Home / ಕವನ / ಕವಿತೆ / ನಮ್ಮ ಗೊಮ್ಮಟ

ನಮ್ಮ ಗೊಮ್ಮಟ

ಎಲ್ಲರಂಥವನಲ್ಲ
ನಮ್ಮ ಗೊಮ್ಮಟ
ಮಳೆಯಲು ಬಿಸಿಲಲು
ಇವನೊಬ್ಬನೆ ಮನ್ಮಥ

ಏನು ಮೈ ಏನು ಮಾಟ
‘ಏನುದಾತ್ತ ನೋಟವು
ಹುಟ್ಟಿದುದಕೆ ಸಾರ್‍ಥಕವಾಯ್ತೊ
ಇವನು ನಿಂತ ಬೆಟ್ಟವು

ರಾಜ್ಯ ಬಿಟ್ಟು ವಿರಾಜಮಾನ
ಈ ವರ್‍ಧಮಾನ
ಯುಗದಗಲ ಜಗದಗಲ
ಈ ಪ್ರವರ್‍ಧಮಾನ

ಎಂಥ ಮನದ ಎಂಥ ಜನದ
ಜಿನಕಲ್ಪನವೀತನ
ಬಾಹು ಬಲಕಿಂತ ಮನೋ-
ಬಲವೆ ಬಲ ಎಂದವನ

ಪಾದ ನಾವು ತಬ್ಬುವೆವು
ಬೆರಳ ನಾವು ಮುಟ್ಟುವೆವು
ತಲೆಯೆತ್ತಿ ಬೆರಗಾಗಿ
ಎತ್ತರೆತ್ತರ ನೋಡುವೆವು

ನಿಂತರಿಂತು ನಿಲಬೇಕಯ್ಯ
ಎಂದು ಹೇಳಿಕೊಳ್ಳುವೆವು
ಗೆದ್ದರಿಂತು ಗೆಲಬೇಕಯ್ಯ
ಎಂದು ಕೊಂಡಾಡುವೆವು

ಹಾಲುತುಪ್ಪ ಕಾಡ ಜೇನು
ಮಹಾಮಸ್ತಕಾಭಿಷೇಕ
ಸುರಿದರೆಷ್ಟೊ ಉದಕವನೂ
ಇವನಿಗೆಲ್ಲ ರೂಪಕ

ಸವಣರಾಗದವರು ಯಾರು
ಇಂಥ ಜಿನನ ಮುಂದೆ
ಉಳ್ಳವರೂ ಇಲ್ಲದವರೂ
ತೊಪ್ಪದೊಂದೆ ಮುಂದೆ

ಕಾಲಚಕ್ರ ಸಾಗೀತೆ
ಇವನ ಚಿತ್ತದೆಡೆಗೆ
ಧರ್‍ಮಚಕ್ರ ಉರುಳೀತೆ
ಇವನ ಸತ್ಯದೊಳಗೆ

ಕೇಳಬೇಕು ಎಲ್ಲರೂ
ಕೇಳಿದವರೇ ಉತ್ತರ
ಇಲ್ಲದಿದ್ದರೇನು ಬಂತು
ಏರಿ ಅಷ್ಟು ಎತ್ತರ
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...