Home / ಲೇಖನ / ಇತರೆ / ಖ್ಯಾತ ನಟರಾಗಿ…

ಖ್ಯಾತ ನಟರಾಗಿ…

ಸಿನಿಮಾ ನಟರೂ ಎಲ್ಲರಂತೆ ಮನುಷ್ಯರು. ನಟನೆಯನ್ನೇ ವೃತ್ತಿ ಪ್ರವೃತ್ತಿಯನ್ನಾಗಿಸಿಕೊಂಡು ತರಬೇತಿ ಪಡೆದುಕೊಂಡು ಕೆಲವರು ಖ್ಯಾತ ನಟರೆನಿಸಿರುವರು. ಅದೂ ಅವರ ವರಮಾನದ ಮೇಲೆ…

ಈಗೀಗ ಭವ್ಯಭಾರತದಲ್ಲಿ ಬಾಲಿವುಡ್ ಚಿತ್ರಗಳ ಬಾಕ್ಸ್‌ಆಫೀಸ್ ಗಳಿಕೆ ನೂರಾರು ಕೋಟಿ ರೂಪಾಯಿ ಮೀರುತ್ತಿವೆಯಾದರೂ ಅವುಗಳ ಸಂಪಾದನೆ ಹಾಲಿವುಡ್ ಚಿತ್ರಗಳನ್ನು ಮೀರಿಸುತ್ತಿಲ್ಲವೆಂಬ ಮಾತು ಅಲ್ಲಲ್ಲಿ ದಟ್ಟವಾಗಿ ಕೇಳಿ ಬರುತ್ತಿದೆ!

ಬೆಂಕಿಯಿಲ್ಲದೆ ಹೊಗೆ ಏಳದು ಎಂಬಂತೆ ಆಗಸ್ಟ್ ೨೦೧೫ರಲ್ಲಿ ಫೋರ್‍ಬ್ಸ್ ಪ್ರಕಟಿಸಿರುವ ವಿಶ್ವದ ಸಿರಿವಂತರ ಮಹಾಪಟ್ಟಿಯಲ್ಲಿ ಮುಂಬಯಿಯ ಐವರು ನಟರು ಇದ್ದಾರೆ!

ಈ ಹಿಂದೆ- ಶಾರುಖ್ ಖಾನ್ ಅವರು ಇದೇ ಫೋರ್‍ಬ್ಸ್ ಪಟ್ಟಿಯಲ್ಲಿದ್ದಿದು ತಮಗೆಲ್ಲ ತಿಳಿದಿರಬಹುದು ಎಂದುಕೊಂಡಿದ್ದೇನೆ! ಆದರೆ… ಈ ಸಾರಿ ಅವರನ್ನು ಓವರ್ ಟೇಕ್ ಮಾಡಿ ಮತ್ತಷ್ಟು ನಟರು ಈಗಾಗಲೇ ಮುನ್ನುಗ್ಗಿವರು….

ಸೂಪರ್‌ಸ್ಟಾರ್‌ ಬಿಗ್‌ಬಿ ಅಮಿತಾಭ್ ಬಚ್ಚನ್- ಬ್ಯಾಡ್‌ಬಾಯ್ ಸಲ್ಮಾನ್ – ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್, ಶಾರುಖ್ ಖಾನ್, ರಣಬೀರ್ ಕಪೂರ್‌- ಈ ಬಿಗ್ ಪಟ್ಟಿಯಲ್ಲಿ ಸ್ಥಾನಮಾನ ಗಿಟ್ಟಿಸಿಕೊಳ್ಳುವಲ್ಲಿ ತೀರಾ ಯಶಸ್ವಿಯಾಗಿರುವರು.

ಬಹಳ ವಿಸ್ಮಯದ ಸಂಗತಿಯೆಂದರೆ… ಬಿಗ್‌ಬಿ ಅಮಿತಾಭ್ ಬಚ್ಚನ್ ಹಾಗೂ ಬ್ಯಾಡ್ ಬಾಯ್ ಸಲ್ಮಾನ್‌ಖಾನ್ ಸರಿಸಮಾನವಾಗಿ ಏಳನೆಯ ಅದ್ಭುತ ಸ್ಥಾನಮಾನವನ್ನು ಹಂಚಿಕೊಂಡಿರುವರು!

ಅದೇ ಒಂಭತ್ತನೆಯ ರ್‍ಯಾಂಕ್‌ನಲ್ಲಿ ನಮ್ಮ ಆಕ್ಷನ್‌ಕಿಂಗ್ ಅಕ್ಷಯ್‌ ಕುಮಾರ್‌ ಪಡೆಯುವಲ್ಲಿ ಸಫಲರಾಗಿರುವರು.

ಅಮಿತಾಭ್ ಮತ್ತು ಸಲ್ಮಾನ್‌ಖಾನ್ ವಾರ್ಷಿಕವಾಗಿ ಇವರೀರ್ವರು ೨೧೩ ಕೋಟಿ ರೂಪಾಯಿ ಗಳಿಕೆ ಹೊಂದಿರುವರು. ಅದೇ ಅಕ್ಷಯ್‌ ವಾರ್ಷಿಕವಾಗಿ ೨೦೭ ಕೋಟಿ ವರಮಾನ ಹೊಂದಿರುವರು. ಶಾರುಖ್ ಖಾನ್ ೧೬೫ ಕೋಟಿ ರೂಪಾಯಿ ಗಳಿಕೆ ಹೊಂದಿದ್ದು ೧೮ನೆಯ ಸ್ಥಾನದಲ್ಲಿ ಉಳಿದಿದ್ದಾರೆ. ಇನ್ನು ೩೦ನೆಯ ಬ್ಯಾಂಕಿನಲ್ಲಿ ರಣಬೀರ್ ಕಪೂರ್ ಇದ್ದು ೯೫ ಕೋಟಿ ರೂಪಾಯಿಗೆ ತೃಪ್ತಿಪಟ್ಟು ಕೊಂಡಿರುವರು.

ಅಬ್ಬಾ! ಬಾಲಿವುಡ್‌ನ ಇಷ್ಟೂ ನಟರ ಗಳಿಕೆಯು ವಾರ್ಷಿಕವಾಗಿ ೮೯೫ ಕೋಟಿ ರೂಪಾಯಿ ಮುಟ್ಟಿದೆ.

ಆದ್ದರಿಂದ ಮಕ್ಕಳೆ ನೀವೆಲ್ಲ ಇನ್ನು ಮುಂದೆ ಸಿನಿಮಾ ನಟರಾಗುವ ಗುರಿ ಹೊಂದಿರಿ. ಅದಕ್ಕಾಗಿ ನಟನೆ, ಮಾತು, ಹಾಸ್ಯ, ಮೈಕಟ್ಟು ಹೊಂದಿ. ಬರೀ ಡಾಕ್ಟರ್ ಇಂಜಿನಿಯರ್ ಐ‌ಎ‌ಎಸ್, ಐಪಿ‌ಎಸ್ ಎಂದು ಹತ್ತರಲ್ಲಿ ಹನ್ನೊಂದನೆಯವರಾಗಿ ಕೊರಗದಿರಿ, ಪುಸ್ತಕದ ಹುಳುವಾಗದಿರಿ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...