Home / ಕವನ / ಕವಿತೆ / ವೋಟು ಬೇಟೆಯಾಟ

ವೋಟು ಬೇಟೆಯಾಟ

ಜಾಣರಾಗಿರೋ ಜನರು ಜಾಣರಾಗಿರೋ
ವೋಟು ಬೇಟೆಯಾಟದಲ್ಲಿ ಜಾಣರಾಗಿರೋ ||ಪ||

ನಮ್ಮ ನಿಮ್ಮ ಮಧ್ಯದಲ್ಲಿ ಪಕ್ಷ ಪಾರ್ಟಿ ಭೇದ ಮಾಡಿ
ನಮಗೆ ಕುಡಿಸಿ ತಿನಿಸಿ ಟಗರು ಕಾಳಗವನು ಮಾಡಿಸುವರು
ನಾವು ನೀವು ಬಡಿದಾಡುತ್ತ ಕಚ್ಚಾಡುವ ಬೆಂಕಿ ಹಚ್ಚಿ
ತಾವು ಅದರ ಉರಿಗೆ ಮೈಯ ಕಾಯಿಸುತ್ತ ಕುಳಿತಿರುವರು ||೧||

ವೋಟುಗಳಿಗೆ ನೋಟು ಚೆಲ್ಲಿ ಸೀಟು ಪಡೆದು ಕುಳಿತುಕೊಂಡು
ತಾವು ಚೆಲ್ಲಿದಂಥ ನೋಟು ನೂರು ಪಟ್ಟು ಹಡೆಯುವರು
ಜಾತಿ ಜಾತಿ ಎತ್ತಿ ಕಟ್ಟಿ ಭೇದಗಳ ಗೋಡೆ ಕಟ್ಟಿ
ಜನರ ದಡ್ಡತನವ ಬಳಸಿ ಭಂಡವಾಳ ಮಾಡುವರು ||೨||

ಚುನಾವಣೆಯ ವ್ಯಾಪಾರವು ನಡೆದಿರುವುದು ಭರ್ತಿಯಾಗಿ
ಹಣವ ಉಗ್ಗಿ ಹಣವ ಬಳಿವ ದೊಡ್ಡ ಸುಲಿಗೆ ವ್ಯಾಪಾರವು
ಕುರಿಗಳನ್ನು ಬೋಳಿಸಲಿಕೆ ಜನಕೋಟಿಯ ದೋಚಲಿಕ್ಕೆ
ಪೈಪೋಟಿಯ ನಡೆದಿದೆ ಕಟುಕರ ನೆರೆ ಮೆರೆದಿದೆ ||೩||

ಕೈಯ ತೋರಿಸುವವರಾಯ್ತು ನೇಗಿಲ ಹೊತ್ತವರೆ ಆಯ್ತು
ಜನರ ಸುಲಿಗೆ ಮಾಡುವಂಥ ವೇಷ ಪರಿಗಳೇ
ವೋಟು ಪಡೆದು ಹೊಳೆದಾಟಿದ ಮೇಲೆ ಜನರ ಮಿಂಡರು
ವೋಟಿಗಾಗಿ ಬೇಡುವಾಗ ಪೂಜ್ಯರಂತೆ ಕಂಡರು ||೪||

ಇಂಥ ತೋಳ ಹದ್ದುಗಳಿಗೆ ತಗ್ಗಿ ಬಗ್ಗಿ ಒಪ್ಪಿಕೊಂಡು
ಅವರು ಕುಣಿಸಿದಂತೆ ಕುಣಿವ ಜನರೆ ಸ್ವಲ್ಪ ಯೋಚಿಸಿ
ಅವರಿಗಾಗಿ ನಿಮ್ಮ ನಿಮ್ಮ ನಡುವೆ ಭೇದ ಬೆಳೆಸಿಕೊಂಡು
ಕಚ್ಚಾಡುವ ಬಡಿದಾಡುವ ನಾಯ್ಗಳೇನು ಚಿಂತಿಸಿ ||೫||

೧೪-೧೦-೮೬
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...