Home / ಕಥೆ / ಕಿರು ಕಥೆ / ಗುಡ್ಡಕಾಡಿನ-ರಾಜ್ಯಭಾರ

ಗುಡ್ಡಕಾಡಿನ-ರಾಜ್ಯಭಾರ

ಅದೊಂದು ಬೆಟ್ಟಗುಡ್ಡಕಾಡು, ಅಲ್ಲಿ ಗುಡ್ಡ ಕಲ್ಲುಗಳ ರಾಜ್ಯಭಾರ. ನಡೆದು ಬರುತ್ತಾ ಒಮ್ಮೆ ನಾನೂ ಈ ಬೆಟ್ಟಗುಡ್ಡಗಳ ರಾಜ್ಯದಲ್ಲಿ ಹೆಜ್ಜೆ ಇಟ್ಟೆ. ಮೊದಲಿಗೆ ನನಗೆ ಹೆದರಿಕೆಯಾಯಿತು.

“ಅಬ್ಬಾ! ಇದೆಷ್ಟು ದೊಡ್ಡ ಬೆಟ್ಟ ಗುಡ್ಡಗಳು” ಎನಿಸಿತು. ಇವುಗಳ ಭಾರ, ಘನತೆ, ತೂಕ ಎಲ್ಲಾ ನನ್ನ ಭಾವಗಳನ್ನು ಕೆದಕಿತು. ಈ ಬೆಟ್ಟಗುಡ್ಡಗಳ ಕಾರ್ಯಭಾರ ಬಹಳ ಕಠಿಣವಿರಬೇಕೆಂದೆನಿಸಿತು. ಎಷ್ಟಾದರೂ ಕಲ್ಲುಗಳು ಇವು ಅಲ್ಲವೇ? ಇವುಗಳಿಗೆ ಹೃದಯವೆಲ್ಲಿ? ಇವು ಬರಿ ಬರಡು. ಬಂಡೆ ಮೈಯನ್ನು ಪ್ರಕೃತಿಗೆ ಒಡ್ಡಿ ಜಡವಾಗಿ ಯುಗದ ಉದ್ದಕ್ಕೂ ಬಿದ್ದಿರುವ ಇವುಗಳಿಂದ ಏನು ಪ್ರಯೋಜನ? ಎಂದೆಲ್ಲಾ ಯೋಚಿಸುತ್ತಿರುವಾಗ, ನನ್ನ ಹಿಂಬದಿಯಲ್ಲಿ ಕೂಡಲು ಆಸನದಂತಿದ್ದ ಗುಡ್ಡದಬಂಡೆ ನನ್ನ ಸ್ವಾಗತಿಸಿತು. ಆತ್ಮೀಯತೆ, ಆದರತೆಯಿಂದ ನನ್ನ ಕುಳ್ಳಿರಿಸಿತು. ನಡೆದು, ಸೋತ ನನ್ನ ಕಾಲುಗಳು ಪ್ರೀತಿಯ ಕರೆಯೋಲೆಗೆ ಸ್ಪಂದಿಸಿಯೋ ಎಂಬಂತೆ ಕುಳಿತು ಸುತ್ತ ನೋಡುತ್ತಿದ್ದೆ. ಆ ಬೆಟ್ಟಗುಡ್ಡಗಳ ವೈವಿಧ್ಯತೆ, ರೂಪ, ಸೌಂದರ್ಯ, ನುಣುಪು ಹೊಳಪು, ಆಕಾರ ಎಲ್ಲಾ ನನ್ನ ಮನವನ್ನು ಆಕ್ರಮಿಸಿತು. ಒಂದು ದೊಡ್ಡ ಬಂಡೆ, ಚಿಕ್ಕಬಂಡೆಯನ್ನು ತೊಡೆಯಲ್ಲಿಟ್ಟು ಕೂತಿತ್ತು ತಾಯಿ ಮಗುವಿನಂತೆ, ಪಕ್ಕದಲ್ಲಿ ಎರಡು ಸುಂದರ ನಿಲುವುಳ್ಳ ಗುಡ್ಡಗಳು ಪ್ರೇಮಿಗಳಂತೆ ಅತಿ ಸನಿಹದಲ್ಲಿ ನಿಂದು ಒಂದನ್ನೊಂದು ಮುತ್ತಿಕ್ಕುತ್ತಿದ್ದವು. ಮತ್ತೆ ಕೆಲವು ಒಂದರ ಮೇಲೊಂದು ಏರಿ ಸೃಷ್ಟಿ ಮಿಲನದ ಮಾಧುರ್ಯ ಸವಿಯುತ್ತಿದ್ದವು.

