ಪ್ರಜ್ಞೆ

ಸಾಧಕನೊಬ್ಬ ಯಾವಾಗಲು ಪ್ರಶ್ನೆ ಉತ್ತರಗಳಲ್ಲಿ ಮಾತಾಡಿಕೊಳ್ಳುತ್ತಿದ್ದ. ಅವನಲ್ಲಿ ಗುರು ಶಿಷ್ಯನ ಎರಡು ಧ್ವನಿ ಮನೆಮಾಡಿತ್ತು. ಇವನಿಗೆ ಎರಡು ಕೊರಲು ಇರಬೇಕು ಎಂದು ಕೆಲವರು, ಇಲ್ಲ ಇವನಿಗೆ ಎರಡು ಹೃದಯ ಎಂದು ಕೆಲವರು, ಇಲ್ಲ ಇವನಿಗೆ ಎರಡು ಮಿದುಳು ಎಂದು ವಾದಿಸುತ್ತಿದ್ದರು.

ಇನ್ನೂ ಕೆಲವರು ಇವನು ಹುಚ್ಚ, ಬೆಪ್ಪಾ, ಮೂರ್ಖ ಎನ್ನುತ್ತಿದ್ದರು.

ಕೊನೆಗೆ ಇವನ ಆಪ್ತ ಗೆಳೆಯ ಧೈರ್ಯ ಮಾಡಿ “ಏಕೆ ನೀನು ಹೀಗೆ ಪ್ರಶ್ನೆ, ಉತ್ತರದ ಎರಡು ಧ್ವನಿ ಇಟ್ಟುಕೊಂಡಿರುವೆ? ನಿನ್ನಲ್ಲಿ ಇರುವ ಇನ್ನೊಬ್ಬ ಯಾರು? ಅದು ನಿನ್ನ ತಾಯಿಯಾ? ಗುರುವಾ? ದೈವವಾ?” ಎಂದ.

“ಅಯ್ಯೋ! ಇಷ್ಟೂ ತಿಳಿಯಲಿಲ್ಲವೆ? ಅದು ನನ್ನ ಪ್ರಜ್ಞೆ” ಎಂದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರುಚಿಯಂಕೆ ತಪ್ಪಿದರೆ ಶೌಚದಂಕೆ ತಪ್ಪದೇ?

ಸಣ್ಣ ಕತೆ

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…