ಒಗಟು

ಗುರುಗಳು ಶಿಷ್ಯರಲ್ಲಿ ವ್ಯಾಖ್ಯಾನ ಮಾಡುತ್ತ ಹೇಳಿದರು. ಪ್ರತಿ ಮಾನವನಲ್ಲಿ, ಒಂದು ವಾಚ್ ಟವರ್ ದೇವರು ಕಟ್ಟಿದ್ದಾನೆ. ಅಲ್ಲಿ ಒಂದು ವಾಕಿಟಾಕಿ ಇದೆ. ಇದರ ಮುಂದೆ ಒಬ್ಬ ವಾಚ್‌ಮ್ಯಾನ್ ಇರುತ್ತಾನೆ ಎಂದರು.

ಶಿಷ್ಯರಿಗೆ ಒಗಟು ಬಿಡಿಸಲಾಗಲಿಲ್ಲ. ಗುರುವಿನಲ್ಲಿ ಒಗಟು ಬಿಡಿಸಿ ಹೇಳಲು ಬಿನ್ನವಿಸಿಕೊಂಡರು.

“ಮಾನವನ ತಲೆ ಒಂದು ವಾಚ್ ಟವರ್, ಇಲ್ಲಿ ಇರುವುದು ವಾಚ್ ಮಾಡುವ ಕಣ್ಣುಗಳು, ಕೆಟ್ಟದ್ದಕ್ಕೆ ಕಣ್ಣು ಮುಚ್ಚಿದ ಮಂಗನಂತೆ. ಒಳ್ಳೆಯದಕ್ಕೆ ತೆರೆದ ಕಣ್ಣಿನ ಬುದ್ಧನ ನೋಟದಂತೆ, ಮನದಾಳದ ಪ್ರಜ್ಞೆಯಂತೆ” ಎಂದರು.

ಇನ್ನು ವಾಕಿಟಾಕಿ-ಮಾನವ ಮನಸ್ಸಿಗೆ ಬಂದಂತೆ ಆಡುವ ಬಾಯಿ. ವಟಗುಟ್ಟುವ ಕಪ್ಪೆಯಂತೆ. ಇದು ಕೆಟ್ಟದ್ದನ್ನು ಆಡದ ಬಾಯಿಮುಚ್ಚಿಕೊಂಡ ಕೋತಿಯಂತೆ ಇರಬೇಕು. ಒಳ್ಳೆಯದನ್ನು ಸಾರುವ ಸಾಧನವಾಗಬೇಕು.

“ಇನ್ನು ಉಳಿದಿದ್ದು ವಾಚ್ ಮ್ಯಾನ್. ಅದು ಬುದ್ದಿ, ವಿವೇಚನೆ, ವಿವೇಕವನ್ನು ಕೇಳುವ ಕಿವಿಗಳು, ಕೆಟ್ಟದ್ದಕ್ಕೆ ಕಿವಿಮುಚ್ಚಿಕೊಂಡ ಕೋತಿಯಂತೆ ಇರಬೇಕು. ವಾಚ್ ಟವರ್ ಪ್ರಜ್ಞೆಯಲಿ ಮನಸ್ಸಿನ ವಾಕಿಟಾಕಿಯ ಮೌನಗೊಳಿಸಿ, ಬುದ್ದಿ ಎಂಬ ವಾಚ್ ಮ್ಯಾನ್‌ನು ನಮ್ಮ ಬಾಳ್ವೆಯ ಹಾದಿಗೆ ದಾರಿ ದರ್ಶನ ನೀಡಬೇಕು.” ಎಂದರು ಗುರುಗಳು.

ಶಿಷ್ಯಂದರಿಗೆ ಜೀವನಕ್ಕೊಂದು ದೀವಟಿಗೆ ಹಿಡಿದಂತೆನಿಸಿತು.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...