Home / ಕವನ / ಕವಿತೆ / ಎಬ್ಬಿಸಮ್ಮ ತಾಯಿ

ಎಬ್ಬಿಸಮ್ಮ ತಾಯಿ

ಕರ್ನಾಟಕಾಂಬೆಯ ಕನ್ನಡ ಮಾತೆಯೆ
ಎಬ್ಬಿಸಮ್ಮ ತಾಯೆ ಎಬ್ಬೀಸೆ
ನಿನ್ನಯ ಮಕ್ಕಳನೆಬ್ಬೀಸೆ ಕನ್ನಡ ಕಂದರನೆಬ್ಬೀಸೆ

ಹಿಂದಿನ ಕವಿಗಳ ಹಿಂದಿನ ಸಿರಿಗಳ
ಬಾಯ್ತುಂಬ ಹೊಗಳುತ್ತ ಮಲಗಿಹರ
ಇಂದಿನ ಪರಿಗಳ ಮುಂದಿನ ಗುರಿಗಳ
ಕೈಯಿಂದ ಮಾಡದೆ ಕುಳಿತಿಹರ
ಪಂಪ ರನ್ನ ಕುಮಾರವ್ಯಾಸ ಹರಿಹರರೆಂದು
ಜಪಮಾಡಿ ಕುಳಿತರೆ ಬಂದಿತೇನು?
ನೂರಾರು ಪಂಪರು ರನ್ನರು ಬರುವಂತೆ
ಸಾಹಿತ್ಯ ಬಳ್ಳಿಯ ಹಬ್ಬಿಸಮ್ಮಾ ||೧||

ಬಸವಣ್ಣ ಅಲ್ಲಮ ಅಕ್ಕಮಹಾದೇವಿ
ಹೆಸರಾಗಿ ಕೇವಲ ಉಳಿದರೇಕೆ?
ಕನಕ ಪುರಂದರ ಸರ್ವಜ್ಞ ಸಂತರು
ಕನಸಿನ ಚಿತ್ರಗಳಾದರೇಕೆ?
ಪುಲಿಕೇಶಿ ಹೊಯ್ಸಳ ಕೃಷ್ಣ ಟಿಪ್ಪುವಿನ
ನೆಲದಲ್ಲಿ ಕಲಿತನ ಮಳುಗದಂತೆ
ಚೆನ್ನಮ್ಮ ಮಲ್ಲಮ್ಮ ಹೊನ್ನಮ್ಮರ ಮನೆಯಲ್ಲಿ
ಚಿನ್ನದ ಸ್ತ್ರೀಯರು‌ಅಳಿಯದಂತೆ ||೨||

ಹಳೆಬೀಡು ಬೇಲೂರು ಹಾಳಾದ ಹಂಪೀನ
ಗೊಮ್ಮಟ ಗುಮ್ಮಟ ನೋಡಿ ನೋಡಿ
ಮತ್ತೆ ಅಯ್ಯೋ ಆಹಾ ಎಂದರೆ ಬಂತೇ
ಕಲೆಯೆಲ್ಲ ಶಿಲೆಯಾಗಿ ಹೋಯಿತೇನು?
ರಾಜಕಾರಣದಿಸ್ಪೀಟಾಟದೆಲೆಗಳಾಗಿ
ನರಸತ್ತು ನರಳುವರನೆಬ್ಬಿಸಮ್ಮಾ
ಸಾಜ ಸ್ವಂತಿಕೆಯನ್ನು ಮರೆತ ಮಂದೆಗಳನ್ನು
ತಮ್ಮ ತಾವರಿವಂತೆ ಉಬ್ಬಿಸಮ್ಮಾ ||೩||

ಮ್ಮಸೂರಿನಾ ಬದಲು ಕರ್ನಾಟಕಾಯಿತು
ಮಾಸಿದ ಜನಮನ ತೊಳೆವರಾರು
ಒಳಗಿನಾತ್ಮವ ಬಿಟ್ಟು ಹೊದಿಕೆಯ ಹೆಸರಲ್ಲಿ
ನುಸುಳುವ ನುಸಿಗಳ ಕಳೆವರಾರು
ಹಳೆಯ ಜೀವಕೆ ಹೊಸ ಚೇತನ ನೀ ತುಂಬು
ಒಳಿತಾಗಿ ಬಾಳಲು ಹರಸು ತಾಯಿ
ಸಂಸ್ಕೃತಿ ಹಳತೀದೆ ಹೊಸ ನೀರು ಬರಲಮ್ಮ
ಸಿರಿಗನ್ನಡಂಗೆಲ್ಗೆ ಮೆರೆಸು ತಾಯಿ ||೪||
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...