Home / ಕವನ / ಕವಿತೆ / ದೇವ್ರು

ದೇವ್ರು

ಮುಚ್ ನಿನ್ನ್ ಬಾಯಿ! ಏ ಬೇವಾರ್‍ಸಿ!
ಬಗವಂತ್ನ್ ಎಸರು ನಮಗೆ ತಾರ್‍ಸಿ!
ಇಲ್ದಿದ್ನೆಲ್ಲ ವುಟ್ಟೀಸ್ಕೊಂಡಿ
ಏಕ್ ಸುಂಕ ಕೂಗ್ತಿ ಕಾಲಿ?
ನಮಗೆ ದೇವು, ಯೆಂಗೌನೇಂದ್ರೆ
ಮುತ್ತೈದೇಗೆ ತಾಲಿ! ೧

ದೇವ್ರ್ ಇಲ್ಲಾಂತ ಯೋಳ್ದ್ರೆ ನೀನು
ದೇವ್ರ್ ಔನೇಂತ ಯೋಳ್ತೀನ್ ನಾನು!
ಮಡಿಕೇಲ್ ತುಂಬಿದ್ ಯೆಂಡ ತನ್ಗೆ
ಸಿಕ್ದೆ ವೋದ್ರೆ ಸೋತು
ಪರ್‍ಪಂಚ್ದಲ್ಲೇ ಯೆಂಡಿಲ್ಲಾಂದ್ರೆ
ಆದಾ ಸಾಜ ಮಾತು! ೨

ನನಗೇನ್ ಬೇಡ ನಿನ್ ಬುದ್ವಾದ!
ನಂಗೂ ನಿಂಗೂ ಬಾಳ ಬೇದ!
ನಂ ತಾಪತ್ರೇನ್ ಮುಳಗಿಸ್ತೈತೆ
ಬಗವಂತ್ನ್ ಎಸರಿನ್ ಸಕ್ತಿ!
ಅದಕೇ ನಮಗೆ ಬಗವಂತ್ನ್ ಎಸರು
ಅಂದ್ರ್ ಆಪಾಟಿ ಬಕ್ತಿ! ೩

ದೇವ್ರ್ ಔನಂತೆ! ದೇವ್ರ್ ಇಲ್ವಂತೆ!
ಯೋಳಾರ್ ಯೋಳ್ಲಿ- ಅದಕೇನಂತೆ?
ದೇವ್ರ್ ಔನ್ ಅಂತ ನೆಂಕೊಳ್ಳಾದು
ನಮಗೆ ಜೀವ-ಉಸರು!
ಔನಲ್ ನೆಮ್ಕೆ ಮಡಿಕ್ಕೊಳ್ಳಾದು
ನಮಗೆ ನೆಮ್ದ ನಸರು! ೪
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...