ಪ್ರಜಾರಾಜ

ದಿನ ತುಂಬುವ ಮೊದಲೇ ತಾಯ ಕುತೂಹಲ ಕೆರಳಿಸಿ ತತ್ತಿಯೊಡೆದು
ರಕ್ತಹರಿಸಿ ಮಾಂಸ ಮುದ್ದೆಯುರುಣ ಒಡಮೂಡಿದಂತೆ
ಇವನು ಹುಟ್ಟಿದ್ದೇ ಹಸಿಬಿಸಿಯಾಗಿ
ಯಾರಿಗೆ ತನ್ನ ಮೊದ್ದು ಮುಖವ ತೋರಿಸುವವಸರವೋ
ಕೈಕಾಲು ಪೂರಾ ಅರಳದ ಮೊದಲೇ ಗರ್ಭದೊಳು ಹಳಹಳಿಸಿ
ಭೂಮಿಗವತರಿಸಿದ ಹೆಳವನಾಗಿ ತೆವಳುವಿವನನು
ಮಡಿಲಲ್ಲಿ ಕಟ್ಟಿಕೊಂಡು ಸಾಗುವ ನಮಗೆ ಹತ್ತಿದೆ ಶನಿ
ಇವನ ಕೈಯಿಂದ ಕಡ್ಡಿಯೂ ಆಚಿಂದೀಚೆಗಾಗದು

ಕೈತುತ್ತು ತಿಂದು ಬೆಳೆದೇ ಬೆಳೆದ ಇವನು
ಬೆಳೆದಂತೆಲ್ಲಾ ಬೆಳೆಯಿತು ಹೆಳವತನ ಹಂಡಬಂಡತನ
ಆದರೂ ಎಲ್ಲಾ ಕಡೆಯೂ ಹರಿಯುವ ಹಂಬಲ ಇವನದು
ಇವನನ್ನೆತ್ತಿಕೊಂಡು ಹೆಣದಂತೆ ಹೆಣಗಬೇಕಾಗಿದೆ.

ನಾವು ಹೋಗಬೇಕಾದ ಬಸ್ಸು ಗಾಡಿಗಳೆಲ್ಲಾ ತಪ್ಪಿವೆ
ಬೆಂಡನ್ನು ಬೆನ್ನಿಗೆ ಕಟ್ಟಿ ನೀರಿಗೆ ಬಿದ್ದಾದ ಮೇಲೆ
ಗೊತ್ತಾದುದು ಬೆಂಡಲ್ಲ ಗುಂಡೆಂದು
ಮೆರೆದಾಟ ಬೇಕೆಂಬ ಇವನು ಹಪಾಪೀತನಕೆ
ಸ್ಟೇಜಿನ ಮೇಲೇರಿದರೆ ಮಾತು ಬಾರದೆ ಬೆ ಬೆ ಬೆ ಅಂದಾಗ
ಅವರಿವರಿಂದ ಛೀಮಾರಿ ನಮಗೆ
ನಮ್ಮ ಸರೀಕರೆಲ್ಲ ಗುರಿಮುಟ್ಟಿ
ತಂತಮ್ಮ ತಲೆಗಳಲ್ಲಿ ಗರಿಪುಚ್ಚ ಕಟ್ಟಿಕೊಂಡಿದ್ದರೂ
ನಾವಿನ್ನೂ ಗರಡೀಮನೆ ಬಿಟ್ಟಿಲ್ಲ ಅಥವಾ ಬಿಡುವುದೇ ಇಲ್ಲವೇನೋ
ಕೈಕಾಲು ತೊಡಕಿರುವ ಈ ಮೂದೇವಿಯಿಂದ ಮೂಲೆ
ಗುಂಪಾಗಿದ್ದೇವೆ ನಾವು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಾವನಾಪ್ರಣಯೋದಂತ ಕಥೆ
Next post ಬಾಗಿಲಾಚೆಯ ಮೌನ

ಸಣ್ಣ ಕತೆ

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…