Home / ಕವನ / ಕವಿತೆ / ಮುಮ್ತಾಜಳ ಮಹಲು

ಮುಮ್ತಾಜಳ ಮಹಲು

ನನ್ನ ಅಖಂಡ ಪ್ರೀತಿಯನು
ನಿನ್ನ ಬೆಳ್ಳಿ ತಕ್ಕಡಿಯಲ್ಲಿಟ್ಟು
ತೂಗಬೇಡ ಮುಮ್ತಾಜ್
ದೌಲತ್ತಿನ ಆಸರೆಯಿಂದ
ನಿನ್ನ ಜಹಾಂಪನಾಹ್
ನಿನಗೊಂದು ಭವ್ಯ ಇಮಾರತ್ತು ಕಟ್ಟಿಸಿ
ಅದರಲ್ಲಿ ನಿನ್ನ ಗೋರಿ ಮಾಡಿರಬಹುದು.
ಆದರೆ ನನ್ನ ಪ್ರಿಯತಮನ
ಹೃದಯದಲೇ ಕಟ್ಟಿಸಿದ
ಭಾವ ತುಂಬಿದ ಭವ್ಯ ಇಮಾರತ್ತಿಗೆ
ನಿನ್ನ ಅಮೃತ ಶಿಲೆಗಳು
ಸಾಟಿಯಾಗಲಾರವು ಮುಮ್ತಾಜ್
ಪ್ರಿಯ ಮುಮ್ತಾಜ್
ನಿನ್ನ ಸುಂದರ ವದನದ ಮೇಲೆ
ಒಮ್ಮೆ ಕಣ್ಣಾಡಿಸಿ ನೋಡು
ಅಲ್ಲಿ ನಿನ್ನ ಜಹಾಂಪನಾರ
ಶಾಹಿ ದರ್‍ಪದ ಮೊಹರುಗಳು ಕಂಡಾವು
ಯಮುನೆಯ ತೀರದಲ್ಲೊಮ್ಮೆ
ನಿಂತು ಕಣ್ಣುಬಿಟ್ಟು ಸುತ್ತಲೂ
ನೋಡು ಮುಮ್ತಾಜ್
ಅಲ್ಲಿ ನಿನಗೆ ತಿಳಿಜಲದ ಯಮುನೆ
ಶಹೀದಾದ ವೀರ ಸೈನಿಕರ ರಕ್ತದಿಂದ
ಕೆಂಪುದಾದ ಕಂಡೀತು!
ಸುಂದರ ತಾಜಮಹಲೇ
ನಿನ್ನ ಹಕೀಕತ್ತು ಏನೆಂದು
ಎಲ್ಲರಿಗೂ ಗೊತ್ತು
ನಿನ್ನ ಪ್ರೇಮ ಸ್ಮಾರಕದ
ಮುಸುಕಿನ ಮರೆಯಲ್ಲಿ
ನಿಟ್ಟುಸಿರಿಟ್ಟ ಬೇಗಂಗಳೆಷ್ಟೋ?
ತಲೆದಿಂಬಿನಲಿ ಇಂಗಿ ಹೋದ
ಅವರ ಬಿಸಿ ಕಂಬನಿಗಳೆಷ್ಟೋ?
ಉಕ್ಕಿದ ಹರೆಯ ಬಚ್ಚಿಡಲು
ಬಿಕ್ಕಿದ ಜನಾನಾಗಳೆಷ್ಟೋ?
ನಿನ್ನ ಅಡಿಪಾಯದಡಿಯಲ್ಲಿ
ಜಜ್ಜಿ ಹೋಗಿರುವ ಅವಶೇಷಗಳು
ಅಮೃತ ಶಿಲೆಗಳಲ್ಲಿ ಸಿಲುಕಿ
ನಲುಗಿ ಹೋಗಿರುವ
ಬಡ ಶಿಲ್ಪಿಗಳ ಆಕ್ರಂಧನಗಳೆಷ್ಟೋ?
ಅವರ ನಿಟ್ಟುಸಿರಿನ ಶಬ್ದ
ಇಂದಿಗೂ ಭವ್ಯ ತಾಜಮಹಲಿನ
ಮೀನಾರುಗಳಲ್ಲಿ ಪ್ರತಿಧ್ವನಿಸುತ್ತದೆ.
ಗೋರಿಗಳಲ್ಲಿ ಗುನುಗುಟ್ಟುತ್ತದೆ
ನಿನ್ನ ಬಾದಶಹನ ಹೃದಯದಲಿ
ನಿನೊಬ್ಬಳೇನೂ ಅಲ್ಲ ಮುಮ್ತಾಜ್
ತುಂಬಿದ ಜನಾನಾಗಳುಂಟು
ಮುಜರಾಗಳಲ್ಲಿ ಮುಳುಗುವ
ಗೆಜ್ಜೆಯ ನಾದದಲಿ ಮೈಮರೆವ
ಬಡವರ ರಕ್ತ ಹೀರುವ
ಅನೇಕ ಖೂನಿ ಹಕೀಕತ್ತುಗಳಿಂದ
ಸುತ್ತುವರಿದ ನಿನ್ನ ಬಾದಶಹನ
ತಾಜಮಹಲು ಪ್ರೀತಿಯ ಪ್ರತೀಕ
ಹೇಗಾದೀತು ಹೇಳು ಮುಮ್ತಾಜ್
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...