Home / ಕವನ / ಕವಿತೆ / ಪ್ರಜಾರಾಜ

ಪ್ರಜಾರಾಜ

ದಿನ ತುಂಬುವ ಮೊದಲೇ ತಾಯ ಕುತೂಹಲ ಕೆರಳಿಸಿ ತತ್ತಿಯೊಡೆದು
ರಕ್ತಹರಿಸಿ ಮಾಂಸ ಮುದ್ದೆಯುರುಣ ಒಡಮೂಡಿದಂತೆ
ಇವನು ಹುಟ್ಟಿದ್ದೇ ಹಸಿಬಿಸಿಯಾಗಿ
ಯಾರಿಗೆ ತನ್ನ ಮೊದ್ದು ಮುಖವ ತೋರಿಸುವವಸರವೋ
ಕೈಕಾಲು ಪೂರಾ ಅರಳದ ಮೊದಲೇ ಗರ್ಭದೊಳು ಹಳಹಳಿಸಿ
ಭೂಮಿಗವತರಿಸಿದ ಹೆಳವನಾಗಿ ತೆವಳುವಿವನನು
ಮಡಿಲಲ್ಲಿ ಕಟ್ಟಿಕೊಂಡು ಸಾಗುವ ನಮಗೆ ಹತ್ತಿದೆ ಶನಿ
ಇವನ ಕೈಯಿಂದ ಕಡ್ಡಿಯೂ ಆಚಿಂದೀಚೆಗಾಗದು

ಕೈತುತ್ತು ತಿಂದು ಬೆಳೆದೇ ಬೆಳೆದ ಇವನು
ಬೆಳೆದಂತೆಲ್ಲಾ ಬೆಳೆಯಿತು ಹೆಳವತನ ಹಂಡಬಂಡತನ
ಆದರೂ ಎಲ್ಲಾ ಕಡೆಯೂ ಹರಿಯುವ ಹಂಬಲ ಇವನದು
ಇವನನ್ನೆತ್ತಿಕೊಂಡು ಹೆಣದಂತೆ ಹೆಣಗಬೇಕಾಗಿದೆ.

ನಾವು ಹೋಗಬೇಕಾದ ಬಸ್ಸು ಗಾಡಿಗಳೆಲ್ಲಾ ತಪ್ಪಿವೆ
ಬೆಂಡನ್ನು ಬೆನ್ನಿಗೆ ಕಟ್ಟಿ ನೀರಿಗೆ ಬಿದ್ದಾದ ಮೇಲೆ
ಗೊತ್ತಾದುದು ಬೆಂಡಲ್ಲ ಗುಂಡೆಂದು
ಮೆರೆದಾಟ ಬೇಕೆಂಬ ಇವನು ಹಪಾಪೀತನಕೆ
ಸ್ಟೇಜಿನ ಮೇಲೇರಿದರೆ ಮಾತು ಬಾರದೆ ಬೆ ಬೆ ಬೆ ಅಂದಾಗ
ಅವರಿವರಿಂದ ಛೀಮಾರಿ ನಮಗೆ
ನಮ್ಮ ಸರೀಕರೆಲ್ಲ ಗುರಿಮುಟ್ಟಿ
ತಂತಮ್ಮ ತಲೆಗಳಲ್ಲಿ ಗರಿಪುಚ್ಚ ಕಟ್ಟಿಕೊಂಡಿದ್ದರೂ
ನಾವಿನ್ನೂ ಗರಡೀಮನೆ ಬಿಟ್ಟಿಲ್ಲ ಅಥವಾ ಬಿಡುವುದೇ ಇಲ್ಲವೇನೋ
ಕೈಕಾಲು ತೊಡಕಿರುವ ಈ ಮೂದೇವಿಯಿಂದ ಮೂಲೆ
ಗುಂಪಾಗಿದ್ದೇವೆ ನಾವು
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...