Home / ಕವನ / ಕವಿತೆ / ನಮ್ಮ ಗೊಮ್ಮಟ

ನಮ್ಮ ಗೊಮ್ಮಟ

ಎಲ್ಲರಂಥವನಲ್ಲ
ನಮ್ಮ ಗೊಮ್ಮಟ
ಮಳೆಯಲು ಬಿಸಿಲಲು
ಇವನೊಬ್ಬನೆ ಮನ್ಮಥ

ಏನು ಮೈ ಏನು ಮಾಟ
‘ಏನುದಾತ್ತ ನೋಟವು
ಹುಟ್ಟಿದುದಕೆ ಸಾರ್‍ಥಕವಾಯ್ತೊ
ಇವನು ನಿಂತ ಬೆಟ್ಟವು

ರಾಜ್ಯ ಬಿಟ್ಟು ವಿರಾಜಮಾನ
ಈ ವರ್‍ಧಮಾನ
ಯುಗದಗಲ ಜಗದಗಲ
ಈ ಪ್ರವರ್‍ಧಮಾನ

ಎಂಥ ಮನದ ಎಂಥ ಜನದ
ಜಿನಕಲ್ಪನವೀತನ
ಬಾಹು ಬಲಕಿಂತ ಮನೋ-
ಬಲವೆ ಬಲ ಎಂದವನ

ಪಾದ ನಾವು ತಬ್ಬುವೆವು
ಬೆರಳ ನಾವು ಮುಟ್ಟುವೆವು
ತಲೆಯೆತ್ತಿ ಬೆರಗಾಗಿ
ಎತ್ತರೆತ್ತರ ನೋಡುವೆವು

ನಿಂತರಿಂತು ನಿಲಬೇಕಯ್ಯ
ಎಂದು ಹೇಳಿಕೊಳ್ಳುವೆವು
ಗೆದ್ದರಿಂತು ಗೆಲಬೇಕಯ್ಯ
ಎಂದು ಕೊಂಡಾಡುವೆವು

ಹಾಲುತುಪ್ಪ ಕಾಡ ಜೇನು
ಮಹಾಮಸ್ತಕಾಭಿಷೇಕ
ಸುರಿದರೆಷ್ಟೊ ಉದಕವನೂ
ಇವನಿಗೆಲ್ಲ ರೂಪಕ

ಸವಣರಾಗದವರು ಯಾರು
ಇಂಥ ಜಿನನ ಮುಂದೆ
ಉಳ್ಳವರೂ ಇಲ್ಲದವರೂ
ತೊಪ್ಪದೊಂದೆ ಮುಂದೆ

ಕಾಲಚಕ್ರ ಸಾಗೀತೆ
ಇವನ ಚಿತ್ತದೆಡೆಗೆ
ಧರ್‍ಮಚಕ್ರ ಉರುಳೀತೆ
ಇವನ ಸತ್ಯದೊಳಗೆ

ಕೇಳಬೇಕು ಎಲ್ಲರೂ
ಕೇಳಿದವರೇ ಉತ್ತರ
ಇಲ್ಲದಿದ್ದರೇನು ಬಂತು
ಏರಿ ಅಷ್ಟು ಎತ್ತರ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...