ಭೂಮಿಯ ಎದೆ ಮುಟ್ಟಿತು

ಒಬ್ಬ ಅತಿ ಎತ್ತರದ ಕಂಭವನ್ನು ಏರಿ ಕುಳಿತು ತಾನು ಎಲ್ಲರಕ್ಕಿಂತ ಎತ್ತರದಲ್ಲಿ ಇರುವನೆಂದು ಹೆಮ್ಮೆಪಡುತ್ತಿದ್ದ.

ಅವನ ಸಹಪಾಠಿ ಹೇಳಿದ “ನಾನು ಹತ್ತದೇ ಈ ಕೋಲಿನಿಂದ ಕಂಭದತುದಿ ಮುಟ್ಟ ಬಲ್ಲೆ. ಸುಲಭದಲ್ಲಿ ಎತ್ತರ ಮುಟ್ಟುವಾಗ ನಿನಗೇಕೆ ಇಷ್ಟು ಜಂಭ?” ಎಂದ. ಅಷ್ಟರಲ್ಲಿ ಅಲ್ಲಿಗೆ ಬಂದ ಒಬ್ಬ. “ಕಂಭದ ಎತ್ತರದಲ್ಲೇ ಕುಳಿತು ಯಾರಿಗಾದರೂ ಭೂಮಿಯ ಎದೆಯನ್ನು ಮುಟ್ಟಲು ಸಾಧ್ಯವೇ?” ಎಂದು ಸವಾಲು ಹಾಕಿದನು.

ಅಲ್ಲಿ ನೆರದ ಶಿಷ್ಯರಲ್ಲಿ ಯಾರೂ ಬಾಯಿ ಬಿಡಲಿಲ್ಲ. ಅದು ಸಾಧ್ಯವೇ ಇಲ್ಲವೆಂದರು. ಮೇಲೆ ಕುಳಿತಿದ್ದ ಶಿಷ್ಯ ತನ್ನ ಮಾನ ಭಂಗವಾಯಿತೆಂದು ಗೊಳೋ ಎಂದು ಅಳುತ್ತಾ ಕಣ್ಣೀರು ಸುರಿಸಿದ.

ನೀರು ಬಂದು ಭೂಮಿ ಎದೆಯನ್ನು ಮುಟ್ಟಿತು. ಇಳಿದು ಬಂದ ಶಿಷ್ಯನ ಬೆನ್ನು ತಟ್ಟಿ, ಗುರುಗಳು ಎಂದರು. “ನೀ ಕಂಭದ ಎತ್ತರದಿಂದ ಅತ್ತು ಭೂಮಿ ಎದೆ ತಟ್ಟಿದೆ” ಎಂದರು. ಶಿಷ್ಯನ ಮುಖ ಮತ್ತೆ ಪ್ರಫುಲ್ಲಿತವಾಯಿತು. “ಆಕಾಶ ಎಂದೂ ಭೂಮಿ ಮುಟ್ಟಲಾರೆ ಎಂದೆನಿಸಿದರು ಮಳೆಯಲ್ಲಿ ಅತ್ತು ಸುಲಭವಾಗಿ ಭೂಮಿ ಎದೆ ತಟ್ಟುವುದಿಲ್ಲವೇ” ಎಂದರು ಗುರುಗಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿತ್ತವೆಂದತ್ತಿತ್ತ ಹೋದರೆ ಸತ್ಯ ಸಾಯದೇ?
Next post ಗಾರುಡಿಗ

ಸಣ್ಣ ಕತೆ

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…