Home / ಕವನ / ಕವಿತೆ / ಈ ಜನುಮವೆ ಮುಗಿವ ಮುನ್ನ

ಈ ಜನುಮವೆ ಮುಗಿವ ಮುನ್ನ

ಈ ಜನುಮವೆ ಮುಗಿವ ಮುನ್ನ
ಕಾಣೆನೊ ಕಾಣುವೆನೊ ನಿನ್ನ
ನರಿಯದೊಡನಭಿನ್ನಮೆನ್ನ
ಮನದ ತಿತಿಕ್ಷೆ
ಇಂದಲ್ಲಡೆ ಮುಂದೆ ನೆರೆಯ
ದಿರದಿಲ್ಲಿಯೆ ಬಲ್ಲೆನೆರೆಯ-
ಸಲದೆ ತಾಯ ಬಸಿರ ಮರೆಯ
ಮಗುವ ದಿದೃಕ್ಷೆ?

ನಿನ್ನೊಳೊಗೆದ ನನ್ನೊಳಿಂತು
ನಿನ್ನ ಕಾಂಬ ಬಯಕೆ ಬಂತು,
ಕಡಲಾಳದ ತೆರೆಯೊಳೆಂತು
ಕಡಲ ಕಾಣಿಕೆ;

ನನಗೀ ಜನುಮದಿ ಪ್ರಸನ್ನ
ನಹುದು ಕಣಾ ಹೊಣೆಯೆ ನಿನ್ನ,
ಕಡಲ ಹೊಣೆಯದೆಂತು ತನ್ನ
ತೆರೆಯ ಪೂಣಿಕೆ.

ನಾನಿದೊ ಬರೆ ಬಾಷ್ಪದಂಧು,
ನೀನೊಡೆಯಾ ದಯಾಸಿಂಧು-
ನಿನ್ನಿಂದ ಸಮೀಪಬಂಧು
ವಾರೊಳರೆನ್ನ?
ಇಂತೆನೆ ಮೊಗಮರಸಿ ಬೆಂಗೆ
ಬಂದಡೆ ಮೊಗ ಮರಸೆ ಹಂಗೆ?
ಎನ್ನೆಗಮಿಂತೆನ್ನ ಕಂಗೆ
ಮಾಚುವೆ ನಿನ್ನ?

ಜನನದಿ ಮರಣಾಂತಮಿಲ್ಲಿ
ಬಾಳ್ವೆ ನಿನ್ನನರಸುವಲ್ಲಿ,
ನೋಡದಿಲ್ಲಿ ಕೂಡಲಲ್ಲಿ
ಬಲ್ಲುದೆ ನಿನ್ನ?
ಮರಳಿ ತನ್ನ ಹೊರಟ ರೇವ
ನಯ್ದೆ ಸುತ್ತಿ ಬರುವ ನಾವ
ಮಿಳಿಸಿತೆ ಹಾಯದರ ಸೋವ
ಕಾಣದ ಮುನ್ನ?

ಉದಯಾಸ್ತಂ ಬಡೆವ ಖರ್ವ
ಗತಿಯಂತಿನನೊಡನೆ ಪರ್ವ
ವಡೆವ ಗತಿಯುಮೆಂತು ಶರ್ವ
ರೀಶಗೆ ದ್ವಿಧಾ

ಜೀವನದಿಂದಂತು ಭಿನ್ನ
ಪಥಮೆನಗಿಲ್ಲಿರಲಖಿನ್ನ
ಮದಂ ನಡೆವಗೆಂತು ನಿನ್ನ
ದರ್‍ಶನಂ ಮುಧಾ?

ಬಾಳ್ವೆಯ ನಿಡುಮರಳಿನಲ್ಲಿ
ಸುಖದಿಂ ದಣಿದೊಣಗಿದಲ್ಲಿ
ನಡುದೀವಿಗಳಳಲೊಳಲ್ಲಿ
ಕಾವನಾವನಿಂ
ಕಂಬನಿಯಾತಿಥ್ಯ ದೊರೆತೆ
ನವನ ಮುಂದುವರಿಯೆ ಮರೆತೆ-
ನಿನ್ನಿಂದವನಕಟ ಪೆರತೆ?
ಪೇಳ ದೇವ ನೀಂ!

ನಿನ್ನನಿಲ್ಲಿ ನಮಗೆ ತೋರ
ಲಲ್ಲಡಳಲು ಬರಿದೆ ಬಾರ;
ಕಂಡ ನಿನ್ನ ನೋಡಲಾರ
ದೆನ್ನ ಕಣ್ಣಿಗೆ
ಬಲ್ಲೆನಿಲ್ಲೆ ಕಾಣಬರುವೆ-
ಎಂದೊ ಎಂತೊ ನೀನೆ ಅರಿವೆ,
ಬಗೆಗೆ ಕಾವ ಕವಿಯೊಲಿರುವೆ
ನಿಂತು ತಣ್ಣಗೆ.

ಬಲ್ಲೆನೆಂತು ಬಾಳ್ವೆ ಸಂದು
ನಿನ್ನೊಳೆ ಮೆಯ್ಗರೆವೆನೆಂದು,
ಬಲ್ಲೆನಂತು ಬಾಳುವಂದು
ಕಾಣುವೆ ನಿನ್ನ,
ರವಿಯಲಿ ಮೆಯ್ಗರೆವ ಮುಂತು
ಹುಣ್ಣಿಮೆಯಮೃತಾಂಶು ನಿಂತು
ಮುಖಾಮುಖಿಯೆ ಕಾಣುವಂತು
ಭಾಸ್ಕರನನ್ನ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...