ಅಪ್ಪಾ ಹೊರಲಾರೇನೋ ಈ ಮಣಭಾರ ಹೆಣಭಾರಾ
ತಿಂದುಂಡ ತುತ್ತುಗಳೆಲ್ಲಾ ಬಾಯಲ್ಲೇರಿ ಬಂದಾಡಿಕೊಳ್ಳುತ್ತವೆ
ಕುಡಿದ ಹನಿಹನಿಯೂ ಕಣ್ಣೀರ ಪೋಣಿಸುತ್ತದೆ
ಸೇವಿಸಿದ ಉಸಿರುಸಿರೂ ಮೂಗುಕಟ್ಟುತ್ತದೆ
ಮಲಗಿದಿಂಚಿಂಚು ನೆಲವೂ ಬಾಯ್ದೆರೆದು ನುಂಗುತ್ತದೆ
ನಡೆದಡಿಯಡಿ ಮಣ್ಣೂ ಮಣ್ಣು ಹೊರಿಸುತ್ತದೆ
ಪಡೆದ ಕಾಸು ಕಾಸೂ ಮಾನವ ಕಾಸಿಗೆ ಪಂಚೇರು ಮಾರುತ್ತದೆ
ಒಂದೇ ಶ್ವೇತಬಿಂದು ಬೆಳೆದು ಬಿಳಿ ತೊನ್ನಾಗಿ ಮೈ ವ್ಯಾಪಿಸಿದೆ
ಒಂದೇ ರೇತೋಬಿಂದು ನಾಳನಾಳವ ತುಂಬಿ ಹರಿದು ರಕ್ತತರ್ಪಣ ಬೇಡುತ್ತದೆ
ತುತ್ತನ್ನವಿಕ್ಕಿದ ಮನೆ ಮನೆಯೂ ತೊತ್ತಾಗು ಬಾ ಎನ್ನುತ್ತಿದೆ
ಅಂಟಿಹರಡಿ ಕವಲಾದ ಕರುಳುಬಳ್ಳಿ ಉರುಲಾಗಿ ಕೊರಳ ಹಿಚುಕುತ್ತದೆ
ಒಂದೊಂದು ಪೈಯೂ ಬಡ್ಡಿ ಚಕ್ರ ಬಡ್ಡಿಯಾಗಿ ಪ್ರಾಣಪಣದ ಲೆಕ್ಕ ಕೇಳುತ್ತದೆ
ಅಂಬೆಯ ಮೊಲೆಹಾಲೇ ಕಕ್ಕು ನನ್ನ ಲೆಕ್ಕವನೆಂದ ಮೇಲೆ
ಅಪ್ಪಾ ಯಾವ ಋಣ ತೀರಿಸಲಿ? ಯಾವ ಭಾರ ಭರಿಸಲಿ?
ಹೊರಲಾರೆನೋ ತಂದೆ ಈ ಗಿರಿಭಾರ-ಋಣಭಾರ-ನಾನು ಅಲ್ಪ.
*****
Related Post
ಸಣ್ಣ ಕತೆ
-
ಮಿಂಚು
"ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…
-
ಹಳ್ಳಿ…
ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…
-
ಡಿಪೋದೊಳಗಣ ಕಿಚ್ಚು…
ಚಿತ್ರ: ವಾಲ್ಡೊಪೆಪರ್ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…
-
ಆವರ್ತನೆ
ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…
-
ಆ ರಾಮ!
ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…