Home / ಕವನ / ಕವಿತೆ / ಎಬ್ಬಿಸಮ್ಮ ತಾಯಿ

ಎಬ್ಬಿಸಮ್ಮ ತಾಯಿ

ಕರ್ನಾಟಕಾಂಬೆಯ ಕನ್ನಡ ಮಾತೆಯೆ
ಎಬ್ಬಿಸಮ್ಮ ತಾಯೆ ಎಬ್ಬೀಸೆ
ನಿನ್ನಯ ಮಕ್ಕಳನೆಬ್ಬೀಸೆ ಕನ್ನಡ ಕಂದರನೆಬ್ಬೀಸೆ

ಹಿಂದಿನ ಕವಿಗಳ ಹಿಂದಿನ ಸಿರಿಗಳ
ಬಾಯ್ತುಂಬ ಹೊಗಳುತ್ತ ಮಲಗಿಹರ
ಇಂದಿನ ಪರಿಗಳ ಮುಂದಿನ ಗುರಿಗಳ
ಕೈಯಿಂದ ಮಾಡದೆ ಕುಳಿತಿಹರ
ಪಂಪ ರನ್ನ ಕುಮಾರವ್ಯಾಸ ಹರಿಹರರೆಂದು
ಜಪಮಾಡಿ ಕುಳಿತರೆ ಬಂದಿತೇನು?
ನೂರಾರು ಪಂಪರು ರನ್ನರು ಬರುವಂತೆ
ಸಾಹಿತ್ಯ ಬಳ್ಳಿಯ ಹಬ್ಬಿಸಮ್ಮಾ ||೧||

ಬಸವಣ್ಣ ಅಲ್ಲಮ ಅಕ್ಕಮಹಾದೇವಿ
ಹೆಸರಾಗಿ ಕೇವಲ ಉಳಿದರೇಕೆ?
ಕನಕ ಪುರಂದರ ಸರ್ವಜ್ಞ ಸಂತರು
ಕನಸಿನ ಚಿತ್ರಗಳಾದರೇಕೆ?
ಪುಲಿಕೇಶಿ ಹೊಯ್ಸಳ ಕೃಷ್ಣ ಟಿಪ್ಪುವಿನ
ನೆಲದಲ್ಲಿ ಕಲಿತನ ಮಳುಗದಂತೆ
ಚೆನ್ನಮ್ಮ ಮಲ್ಲಮ್ಮ ಹೊನ್ನಮ್ಮರ ಮನೆಯಲ್ಲಿ
ಚಿನ್ನದ ಸ್ತ್ರೀಯರು‌ಅಳಿಯದಂತೆ ||೨||

ಹಳೆಬೀಡು ಬೇಲೂರು ಹಾಳಾದ ಹಂಪೀನ
ಗೊಮ್ಮಟ ಗುಮ್ಮಟ ನೋಡಿ ನೋಡಿ
ಮತ್ತೆ ಅಯ್ಯೋ ಆಹಾ ಎಂದರೆ ಬಂತೇ
ಕಲೆಯೆಲ್ಲ ಶಿಲೆಯಾಗಿ ಹೋಯಿತೇನು?
ರಾಜಕಾರಣದಿಸ್ಪೀಟಾಟದೆಲೆಗಳಾಗಿ
ನರಸತ್ತು ನರಳುವರನೆಬ್ಬಿಸಮ್ಮಾ
ಸಾಜ ಸ್ವಂತಿಕೆಯನ್ನು ಮರೆತ ಮಂದೆಗಳನ್ನು
ತಮ್ಮ ತಾವರಿವಂತೆ ಉಬ್ಬಿಸಮ್ಮಾ ||೩||

ಮ್ಮಸೂರಿನಾ ಬದಲು ಕರ್ನಾಟಕಾಯಿತು
ಮಾಸಿದ ಜನಮನ ತೊಳೆವರಾರು
ಒಳಗಿನಾತ್ಮವ ಬಿಟ್ಟು ಹೊದಿಕೆಯ ಹೆಸರಲ್ಲಿ
ನುಸುಳುವ ನುಸಿಗಳ ಕಳೆವರಾರು
ಹಳೆಯ ಜೀವಕೆ ಹೊಸ ಚೇತನ ನೀ ತುಂಬು
ಒಳಿತಾಗಿ ಬಾಳಲು ಹರಸು ತಾಯಿ
ಸಂಸ್ಕೃತಿ ಹಳತೀದೆ ಹೊಸ ನೀರು ಬರಲಮ್ಮ
ಸಿರಿಗನ್ನಡಂಗೆಲ್ಗೆ ಮೆರೆಸು ತಾಯಿ ||೪||
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...