ಗಳಿಗೆ

ಕಾನನದ ನೀರವತೆಯ ಮೌನದಲ್ಲೂ
ಕಂಡ ಪ್ರಭುವಿನ ಚೈತನ್ಯ ಧಾಮ
ಅಂತಃಕರಣದ ಕರಳು ಬಿರಿಯಿತು
ಕಾತರಿಸಿತು ತನುವಿನ ರೋಮ ರೋಮ

ನಿಮ್ಮ ಪಾದಾರವಿಂದದಲಿ ನಾನು
ಸುರಿಯುವೆ ಆರಳುವ ಮೊಗ್ಗು
ಮತ್ತೆ ಮತ್ತೆ ನಾನು ರೋದಿಸುವೆ
ಮನದಲಿ ಪುಟವುದು ಹಿಗ್ಗು ಹಿಗ್ಗು

ಯಾವ ಕ್ಷಣಗಳು ನುಸುಳಿ ಬರುವವೊ
ಕಾತರಿಸುವೆ ನಾನು ನಿತ್ಯ
ನಿಮ್ಮ ದರುಶನ ಭಾಗ್ಯಕ್ಕೆ ನಾನೆ
ಹಗಲಿರುಳು ಕೊನರುವೆ ಕಾಣಲು ಸತ್ಯ

ಬರಹದ ಅಕ್ಕರ ಅಕ್ಕರಗಳಲ್ಲೂ
ಕಾಣುವ ನಿಮ್ಮಯ ಪರಿಛಾಯೆ
ಎತ್ತೆತ್ತ ನಾನು ಇಣಕಿ ನೋಡಲು
ಕಾಣುವೆ ನಿಮ್ಮ ಲೀಲೆ ಮಾಯೆ

ಬರಬಾರದೆ ನೀನೊಮ್ಮೆ ಇಳೆಗೆ
ಉದ್ಧರಿಸಲು ಈ ಭವದ ಜೀವಿಗಳಿಗೆ
ನಿನ್ನ ಕೃಪೆಯೊಂದೇ ಸಲಹುದು
ಮಾಣಿಕ್ಯ ವಿಠಲ ಬಾಳಿಗೆ ಆಗಳಿಗೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೫೨
Next post ಮಲ್ಲಿ – ೩೦

ಸಣ್ಣ ಕತೆ

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…