ಭೂಮಿಯ ಎದೆ ಮುಟ್ಟಿತು

ಒಬ್ಬ ಅತಿ ಎತ್ತರದ ಕಂಭವನ್ನು ಏರಿ ಕುಳಿತು ತಾನು ಎಲ್ಲರಕ್ಕಿಂತ ಎತ್ತರದಲ್ಲಿ ಇರುವನೆಂದು ಹೆಮ್ಮೆಪಡುತ್ತಿದ್ದ.

ಅವನ ಸಹಪಾಠಿ ಹೇಳಿದ “ನಾನು ಹತ್ತದೇ ಈ ಕೋಲಿನಿಂದ ಕಂಭದತುದಿ ಮುಟ್ಟ ಬಲ್ಲೆ. ಸುಲಭದಲ್ಲಿ ಎತ್ತರ ಮುಟ್ಟುವಾಗ ನಿನಗೇಕೆ ಇಷ್ಟು ಜಂಭ?” ಎಂದ. ಅಷ್ಟರಲ್ಲಿ ಅಲ್ಲಿಗೆ ಬಂದ ಒಬ್ಬ. “ಕಂಭದ ಎತ್ತರದಲ್ಲೇ ಕುಳಿತು ಯಾರಿಗಾದರೂ ಭೂಮಿಯ ಎದೆಯನ್ನು ಮುಟ್ಟಲು ಸಾಧ್ಯವೇ?” ಎಂದು ಸವಾಲು ಹಾಕಿದನು.

ಅಲ್ಲಿ ನೆರದ ಶಿಷ್ಯರಲ್ಲಿ ಯಾರೂ ಬಾಯಿ ಬಿಡಲಿಲ್ಲ. ಅದು ಸಾಧ್ಯವೇ ಇಲ್ಲವೆಂದರು. ಮೇಲೆ ಕುಳಿತಿದ್ದ ಶಿಷ್ಯ ತನ್ನ ಮಾನ ಭಂಗವಾಯಿತೆಂದು ಗೊಳೋ ಎಂದು ಅಳುತ್ತಾ ಕಣ್ಣೀರು ಸುರಿಸಿದ.

ನೀರು ಬಂದು ಭೂಮಿ ಎದೆಯನ್ನು ಮುಟ್ಟಿತು. ಇಳಿದು ಬಂದ ಶಿಷ್ಯನ ಬೆನ್ನು ತಟ್ಟಿ, ಗುರುಗಳು ಎಂದರು. “ನೀ ಕಂಭದ ಎತ್ತರದಿಂದ ಅತ್ತು ಭೂಮಿ ಎದೆ ತಟ್ಟಿದೆ” ಎಂದರು. ಶಿಷ್ಯನ ಮುಖ ಮತ್ತೆ ಪ್ರಫುಲ್ಲಿತವಾಯಿತು. “ಆಕಾಶ ಎಂದೂ ಭೂಮಿ ಮುಟ್ಟಲಾರೆ ಎಂದೆನಿಸಿದರು ಮಳೆಯಲ್ಲಿ ಅತ್ತು ಸುಲಭವಾಗಿ ಭೂಮಿ ಎದೆ ತಟ್ಟುವುದಿಲ್ಲವೇ” ಎಂದರು ಗುರುಗಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿತ್ತವೆಂದತ್ತಿತ್ತ ಹೋದರೆ ಸತ್ಯ ಸಾಯದೇ?
Next post ಗಾರುಡಿಗ

ಸಣ್ಣ ಕತೆ

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…