ಕೂತುಕೊಳ್ಳುತ್ತವೆ ಹೂವಿನ ಮೇಲೆ ಎಂದೇನಿಲ್ಲ
ಮುಳ್ಳಿನ ಮೇಲೆ ಕೂಡ ಬೇಲಿಯಲ್ಲಿ ಅಥವ ಕಲ್ಲಿನಲ್ಲಿ

ಯಾಕೆ ಹೂ ಯಾಕೆ ಮುಳ್ಳು ಯಾಕೆ ಕಲ್ಲು ವಿಧಾತನಿಗೆ ಗೊತ್ತು
ಅವೂ ಯೋಚಿಸುತ್ತವೆ ಕೂತು ಬಹಳ ಹೊತ್ತು

ವಿಷಯ ಅಸ್ಪಷ್ಟ
ಪೆನ್ನು ಹರಿದಲ್ಲಿ ಗೆರೆಗಳು
ಮಸಿ ಮುಗಿದಲ್ಲಿ ಮೇರೆಗಳು
ಅಂತಿಮವಾಗಿ ಏನು

ಘನ ಕಾವ್ಯಗಳೆದುರು ಹೀಗೆ ಸುಳಿಯುವುದಕ್ಕೆ
ಅದೆಂಥ ಧೈರ್ಯ ಅಥವಾ ಮುಗ್ಧತೆ
ಜನ ಕಂಡಿದ್ದಾರೆ ಚಂಡಮಾರುತಗಳಂಥ ಯುದ್ದಗಳ
ಗುಡಿ ಗುಡಾರಗಳನ್ನೆ ಎತ್ತಿಹಾಕಿವೆ ದುರ್ಗ ಅರಮನೆಗಳ
ನೆಲಸಮ ಮಾಡಿವೆ ಇನ್ನು ವಾಡೆಗಳ ಬೀದಿಗಳ ಹಾದಿಗಳ
ಮಾತೇನು
ಆರಂಭಿಸಿದವರಿದ್ದಾರೆ ಎಲ್ಲವನ್ನೂ ಮೊದಲಿಂದ
ಯಾವುದೂ ಮೊದಲಿಂದ ಅಲ್ಲಿ ಖರೆ
ಮೌಲ್ಯ ಕಳಕೊಂಡ ಮೈಲಿಗಲ್ಲುಗಳು ಸ್ವರೂಪವಿಲ್ಲದ ಸೈಜುಗಲ್ಲುಗಳು
ಇತಿಹಾಸ ಪಡೆಯದೆ
ಇತಿ

ಲೆಕ್ಕವಿಲ್ಲದ ಆತ್ಮಗಳ ಕಂಡೆ
ವಿದ್ಯುತ್ ತಂತಿಗಳ ಮೇಲೆ
ಆತ್ಮಗಳೊ ಮಳೆನೀರ ಬಿಂದುಗಳೊ
ಹೊಳೆಯುತ್ತವೆ ಕರಗುತ್ತವೆ ನಿರ್ಭಾವ ನಿರ್ಮಮ
ಮಾತಿಲ್ಲದ ಕವಿತೆಯೇ ನಿನಗಷ್ಟೆ ಗೊತ್ತು
ಅವು ಮಾತಾಡುವುದು ಯಾರ ಜೊತೆ
ನಿರಪೇಕ್ಷ ಜಗತ್ತಿನಲ್ಲಿ ಇರುವೆಗಳಂತೆ ಇವೆ
ತಮಗಿಂತ ಹತ್ತುಪಟ್ಟು ಭಾರವ ಹೊತ್ತು

ಸಾಲುಗಳೆ ಇಲ್ಲ
*****

Tagged:

Leave a Reply

Your email address will not be published. Required fields are marked *

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...