ಒಬ್ಬ ಸಾಧಕ ಅತ್ಯಂತ ಶ್ರಮಪಟ್ಟು ಶಾಸ್ತ್ರ ಪುರಾಣಗಳ ಅಧ್ಯಯನ ಮಾಡುತ್ತಿದ್ದ. ಪ್ರಖರವಾದ ಬಿಸಿಲಿನಲ್ಲಿ ನದಿ ದಂಡೆಯಲ್ಲಿ ಕುಳಿತು ಓದುತ್ತಿದ್ದ. ಬಿಸಿಲಿಗೆ ಬೆವರಿನ ಹನಿಗಳು ಮೂಡಿದಾಗ ಓದಿದ ಪುಟಗಳ ಹಾಳೆಯನ್ನು ಹರಿದು ಬೆವರು ಒರಸಿ ನದಿಗೆ ಎಸೆಯುತ್ತಿದ್ದ. ಸಂಜೆಯಾಗುವುದರೊಳಗೆ ಶಾಸ್ತ್ರ ಪುರಾಣಗಳ ಹಾಳೆಗಳೆಲ್ಲಾ ನದಿಯಲ್ಲಿ ತೇಲಿ ದಡ ಮುಟ್ಟಿದವು. ಸಾಧಕ ಮಾತ್ರ ಅಲ್ಲೇ ದಡದಲ್ಲಿ ಚಲನೆ ಇಲ್ಲದೆ ಬೆವರಹನಿಯಲ್ಲಿ ಆವಿಯಾಗಿದ್ದ. ಪ್ರವಾಹದೊಂದಿಗೆ ಸೇರಿ ಕಸಕಡ್ಡಿ ಪುರಾಣದ ಹಾಳೆ ದಡ ಮುಟ್ಟಿತು. ಸಾಧಕ ಮಾತ್ರ ಮುನ್ನಡೆ ಇಲ್ಲದೆ ಅಲ್ಲೇ ಮಂಡಿಸಿದ್ದ.
*****
Related Post
ಸಣ್ಣ ಕತೆ
-
ಮಂಜುಳ ಗಾನ
ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…
-
ಆಮಿಷ
ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…
-
ಜಡ
ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…
-
ವಲಯ
ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…
-
ಅಹಮ್ ಬ್ರಹ್ಮಾಸ್ಮಿ
ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…