ಕಾಮುಕ

ನಾನು ಕಾಮುಕನೆಂದು ಹಳಿಯುವರು. ಗ್ರಂಥಗಳ-
ನೋದಿ ನರಕವೆ ಲೇಸು ಈ ಪಶುವಿಗೆನ್ನುವರು.
ನಾಲ್ಕು ದಿನ ತಮ್ಮ ಮಲಬದ್ಧತೆಯ ಕಳೆದವರು
ಇವನು ವ್ರಣಕಾಯನೆಂದೊರಯುವರು ಪಂಥಗಳ
ಡಾಂಭಿಕರು ಜರೆಯುವರು ಅಂಥ ಇಂಥವುಗಳಾ
ವಂಧಾನದವನೆಂದು. ಈ ಜನರ ಕೊಲ್ಲಲೆನೆ
ಒಂದು ಕೊಂತವು ಸಾಕು, ಜೋಡೆಯೊಡನೊಂದು ದಿನ
ಸುಮ್ಮನಿಹೆ ನಗೆಗೇಡು, ಕೊಲಲಿಂಥ ತಂತುಗಳ?

ಕಾಮಾಂಧನೆನಬೇಡಿ ನಾನಿರಲು ಕಾಮಾಂಧ,
ನೀವಹುದು ಧರ್‍ಮಾಂಧ, ವಿದ್ಯಾಂಧ, ಶ್ರದ್ಧಾಂಧ,
ಜನ್ಮಾಂಧ! ನಿಮಗೇನು ಹೊನ್ನು ಗೋರಿಯ ಕಟ್ಟಿ
ಕೈಮುಗಿದು ನಿಂತಿಲ್ಲ ಕಾಳನವ. ಸದೆಬಡೆದು
ನನ್ನೊಡನೆ ಮಣ್ಣಿನಲಿ ಕೊಡೆದೆಳೆಯುವನು ಮೆಟ್ಟಿ
ನಿಮ್ಮೌಪನಿಷದ-ಪ್ರಾಣಗಳನಂಗಕೆ ತೊಡೆದು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶರಣಗಾನವು ಸುರಿಯಲಿ
Next post ಕಾಡುತಾವ ನೆನಪುಗಳು – ೩೨

ಸಣ್ಣ ಕತೆ

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…