ಕೆಲವು ಗುಡ್ಡ ಬಂಡೆಗಳು ವಿರಕ್ತರಂತೆ ಏಕಾಂಗಿಗಳಾಗಿ ತಪದಲ್ಲಿದ್ದವು. ಮತ್ತೆ ಕೆಲವು ದೈವೀ ರೂಪದಲ್ಲಿ ರಾರಾಜಿಸುತಿತ್ತು. ಮತ್ತೆ ಕೆಲವು ದೊಡ್ಡ ಚಿಕ್ಕ ಬಂಡೆಗಳು ಒಟ್ಟು ಸೇರಿ ಸೃಷ್ಟಿಯ ನಿಗೂಢತೆ ಅರಿಯಲು ಸಮ್ಮೇಲನ ಮಾಡುತ್ತಿದ್ದವು.

ಇನ್ನು ಕೆಲವು ಸಸ್ಯ ಪ್ರೇಮಿಗಳಾಗಿ ಹುಲ್ಲು ಗಿಡಗಳ ಬಗಲಲ್ಲಿ ಕುಳಿತು ಅವುಗಳೊಡನೆ ಸಮರಸದಿಂದ ಬಾಳುತ್ತಿದ್ದವು. ಇನ್ನು ಕೆಲವು ಭೂಮಿ ತಾಯಿಯ ತೊಡೆಯ ಮೇಲೆ ದೀರ್ಘ ನಿದ್ದೆಯಲ್ಲಿದ್ದವು. ಇನ್ನು ಕೆಲವು ದಾರ್ಶನಿಕ ಬಂಡೆಗಳು ಆಗಸದ ಎತ್ತರಕ್ಕೆ ತಲೆಎತ್ತಿ ಸೃಷ್ಟಿಯ ಚಿಂತನೆಯಲ್ಲಿದ್ದವು. ಇಲ್ಲಿ ಎಲ್ಲಾ ಕಾರ್ಯಭಾರಗಳೂ ನಡೆದಿತ್ತು. ಆದರೆ ಇಲ್ಲಿ ಗೊಂದಲವಿಲ್ಲ, ಸದ್ದಿಲ್ಲ. ಎಲ್ಲಾ ಮೌನ ಸಾಮ್ರಾಜ್ಯ. ಮೌನದಲ್ಲಿ ರೂಪ, ಆಕಾರ, ಸಾಕಾರ, ಹೃದಯ ಭಾವ ಎಲ್ಲಾ ಝಂಕರಿಸಿತ್ತು. ಎಲ್ಲವೂ ಮೂಕ ವಿಸ್ಮಯದಿಂದ ಕೂಡಿತ್ತು. ಬಿಸಿಲು ಬಿದ್ದರು, ಬೆಳದಿಂಗಳು ಹರಿದರು, ಮಳೆಗರಿದರು, ಗುಡುಗಿದರು, ಮಿಂಚಿದರು, ಗಾಳಿ ಬೀಸಿದರು, ಮೋಡ ಚುಂಬಿಸಿದರು, ಒಂದೇ ಮೌನದ ಮುದ್ರೆ, ಒಂದೇ ಮೌನ ಸಮ್ಮತ. ಒಂದೇ ಮೌನಶಾಂತಿ, ಒಂದೇ ಮೌನ ನಿಶ್ಚಲತೆ, ಒಂದೇ ಮೌನ ಧೃತಿ. ಒಂದೇ ಮೌನ ಶೃತಿ.

ಇದನ್ನು ನೋಡುತ್ತಾ ನೋಡುತ್ತಾ ನನ್ನ ಹೃದಯ ಶೃತಿಗೆ ಶೃತಿಕೊಟ್ಟಿತು. ಗುಡ್ಡಹಾಡ ಗುನುಗಿತು. ಬೆಟ್ಟ ಭಾವಬೆಳೆಸಿತು, ಕಲ್ಲು ಕರುಣೆ ಹರಿಸಿತು, ಗುಡ್ಡಬಂಡೆಗಳ ಹೃದಯ ವೇದ ನುಡಿಯಿತು. ಸತ್ಯಕ್ಕೆ ಕನ್ನಡಿ ಇಟ್ಟವು. ಸೌಂದರ್ಯಕ್ಕೆ ಸಾಕಾರವಾದವು.

ಮೂಕ ವಿಸ್ಮಯದಲ್ಲಿ ನಾ ಗುಡ್ಡ ಬೆಟ್ಟವಾದೆ. ನನ್ನ ಮುಂದೆ ನಿಂತ ಗುಡ್ಡಬೆಟ್ಟ ಮಾನವತ್ವದಿಂದ ದೈವತ್ವಕ್ಕೆ ಬೆಳೆದುನಿಂತವು.
*****

Tagged:

Leave a Reply

Your email address will not be published. Required fields are marked *

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...