ಬಾಗಿಲಾಚೆಯ ಮೌನ

ಏಕಿಂಥ ಬಿಗುಮಾನ
ಬಾಗಿಲಾಚೆಯ ಮೌನ?
ಹೊಸ್ತಿಲವರೆಗೂ ಬಂದು ನಿಂತು
ಮುಖವ ಮರೆಸುವುದೇ ಇಂತು?

ಹೇಳದೇ ಬರುವವರು
ಕೇಳದೇ ಹೋಗುವವರು
ಎಲ್ಲರಿಗಾಗಿ ವಿಸ್ತಾರವಾಗಿ
ತರೆದೇ ಇದೆ ಬಾಗಿಲು.

ನೀನು ಅತಿಥಿಯೂ ಅಲ್ಲ
ದೇವಮಾನವನೂ ಅಲ್ಲ
ನನ್ನದೇ ಕಳೆದು ಹೋದ
ಒಂದು ತುಣುಕು ಮೌನ ಮಾತ್ರ!

ನಾನು ನಿನಗಾಗಿ ಕಾಯುತ್ತಿಲ್ಲ
ಕಾಲ ಅನಂತ ನನಗೆ ಅವಸರವಿಲ್ಲ
ಬಾರದಿದ್ದರೇ ಎಂಬ ಆತಂಕವಿಲ್ಲ
ಹುಡುಕಾಟದ ಕೊನೆ ನೀನೆಂಬ ನಂಬಿಕೆಯಿಲ್ಲ.

ಇಂದಲ್ಲ ನಾಳೆ ನನ್ನ ತೆಕ್ಕೆಗೇ
ಬಂದು ಬೀಳುವೆಯೆಂಬ ಭರವಸೆಯಿದೆ
ನನ್ನೆದೆಯೊಳಗೆ ನಿನ್ನ ಪ್ರತಿರೂಪವಿದೆ
ಬಿಟ್ಟು ಎಲ್ಲಿ ಹೋಗುವೆ ಬರದೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಜಾರಾಜ
Next post ರಾಜಕೀಯದಾಗೀಗ ವಂಡರ್ಮೆ ಥಂಡರ್

ಸಣ್ಣ ಕತೆ

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

cheap jordans|wholesale air max|wholesale jordans|wholesale jewelry|wholesale jerseys