ಒಗಟು

ಗುರುಗಳು ಶಿಷ್ಯರಲ್ಲಿ ವ್ಯಾಖ್ಯಾನ ಮಾಡುತ್ತ ಹೇಳಿದರು. ಪ್ರತಿ ಮಾನವನಲ್ಲಿ, ಒಂದು ವಾಚ್ ಟವರ್ ದೇವರು ಕಟ್ಟಿದ್ದಾನೆ. ಅಲ್ಲಿ ಒಂದು ವಾಕಿಟಾಕಿ ಇದೆ. ಇದರ ಮುಂದೆ ಒಬ್ಬ ವಾಚ್‌ಮ್ಯಾನ್ ಇರುತ್ತಾನೆ ಎಂದರು.

ಶಿಷ್ಯರಿಗೆ ಒಗಟು ಬಿಡಿಸಲಾಗಲಿಲ್ಲ. ಗುರುವಿನಲ್ಲಿ ಒಗಟು ಬಿಡಿಸಿ ಹೇಳಲು ಬಿನ್ನವಿಸಿಕೊಂಡರು.

“ಮಾನವನ ತಲೆ ಒಂದು ವಾಚ್ ಟವರ್, ಇಲ್ಲಿ ಇರುವುದು ವಾಚ್ ಮಾಡುವ ಕಣ್ಣುಗಳು, ಕೆಟ್ಟದ್ದಕ್ಕೆ ಕಣ್ಣು ಮುಚ್ಚಿದ ಮಂಗನಂತೆ. ಒಳ್ಳೆಯದಕ್ಕೆ ತೆರೆದ ಕಣ್ಣಿನ ಬುದ್ಧನ ನೋಟದಂತೆ, ಮನದಾಳದ ಪ್ರಜ್ಞೆಯಂತೆ” ಎಂದರು.

ಇನ್ನು ವಾಕಿಟಾಕಿ-ಮಾನವ ಮನಸ್ಸಿಗೆ ಬಂದಂತೆ ಆಡುವ ಬಾಯಿ. ವಟಗುಟ್ಟುವ ಕಪ್ಪೆಯಂತೆ. ಇದು ಕೆಟ್ಟದ್ದನ್ನು ಆಡದ ಬಾಯಿಮುಚ್ಚಿಕೊಂಡ ಕೋತಿಯಂತೆ ಇರಬೇಕು. ಒಳ್ಳೆಯದನ್ನು ಸಾರುವ ಸಾಧನವಾಗಬೇಕು.

“ಇನ್ನು ಉಳಿದಿದ್ದು ವಾಚ್ ಮ್ಯಾನ್. ಅದು ಬುದ್ದಿ, ವಿವೇಚನೆ, ವಿವೇಕವನ್ನು ಕೇಳುವ ಕಿವಿಗಳು, ಕೆಟ್ಟದ್ದಕ್ಕೆ ಕಿವಿಮುಚ್ಚಿಕೊಂಡ ಕೋತಿಯಂತೆ ಇರಬೇಕು. ವಾಚ್ ಟವರ್ ಪ್ರಜ್ಞೆಯಲಿ ಮನಸ್ಸಿನ ವಾಕಿಟಾಕಿಯ ಮೌನಗೊಳಿಸಿ, ಬುದ್ದಿ ಎಂಬ ವಾಚ್ ಮ್ಯಾನ್‌ನು ನಮ್ಮ ಬಾಳ್ವೆಯ ಹಾದಿಗೆ ದಾರಿ ದರ್ಶನ ನೀಡಬೇಕು.” ಎಂದರು ಗುರುಗಳು.

ಶಿಷ್ಯಂದರಿಗೆ ಜೀವನಕ್ಕೊಂದು ದೀವಟಿಗೆ ಹಿಡಿದಂತೆನಿಸಿತು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...