Home / ಕವನ / ಕವಿತೆ / ನಮ್ಮ ಗೊಮ್ಮಟ

ನಮ್ಮ ಗೊಮ್ಮಟ

ಎಲ್ಲರಂಥವನಲ್ಲ
ನಮ್ಮ ಗೊಮ್ಮಟ
ಮಳೆಯಲು ಬಿಸಿಲಲು
ಇವನೊಬ್ಬನೆ ಮನ್ಮಥ

ಏನು ಮೈ ಏನು ಮಾಟ
‘ಏನುದಾತ್ತ ನೋಟವು
ಹುಟ್ಟಿದುದಕೆ ಸಾರ್‍ಥಕವಾಯ್ತೊ
ಇವನು ನಿಂತ ಬೆಟ್ಟವು

ರಾಜ್ಯ ಬಿಟ್ಟು ವಿರಾಜಮಾನ
ಈ ವರ್‍ಧಮಾನ
ಯುಗದಗಲ ಜಗದಗಲ
ಈ ಪ್ರವರ್‍ಧಮಾನ

ಎಂಥ ಮನದ ಎಂಥ ಜನದ
ಜಿನಕಲ್ಪನವೀತನ
ಬಾಹು ಬಲಕಿಂತ ಮನೋ-
ಬಲವೆ ಬಲ ಎಂದವನ

ಪಾದ ನಾವು ತಬ್ಬುವೆವು
ಬೆರಳ ನಾವು ಮುಟ್ಟುವೆವು
ತಲೆಯೆತ್ತಿ ಬೆರಗಾಗಿ
ಎತ್ತರೆತ್ತರ ನೋಡುವೆವು

ನಿಂತರಿಂತು ನಿಲಬೇಕಯ್ಯ
ಎಂದು ಹೇಳಿಕೊಳ್ಳುವೆವು
ಗೆದ್ದರಿಂತು ಗೆಲಬೇಕಯ್ಯ
ಎಂದು ಕೊಂಡಾಡುವೆವು

ಹಾಲುತುಪ್ಪ ಕಾಡ ಜೇನು
ಮಹಾಮಸ್ತಕಾಭಿಷೇಕ
ಸುರಿದರೆಷ್ಟೊ ಉದಕವನೂ
ಇವನಿಗೆಲ್ಲ ರೂಪಕ

ಸವಣರಾಗದವರು ಯಾರು
ಇಂಥ ಜಿನನ ಮುಂದೆ
ಉಳ್ಳವರೂ ಇಲ್ಲದವರೂ
ತೊಪ್ಪದೊಂದೆ ಮುಂದೆ

ಕಾಲಚಕ್ರ ಸಾಗೀತೆ
ಇವನ ಚಿತ್ತದೆಡೆಗೆ
ಧರ್‍ಮಚಕ್ರ ಉರುಳೀತೆ
ಇವನ ಸತ್ಯದೊಳಗೆ

ಕೇಳಬೇಕು ಎಲ್ಲರೂ
ಕೇಳಿದವರೇ ಉತ್ತರ
ಇಲ್ಲದಿದ್ದರೇನು ಬಂತು
ಏರಿ ಅಷ್ಟು ಎತ್ತರ
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...