Home / ಕವನ / ಕವಿತೆ / ಏನೆಂದು ಹೇಳಲಿ ಅಕ್ಕ

ಏನೆಂದು ಹೇಳಲಿ ಅಕ್ಕ

ಏನೆಂದು ಹೇಳಲಿ ಅಕ್ಕ
ಮುತ್ತಿನ ಕತೆಯ
ಏನೆಂದು ಹೇಳಲಿ ಅದ
ಕಿತ್ತವನ ಕತೆಯ

ಬೃಂದಾವನ ತುಂಬ ಸುರಿಯಿತು ಮುತ್ತು
ಅದು ಸುರಿದರು ಇನ್ನೂ ಮುಗಿಯದೆ ಇತ್ತು

ಅತ್ತು ಕೇಳಿದ ಕೃಷ್ಣ
ಮತ್ತೂ ಕೇಳಿದ ಕೃಷ್ಣ
ಒತ್ತಾಯಿಸಿ ಕೇಳಿದ
ಸತ್ತಾಯಿಸಿ ಕೇಳಿದ
ಒಬ್ಬೊಬ್ಬ ಗೋಪಿಕೆಯ
ಹತ್ತು ಸಲ ಕೇಳಿದ
ಏನೆಂದು ಹೇಳಲಿ ಅಕ್ಕ
ಈ ಮುತ್ತಿನ ಕತೆಯ

ಒಬ್ಬೊಬ್ಬಳಿಂದಲು
ಒಂದೊಂದು ಮುತ್ತು
ದಿನವು ಬೇಡಿದನೆ
ಇನ್ನೊಂದು ಮುತ್ತು

ತುಟಿಗೊಂದು ಮುತ್ತು
ಕೆನ್ನೆಗೊಂದ್ಮುತ್ತು
ಹಣೆಗೊಂದು ಮುತ್ತು
ಹುಬ್ಬಿಗೆರಡಿತ್ತು

ನಗುತಿದ್ದರೊಂದು ಮುತ್ತು
ನಾಚುತಿದ್ದರು ಒಂದು ಮುತ್ತು
ಸುಮ್ಮನೆ ಹೋಗುತಿದ್ದರೆ ಮುತ್ತು
ಬಿಮ್ಮನೆ ಇದ್ದರೆ ಮುತ್ತೇ ಮುತ್ತು

ಮರೆಗಿದ್ದರೊಂದು ಮುತ್ತು
ಮಾತಾಡುತಿದ್ದರೆರಡು ಮುತ್ತು
ಹಾಡುತಿದ್ದರೆ ಹತ್ತು ಮುತ್ತು
ಮೌನವಾಗಿದ್ದರೆ ಮುನ್ನೂರು ಮುತ್ತು

ಹಾಲು ಕರೆಯುತ್ತಿದ್ದರೆ
ಕೇಳಿದಷ್ಟು ಮುತ್ತು
ನೀರು ತರುತಿದ್ದರೆ
ನೂರೊಂದು ಮುತ್ತು
ಐನೀರಿಗೈನೂರು ಮುತ್ತು
ರಂಗಿನಾಟಕೆ ಸಾವಿರ ಮುತ್ತು

ನಿನ್ನೆ ಬೇಕೆಂದನೆ
ಈ ದಿನ ಬೇಕೆಂದನೆ
ಈಗ ಬೇಕೆಂದನೆ
ಆಗ ಬೇಕೆಂದನೆ
ಯಾವತ್ತಿಗೂ ಅದು
ಸಾಕಾಗುವುದೆಂದನೆ
ಯಾವತ್ತಿಗೂ ಅದು
ಸಾಕಾಗದೆಂದನೆ

ಮುತ್ತು ಕೊಟ್ಟೇ ದಾರಿ
ಹೋಗಬೇಕೆಂದನೆ
ಶುದ್ಧ ಮುತ್ತೇ
ಆಗಬೇಕೆಂದನೆ
ಇದ್ದಷ್ಟೂ ಅವು
ಸಾಲದೆಂದನೆ
ಉದ್ದ ಮುತ್ತುಗಳೇ
ಒಳ್ಳೆಯದೆಂದನೆ
ಕದ್ದಾದರೂ ಅವ
ಕೊಡಬೇಕೆಂದನೆ

ಕೊಟ್ಟುದನೆಲ್ಲವ
ಚೆಲ್ಲಾಡಿ ಕೇಳಿದನೆ
ಕಳೆದುಹೋದುವು ಎಂದು
ಗೋಳಾಡಿ ಕೇಳಿದನೆ
ಆಡಿ ಕೇಳಿದನೆ ಕುಣಿ-
ದಾಡಿ ಕೇಳಿದನೆ
ಎಲ್ಲೆಂದರಲ್ಲಿ ಕಾಡಿ ಕೇಳಿದನೆ
ನಗಾಡಿ ಕೇಳಿದನೆ
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...