Home / ಕವನ / ಕವಿತೆ / ಇತಿಹಾಸದ ದಾರಿ

ಇತಿಹಾಸದ ದಾರಿ

ಇತಿಹಾಸದ ದಾರಿ ನೇರವಾಗಿತ್ತೆ ಎಂದಾದರೂ
ಎಡವಿಕೊಂಡೇ ಬಂದಿತೆ ಅದು ಇಲ್ಲೀವರೆಗೆ
ಇಲ್ಲಿಂದ ಇನ್ನೆಲ್ಲಿಗೆ ಕೋ ವಾಡಿಸ್ ಎನ್ನುತ್ತ ಪ್ರತಿಯೊಂದು ಬಾರಿ?
ದಾರಿ ಇದ್ದಿದ್ದರೆ ತಾನೆ ಅದಕ್ಕೆ ದಾರಿ ಕೇಳುವುದಕ್ಕು? ದಾರಿಯಿಲ್ಲದಲ್ಲಿ
ಸಾಗುವುದು ಇತಿಹಾಸ
ನನಗಿಷ್ಟೆ ಗೊತ್ತು

ಸಹಸ್ರಾರು ಗಾಯಗಳು ಗಾಯದ ಮೇಲೆ ಬರೆಗಳು
ಕೆಲವು ಮಾಯ್ದಿವೆ ಕಾಲಾಂತರದಲ್ಲಿ ಕಾಣಿಸದಾಗಿವೆ
ಕೆಲವು ವ್ರಣಗಳಿನ್ನೂ ಸೋರುತ್ತಿವೆ

ಇತಿಹಾಸದ ಬೃಹತ್ತು ತಾಳುವಂಥದು ನಮಗೆ
ಗೊತ್ತಾಗುವುದಿಲ್ಲ
ಇತಿಹಾಸದ ಸುಸ್ತೆನ್ನುವುದಿದೆ ಹೆಬ್ಬಂಡೆಗಳ ಮೇಲೆ ಕುಳಿತು
ದಣಿವಾರಿಸಿಕೊಳ್ಳುವುದು ದೈತ್ಯ ಇಗುವಾನ ಕುಳಿತ ಹಾಗೆ
ಸತ್ತಂತೆ ಸತ್ತಿತೆಂದರೆ ತಲೆಯಾಡಿಸುವುದು
ಅದರ ಹಿನ್ನೋಟ ಅಂಥ ಕಾಲದಲಿ

ಭೀಕರ ಚಂಡಮಾರುತಕ್ಕೆ ಅಪ್ಪಳಿಸುವ ಮರ
ಅಲ್ಲಲ್ಲಿ ಗೂಡುಕಟ್ಟಿರುವ ಇರುವೆಗಳು
ಕೆಲವು ಬಿದ್ದು ಸಾಯುತ್ತವೆ ನೆಲದಲ್ಲಿ
ಇನ್ನುಳಿದವು ಹಾಗೇ ನೋಡುತ್ತವೆ ಬೆಪ್ಪಾಗಿ

ಎಲ್ಲಿ ಅಡಗಿರುತ್ತದೆ ಇತಿಹಾಸದ ಕ್ರತುಶಕ್ತಿ
ಎಂದು ಕೇಳುತ್ತೇನೆ
ರಾಜನಲ್ಲಿ ಅಥವ ವಿದೂಷಕನಲ್ಲಿ?

ಆಟದ ಗೆಲುವು ಎಲ್ಲಿರುತ್ತದೆ ಇದೊಂದು
ಆಟವೆ ಆಗಿದ್ದಲ್ಲಿ
ಆಡಿದವನ ಕೈಯಲ್ಲಿ ಅಥವ ಕಾಯಿಯ ವಕ್ರತೆಯಲ್ಲಿ?

ನದಿ ಮತ್ತು ಸೇತು ಗಿರಿ ಮತ್ತು ಸುರಂಗ
ಹಡಗವೂ ತುಫಾನವೂ ಯಾವುದು
ಯಾವುದು?

ಇಷ್ಟು ದೂರಕ್ಕೆ ವಕ್ರತೆಯೆನ್ನುವುದೇ ಇಲ್ಲ
ಎಲ್ಲ ವಕ್ರತೆಗಳೂ ಸರಳ ರೇಖೆಗಳೆ ಯಾಕೆಂದರೆ ನಾವು ಅನಂತತೆಯ
ಅಂಚಿನಲ್ಲಿದ್ದೇವೆ ಇಣುಕುತ್ತ
ಚಂದ್ರನ ಆಳಗಳೂ ದೃಷ್ಟಿ ಬೊಟ್ಟುಗಳೆ

ಸರಿ ತಪ್ಪು ನ್ಯಾಯಾನ್ಯಾಯಗಳು ಮೆನೆಖಿಯನ್ ವಿಂಗಡನೆ
ಇಂದು ಕಾರಣ ನೀಡಿದಷ್ಟೂ ದ್ವಂದ್ವಗಳು ನಾಶ
ಇತಿಹಾಸವೊಂದು ಕಂಟಿನ್ಯೂವಂ
ಅಥವ ತರಂಗಾಂತರಂಗ?

ಕತ್ತಲಿಲ್ಲದ ಬೆಳಕಿಲ್ಲದ ಮಬ್ಬಿನ ಪ್ರದೇಶ
ಯಾರು ಸಂಜ್ಞಾದೇವಿ ಯಾರು ಛಾಯಾದೇವಿ
ಪುರಾಣಗಳ ನಾಶಪಡಿಸಿದ ಇತಿಹಾಸ ಬೇರ್ಪಡಿಸುವಂತಿಲ್ಲ
ಕಾಯದಿಂದ ಛಾಯೆಯ

ಅದು ಹಿಂದೆ ನೋಡಿದಾಗ ತನ್ನ ಕಣ್ಣನ್ನೆ ಕಂಡ ಹಾಗೆ
ಮುಂದೆ ನೋಡಿದಾಗ ಅದಕ್ಕೆ ಕಣ್ಣುಗಳೆ ಇಲ್ಲ
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...