Home / ಕವನ / ಕವಿತೆ / ಕನಸಿನ ದೊರೆತನ

ಕನಸಿನ ದೊರೆತನ

ನಾನೊಮ್ಮೆ ಕನಸಿನಲ್ಲಿ ರಾಜನಾಗಿದ್ದೆ
ಭೂ ಲೋಕದ ಒಡೆಯನಾಗಿ ಮೆರೆದಿದ್ದೆ
ನನ್ನದೇ ಮಾತು, ನನ್ನದೇ ರೀತಿ
ಪ್ರಶ್ನಿಸುವವರಿಲ್ಲದ ಪ್ರಪಂಚ

ಖಜಾನೆಯಲಿ ಕೊಳೆತು
ಬಿದ್ದಿರುವ ಸಂಪತ್ತು
ಇಷ್ಟಿದ್ದರೂ ಇಲ್ಲದವರಿಗೆ
ನೀಡಲೊಪ್ಪದ ಮನಸ್ಸು

ಕಾರಣವಿಲ್ಲದೆ ಹೊಗಳಿ
ಅಟ್ಟಕ್ಕೇರಿಸುವ ಮಂತ್ರಿ-ಮಾಗಧರು
ಹೊಗಳಿಕೆಯಿಂದ ಗಳಿಕೆ ಮಾಡಿಕೊಳ್ಳುವ
ಸ್ವಾರ್ಥ ತಿಳಿಯದ ಅವಿವೇಕಿ ನಾನು

ಇದ್ದಾರೆ ಪಟ್ಟದರಸಿಯರು
ಅಂತಃಪುರದಲ್ಲಿ; ಲೆಕ್ಕವಿಲ್ಲದಷ್ಟು
ನೀಡುತ್ತಿದ್ದಾರೆ ತಿಂದ ಅನ್ನಕ್ಕೆ
ಪ್ರತಿಫಲವಾಗಿ ಸುಖ, ಲೆಕ್ಕಕ್ಕಿಲ್ಲದಷ್ಟು

ರಾಜನಾದಾಗ ಅರಳಿ ಅಟ್ಟಕ್ಕೇರಿದ
ಮನಸ್ಸು ಮರುಳಾಗಿತ್ತು
ನಿಂತ ನೀರಿನ ಬದುಕು
ಬೇಸರ ತರಿಸಿತ್ತು.

ಕನಸೆಂಬ ಭ್ರಮೆಯಿಂದ
ಮನ ಹೊರಬಂದಿತ್ತು
ಖುಷಿಪಟ್ಟೆ; ನಾನಿನ್ನೂ
ರಾಜನಾಗಿಲ್ಲವಲ್ಲ ಎಂದು.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...