Home / ಕವನ / ಕವಿತೆ / ಚಿಂತೆ

ಚಿಂತೆ

ಆವೀಗ್ ಮುತ್ತ್ ಇಕ್ಕೋದು
ವುಲೀಗ್ ಆಲ್ ತಿಕ್ಕೋದು
ಚಿಂತೇಗ್ ಎದೇಲ್ ತಾವ್ ಕೊಡೋದು
ಎಲ್ಲಾ ಒಂದೇ ತೂಕಿ!
ಕೇಳ್ಲೆ ಬೇಡ ಬಾಕಿ! ೧

ಉಗನಿ ಅಬ್ಕೊಂಡಂಗೆ
ಕುಟ್ಟಿ ಯಿಡಕೊಂಡಂಗೆ
ಗೆದ್ದಿಲ್ನಂಗೆ ಅತ್ಕೊಂಡ್ ಬಂದಿ
ಮನಸನ್ ಮುರದ್ ಮುಕ್ಕೋಂತೆ
ದೊಡ್ದೀ ಮಾರಿ-ಚಿಂತೆ! ೨

ಬೆಂಕಿ ಮೈ ಮೇಲ್ ಬಿದ್ರೆ
ನಾವ್ ಅದನ್ ಆರೀಸ್ದಿದ್ರೆ
ಧಗ್ಗಂತ್ ಅತ್ಕೊಂಡ್ ಉರದಿ ನಮ್ನ
ಮಾಡತೈತ್ ಬೂದೀನಂತೆ!
ಬೆಂಕೀನೆ- ಈ ಚಿಂತೆ! ೩

ಚಿಂತೆ ಬರ್‍ತಿದ್ದಂಗೆ
ತಕ್ಕೊ! ದೊಡ್ದು ದಂಗೆ!
ಚಿಂತೇಗೇನ್ರ ನೀ ಸರಣಾದ್ರೆ
ನಿಂಗೆ ಎಕ್ಕ ಗಟ್ಟಿ!
ಚಿಂತೇಗ್ ಊಟ ಬಿಟ್ಟಿ! ೪

ಚಿಂತೆ ಬರ್‍ತಿದ್ದಂಗೆ
ಗುರತೇ ಗೊತ್ತಾಗ್ದಂಗೆ
ಯಿಡಕೊಂಡ್ ಚೆನ್ನಾಗ್ ತದಕಾಕಿದ್ರೆ
ಕರದ್ರು ತಿರ್‍ಗಿ ಬರದು!
ಜಪ್ಪಯ್ಯಾಂದ್ರು ಬರದು! ೫

ಚಿಂತೇನ್ ಕಂಡೋರ್ ನಾವು!
ಚಿಂತೇಗ್‌ ಇಕ್ದೋರ್ ನಾವು!
ನಮ್ಮಂಗ್ ಸಲೀಸ್ ಆಗಬೇಕಂದ್ರೆ
ಚಿಂತೇನ್ ಇಡದಿ ಧ್ವಂಸ
ಮಾಡ್ಲೆ ಬೇಕು ಮನ್ಸ! ೬
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...