Home / ಕವನ / ಕವಿತೆ / ಅಲ್ಲಿಂದ ಬಂದವ ಮತ್ತೆ

ಅಲ್ಲಿಂದ ಬಂದವ ಮತ್ತೆ

ನಮ್ಮ ಮೈಯುರಿತಕ್ಕೆ ಪೂರ್ವಜರ ಹಳಿಯುವುದೆ?
ಸತ್ತವರನೆಬ್ಬಿಸಿ ಒದೆಯುವುದೆ ಅವರ ಅಳಿದುಳಿದ ಮೂಳೆಗೆ?
ಸಾಧ್ಯವಿದ್ದರೆ ಅವರು ತಡವುತಿದ್ದರು ನಮ್ಮ ಉತ್ಥಾನ ಪಾದಗಳ
ದೇವರ ಕೊಂದು ಕೈತೊಳೆದು ಇನ್ನೂ ಆಗಿಲ್ಲ ಇನ್ನೂರು ವರ್ಷ
ಆಗಲೇ ಇನ್ನಷ್ಟು ಹತ್ಯೆಗಳ ತವಕ ಇದಕಿಂತ ಮಿಗಿಲಾದ
ಪಾತಕ ಇನ್ನಿಲ್ಲ

ಗುರುವಿಲ್ಲ ಗುರುಸಮಾನರಿಲ್ಲ ಪೂಜನೀಯವಿಲ್ಲ ಪೂಜ್ಯ
ಸ್ಥಳ ಯಾವುದೂ ಉಳಿದಿಲ್ಲ
ಅಘೋರಿಗಳ ನಾಡು ನಿಂತಲ್ಲಿ ಶ್ಮಶಾನ ಕುಳಿತಲ್ಲಿ ಸಮಾಧಿ
ಉಗುಳು ನುಂಗಿದಲ್ಲಿ ತೀರ್ಥ
ಮುಖ ಮುಖ ನೋಡುತಿವೆ
ಪ್ರಚ್ಛನ್ನ ಸಮರ
ಆಯುಧ ಮೊದಲು ತೆಗೆದವರು ಗೆದ್ದರು
ಬಿಟ್ಟುಕೊಟ್ಟವರು ಸೋತರು
ಯಾರಿಗೂ ವಿರೋಧಿಗಳಲ್ಲದೆ ಇನ್ನೇನೂ ಗೋಚರಿಸುವುದಿಲ್ಲ
ಪಾರ್ಶ್ವ ದೃಷ್ಟಿಯ ಕಳಕೊಂಡ ಮನುಷ್ಯ ಎಷ್ಟು ನೋಡಿದರೇನು
ಏನೂ ಕಾಣಿಸರು-ರಸ್ತೆ ಬದಿಯ ಹೂವು ಬೆಟ್ಟದ ಮರೆಯ ನೆರಳು
ಕುರಿಗಳ ಹಿಂಡು ಆಚೀಚಿನ ಮನೆ ಬೀದಿ ಬಯಲು

ನೆಟ್ಟ ದೃಷ್ಟಿಗೆ ಕಾಣಿಸದು ನೀರಿನ ಆಳ ನೆಟ್ಟ ದೃಷ್ಟಿಗೆ ಬರೀ
ನೇರತ್ವದ ಅಹಂಕಾರ ಅದರ ಕಠೋರತೆಯ ತಿದ್ದುವುದಕ್ಕೆ
ಓರೆ ನೋಟವೆ ಬೇಕು ಓರೆ ಬೈತಿಲೆ ಹೆದ್ದಾರಿಗೆ ಅಡ್ಡದಾರಿಯ ಸ್ಪರ್ಶ
ಗಲ್ಲಿ ಗಲ್ಲಿಗಳ ಸುತ್ತಾಡಿಸಿ ತೋರಿಸುವುದು ಆ ಅಂಥ ದೃಶ್ಯದ
ಮುಂದೆ ಇಂಥ ದೃಶ್ಯ? ಅಲ್ಲಿಂದ ಬಂದವ ಮತ್ತೆ
ಮೊದಲಿನಂತಿರುವುದಿಲ್ಲ
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...