Home / ಕವನ / ಕವಿತೆ / ಅಲ್ಲಿಂದ ಬಂದವ ಮತ್ತೆ

ಅಲ್ಲಿಂದ ಬಂದವ ಮತ್ತೆ

ನಮ್ಮ ಮೈಯುರಿತಕ್ಕೆ ಪೂರ್ವಜರ ಹಳಿಯುವುದೆ?
ಸತ್ತವರನೆಬ್ಬಿಸಿ ಒದೆಯುವುದೆ ಅವರ ಅಳಿದುಳಿದ ಮೂಳೆಗೆ?
ಸಾಧ್ಯವಿದ್ದರೆ ಅವರು ತಡವುತಿದ್ದರು ನಮ್ಮ ಉತ್ಥಾನ ಪಾದಗಳ
ದೇವರ ಕೊಂದು ಕೈತೊಳೆದು ಇನ್ನೂ ಆಗಿಲ್ಲ ಇನ್ನೂರು ವರ್ಷ
ಆಗಲೇ ಇನ್ನಷ್ಟು ಹತ್ಯೆಗಳ ತವಕ ಇದಕಿಂತ ಮಿಗಿಲಾದ
ಪಾತಕ ಇನ್ನಿಲ್ಲ

ಗುರುವಿಲ್ಲ ಗುರುಸಮಾನರಿಲ್ಲ ಪೂಜನೀಯವಿಲ್ಲ ಪೂಜ್ಯ
ಸ್ಥಳ ಯಾವುದೂ ಉಳಿದಿಲ್ಲ
ಅಘೋರಿಗಳ ನಾಡು ನಿಂತಲ್ಲಿ ಶ್ಮಶಾನ ಕುಳಿತಲ್ಲಿ ಸಮಾಧಿ
ಉಗುಳು ನುಂಗಿದಲ್ಲಿ ತೀರ್ಥ
ಮುಖ ಮುಖ ನೋಡುತಿವೆ
ಪ್ರಚ್ಛನ್ನ ಸಮರ
ಆಯುಧ ಮೊದಲು ತೆಗೆದವರು ಗೆದ್ದರು
ಬಿಟ್ಟುಕೊಟ್ಟವರು ಸೋತರು
ಯಾರಿಗೂ ವಿರೋಧಿಗಳಲ್ಲದೆ ಇನ್ನೇನೂ ಗೋಚರಿಸುವುದಿಲ್ಲ
ಪಾರ್ಶ್ವ ದೃಷ್ಟಿಯ ಕಳಕೊಂಡ ಮನುಷ್ಯ ಎಷ್ಟು ನೋಡಿದರೇನು
ಏನೂ ಕಾಣಿಸರು-ರಸ್ತೆ ಬದಿಯ ಹೂವು ಬೆಟ್ಟದ ಮರೆಯ ನೆರಳು
ಕುರಿಗಳ ಹಿಂಡು ಆಚೀಚಿನ ಮನೆ ಬೀದಿ ಬಯಲು

ನೆಟ್ಟ ದೃಷ್ಟಿಗೆ ಕಾಣಿಸದು ನೀರಿನ ಆಳ ನೆಟ್ಟ ದೃಷ್ಟಿಗೆ ಬರೀ
ನೇರತ್ವದ ಅಹಂಕಾರ ಅದರ ಕಠೋರತೆಯ ತಿದ್ದುವುದಕ್ಕೆ
ಓರೆ ನೋಟವೆ ಬೇಕು ಓರೆ ಬೈತಿಲೆ ಹೆದ್ದಾರಿಗೆ ಅಡ್ಡದಾರಿಯ ಸ್ಪರ್ಶ
ಗಲ್ಲಿ ಗಲ್ಲಿಗಳ ಸುತ್ತಾಡಿಸಿ ತೋರಿಸುವುದು ಆ ಅಂಥ ದೃಶ್ಯದ
ಮುಂದೆ ಇಂಥ ದೃಶ್ಯ? ಅಲ್ಲಿಂದ ಬಂದವ ಮತ್ತೆ
ಮೊದಲಿನಂತಿರುವುದಿಲ್ಲ
*****

Tagged:

Leave a Reply

Your email address will not be published. Required fields are marked *

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...