Home / ಕವನ / ಕವಿತೆ / ನನ್ನ ಜನಗಳು

ನನ್ನ ಜನಗಳು

ಕೈಯಲ್ಲಿ ಕೋವಿ ಹಿಡಿದವರು
ನನ್ನ ಜನಗಳಲ್ಲ ಸ್ವಾಮಿ
ಭತ್ತದ ಗದ್ದೆಯಲಿ ನಡು ಬಗ್ಗಿಸಿ
ಕುಡುಗೋಲು ಹಿಡಿದವರು ಅವರು.
ನನ್ನವರ ಎದೆಯಲ್ಲಿ ಕಾವ್ಯವಿದೆ
ಎತ್ತಿನ ಗೆಜ್ಜೆನಾದ, ಹಂತಿ ಹಾಡುಗಳಿವೆ
ನೋವು ಮರೆತು ಹಾಡುತ್ತಾರೆ.
ಸಂಘರ್‍ಷದ ಬದುಕು ಬದುಕುತ್ತಾರೆ.
ಮನದಲ್ಲಿ ಛಲ ಹೊತ್ತ ನನ್ನವರ
ಎದೆ ತುಂಬ ಗಾಯಗಳು.
ಹರಿದು ಸೋರಿದ ಕೀವು ರಕ್ತ
ಹಾಡಿನ ಹೊನಲಾಗಿ ಹರಿಯುವವು.
ದೀಪವಿಲ್ಲದ ಕತ್ತಲ-ಹಳ್ಳಿಗಳಲ್ಲಿ
ಅಜ್ಞಾತ ಬದುಕು ಬದುಕುತ್ತಿರುವವರು
ಕೊಡ ನೀರಿಗಾಗಿ ಮೈಲು ನಡೆದವರು.
ಅವರು ಆತ್ಮವಿಶ್ವಾಸದ ಪರ್‍ವತಗಳು ಸ್ವಾಮಿ
ನನ್ನ ಜನಗಳು ಕನಸುಗಾರರು
ಪ್ರಾಮಾಣಿಕ ಬದುಕು ಬದುಕುತ್ತಿರುವವರು
ಸರಳತೆಯ ಜೀವನ ಸಾಗಿಸುತ್ತಿರುವವರು.
ನವಿಲ ಗರಿಯಂಥ ಹುಲ್ಲ ಗರಿಕೆಗಳ
ಹೊತ್ತ ಗುಡಿಸಲುಗಳ ಹೊದಿಕೆಗಳ ಕೆಳಗೆ
ಸಂತರ ನಡೆನುಡಿಗಳು ಅವರದು ಸ್ವಾಮಿ,
ಕನಸಿನ ಲೋಕಕ್ಕೆ ಅವರು
ಮೆಟ್ಟಿಲುಗಳ ಕಟ್ಟಿದವರು
ಕನಸು ಕಮರಿದರೂ,
ಸ್ವಾಭಿಮಾನದ ಉನ್ನತ ಬದುಕು
ಪ್ರೀತಿಸಿದವರು.
ನನ್ನವರ ಬೇಡಿಕೆಗಳು ಸೀಮಿತ
ಮಣ್ಣ ಹಣತೆಯ ಆಯುಷ್ಯ ಅವರದು
ಆದರೂ ಬೆಳಕು ಅನಂತಕಾಲ ಸ್ವಾಮಿ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...