Home / ಕವನ / ಕವಿತೆ / ಎಬ್ಬಿಸಮ್ಮ ತಾಯಿ

ಎಬ್ಬಿಸಮ್ಮ ತಾಯಿ

ಕರ್ನಾಟಕಾಂಬೆಯ ಕನ್ನಡ ಮಾತೆಯೆ
ಎಬ್ಬಿಸಮ್ಮ ತಾಯೆ ಎಬ್ಬೀಸೆ
ನಿನ್ನಯ ಮಕ್ಕಳನೆಬ್ಬೀಸೆ ಕನ್ನಡ ಕಂದರನೆಬ್ಬೀಸೆ

ಹಿಂದಿನ ಕವಿಗಳ ಹಿಂದಿನ ಸಿರಿಗಳ
ಬಾಯ್ತುಂಬ ಹೊಗಳುತ್ತ ಮಲಗಿಹರ
ಇಂದಿನ ಪರಿಗಳ ಮುಂದಿನ ಗುರಿಗಳ
ಕೈಯಿಂದ ಮಾಡದೆ ಕುಳಿತಿಹರ
ಪಂಪ ರನ್ನ ಕುಮಾರವ್ಯಾಸ ಹರಿಹರರೆಂದು
ಜಪಮಾಡಿ ಕುಳಿತರೆ ಬಂದಿತೇನು?
ನೂರಾರು ಪಂಪರು ರನ್ನರು ಬರುವಂತೆ
ಸಾಹಿತ್ಯ ಬಳ್ಳಿಯ ಹಬ್ಬಿಸಮ್ಮಾ ||೧||

ಬಸವಣ್ಣ ಅಲ್ಲಮ ಅಕ್ಕಮಹಾದೇವಿ
ಹೆಸರಾಗಿ ಕೇವಲ ಉಳಿದರೇಕೆ?
ಕನಕ ಪುರಂದರ ಸರ್ವಜ್ಞ ಸಂತರು
ಕನಸಿನ ಚಿತ್ರಗಳಾದರೇಕೆ?
ಪುಲಿಕೇಶಿ ಹೊಯ್ಸಳ ಕೃಷ್ಣ ಟಿಪ್ಪುವಿನ
ನೆಲದಲ್ಲಿ ಕಲಿತನ ಮಳುಗದಂತೆ
ಚೆನ್ನಮ್ಮ ಮಲ್ಲಮ್ಮ ಹೊನ್ನಮ್ಮರ ಮನೆಯಲ್ಲಿ
ಚಿನ್ನದ ಸ್ತ್ರೀಯರು‌ಅಳಿಯದಂತೆ ||೨||

ಹಳೆಬೀಡು ಬೇಲೂರು ಹಾಳಾದ ಹಂಪೀನ
ಗೊಮ್ಮಟ ಗುಮ್ಮಟ ನೋಡಿ ನೋಡಿ
ಮತ್ತೆ ಅಯ್ಯೋ ಆಹಾ ಎಂದರೆ ಬಂತೇ
ಕಲೆಯೆಲ್ಲ ಶಿಲೆಯಾಗಿ ಹೋಯಿತೇನು?
ರಾಜಕಾರಣದಿಸ್ಪೀಟಾಟದೆಲೆಗಳಾಗಿ
ನರಸತ್ತು ನರಳುವರನೆಬ್ಬಿಸಮ್ಮಾ
ಸಾಜ ಸ್ವಂತಿಕೆಯನ್ನು ಮರೆತ ಮಂದೆಗಳನ್ನು
ತಮ್ಮ ತಾವರಿವಂತೆ ಉಬ್ಬಿಸಮ್ಮಾ ||೩||

ಮ್ಮಸೂರಿನಾ ಬದಲು ಕರ್ನಾಟಕಾಯಿತು
ಮಾಸಿದ ಜನಮನ ತೊಳೆವರಾರು
ಒಳಗಿನಾತ್ಮವ ಬಿಟ್ಟು ಹೊದಿಕೆಯ ಹೆಸರಲ್ಲಿ
ನುಸುಳುವ ನುಸಿಗಳ ಕಳೆವರಾರು
ಹಳೆಯ ಜೀವಕೆ ಹೊಸ ಚೇತನ ನೀ ತುಂಬು
ಒಳಿತಾಗಿ ಬಾಳಲು ಹರಸು ತಾಯಿ
ಸಂಸ್ಕೃತಿ ಹಳತೀದೆ ಹೊಸ ನೀರು ಬರಲಮ್ಮ
ಸಿರಿಗನ್ನಡಂಗೆಲ್ಗೆ ಮೆರೆಸು ತಾಯಿ ||೪||
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...