Home / ಕವನ / ಕವಿತೆ / ಅಲ್ಲಿಂದ ಬಂದವ ಮತ್ತೆ

ಅಲ್ಲಿಂದ ಬಂದವ ಮತ್ತೆ

ನಮ್ಮ ಮೈಯುರಿತಕ್ಕೆ ಪೂರ್ವಜರ ಹಳಿಯುವುದೆ?
ಸತ್ತವರನೆಬ್ಬಿಸಿ ಒದೆಯುವುದೆ ಅವರ ಅಳಿದುಳಿದ ಮೂಳೆಗೆ?
ಸಾಧ್ಯವಿದ್ದರೆ ಅವರು ತಡವುತಿದ್ದರು ನಮ್ಮ ಉತ್ಥಾನ ಪಾದಗಳ
ದೇವರ ಕೊಂದು ಕೈತೊಳೆದು ಇನ್ನೂ ಆಗಿಲ್ಲ ಇನ್ನೂರು ವರ್ಷ
ಆಗಲೇ ಇನ್ನಷ್ಟು ಹತ್ಯೆಗಳ ತವಕ ಇದಕಿಂತ ಮಿಗಿಲಾದ
ಪಾತಕ ಇನ್ನಿಲ್ಲ

ಗುರುವಿಲ್ಲ ಗುರುಸಮಾನರಿಲ್ಲ ಪೂಜನೀಯವಿಲ್ಲ ಪೂಜ್ಯ
ಸ್ಥಳ ಯಾವುದೂ ಉಳಿದಿಲ್ಲ
ಅಘೋರಿಗಳ ನಾಡು ನಿಂತಲ್ಲಿ ಶ್ಮಶಾನ ಕುಳಿತಲ್ಲಿ ಸಮಾಧಿ
ಉಗುಳು ನುಂಗಿದಲ್ಲಿ ತೀರ್ಥ
ಮುಖ ಮುಖ ನೋಡುತಿವೆ
ಪ್ರಚ್ಛನ್ನ ಸಮರ
ಆಯುಧ ಮೊದಲು ತೆಗೆದವರು ಗೆದ್ದರು
ಬಿಟ್ಟುಕೊಟ್ಟವರು ಸೋತರು
ಯಾರಿಗೂ ವಿರೋಧಿಗಳಲ್ಲದೆ ಇನ್ನೇನೂ ಗೋಚರಿಸುವುದಿಲ್ಲ
ಪಾರ್ಶ್ವ ದೃಷ್ಟಿಯ ಕಳಕೊಂಡ ಮನುಷ್ಯ ಎಷ್ಟು ನೋಡಿದರೇನು
ಏನೂ ಕಾಣಿಸರು-ರಸ್ತೆ ಬದಿಯ ಹೂವು ಬೆಟ್ಟದ ಮರೆಯ ನೆರಳು
ಕುರಿಗಳ ಹಿಂಡು ಆಚೀಚಿನ ಮನೆ ಬೀದಿ ಬಯಲು

ನೆಟ್ಟ ದೃಷ್ಟಿಗೆ ಕಾಣಿಸದು ನೀರಿನ ಆಳ ನೆಟ್ಟ ದೃಷ್ಟಿಗೆ ಬರೀ
ನೇರತ್ವದ ಅಹಂಕಾರ ಅದರ ಕಠೋರತೆಯ ತಿದ್ದುವುದಕ್ಕೆ
ಓರೆ ನೋಟವೆ ಬೇಕು ಓರೆ ಬೈತಿಲೆ ಹೆದ್ದಾರಿಗೆ ಅಡ್ಡದಾರಿಯ ಸ್ಪರ್ಶ
ಗಲ್ಲಿ ಗಲ್ಲಿಗಳ ಸುತ್ತಾಡಿಸಿ ತೋರಿಸುವುದು ಆ ಅಂಥ ದೃಶ್ಯದ
ಮುಂದೆ ಇಂಥ ದೃಶ್ಯ? ಅಲ್ಲಿಂದ ಬಂದವ ಮತ್ತೆ
ಮೊದಲಿನಂತಿರುವುದಿಲ್ಲ
*****

Tagged:

Leave a Reply

Your email address will not be published. Required fields are marked *

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...