ಶರಣಗಾನವು ಸುರಿಯಲಿ

ನಿತ್ಯ ನೆನೆನೆನೆ ಸತ್ಯ ಶಿವನನು
ಶರಣ ಗಾನವು ಸುರಿಯಲಿ
ನಿತ್ಯ ವಚನದ ಗಂಧ ಹರಡಲಿ
ವಿಶ್ವ ಸುಂದರವಾಗಲಿ

ಯುಗದ ಕೊನೆಯಲಿ ಕೂಗಿ ಬರುವನು
ಶಿವನು ಸಂಗಮನಾಥನು
ಇಗೋ ಸಂಗಮ ವಿಶ್ವ ಗಮಗಮ
ಜಗವ ಜಂಗಮ ಗೈವನು

ಸರಳ ಜೀವನ ಸಹಜ ಭಾವನ
ಬೆಳ್ಳಿ ಬೆಳಕನು ಕೊಡುವನು
ಜೀವ ಶಿಕ್ಷಣ ಆತ್ಮ ಶಿಕ್ಷಣ
ನೀಡಿ ರಕ್ಷಣೆಗೈವನು

ವಿಮಲ ಬದುಕಿನ ಕಮಲ ಜೀವನ
ಶಾಂತಿ ಶೀತಲ ಗೈವನು
ನಾವು ನವಿಲಿನ ನಾಟ್ಯ ಗೈಯಲು
ಜ್ಞಾನ ಮಂಚವ ಕೊಡುವನು

ಮನದ ಕನ್ನಡಿ ಮಿನುಗಿ ಹೊಳೆಯಲಿ
ಚಂದ್ರ ತಾರೆಯು ಸುರಿಯಲಿ
ಹಾಲು ಹರಿಯಲಿ ಜೇನು ಸುರಿಯಲಿ
ಭೂಮಿ ಸ್ವರ್‍ಗವ ತೂಗಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾನೆಂಬ ಭಾವದಲ್ಲಿ ಹುಟ್ಟುವ ಕವಿತೆಗಳು
Next post ಕಾಮುಕ

ಸಣ್ಣ ಕತೆ

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…