ಎಬ್ಬಿಸಮ್ಮ ತಾಯಿ

ಕರ್ನಾಟಕಾಂಬೆಯ ಕನ್ನಡ ಮಾತೆಯೆ
ಎಬ್ಬಿಸಮ್ಮ ತಾಯೆ ಎಬ್ಬೀಸೆ
ನಿನ್ನಯ ಮಕ್ಕಳನೆಬ್ಬೀಸೆ ಕನ್ನಡ ಕಂದರನೆಬ್ಬೀಸೆ

ಹಿಂದಿನ ಕವಿಗಳ ಹಿಂದಿನ ಸಿರಿಗಳ
ಬಾಯ್ತುಂಬ ಹೊಗಳುತ್ತ ಮಲಗಿಹರ
ಇಂದಿನ ಪರಿಗಳ ಮುಂದಿನ ಗುರಿಗಳ
ಕೈಯಿಂದ ಮಾಡದೆ ಕುಳಿತಿಹರ
ಪಂಪ ರನ್ನ ಕುಮಾರವ್ಯಾಸ ಹರಿಹರರೆಂದು
ಜಪಮಾಡಿ ಕುಳಿತರೆ ಬಂದಿತೇನು?
ನೂರಾರು ಪಂಪರು ರನ್ನರು ಬರುವಂತೆ
ಸಾಹಿತ್ಯ ಬಳ್ಳಿಯ ಹಬ್ಬಿಸಮ್ಮಾ ||೧||

ಬಸವಣ್ಣ ಅಲ್ಲಮ ಅಕ್ಕಮಹಾದೇವಿ
ಹೆಸರಾಗಿ ಕೇವಲ ಉಳಿದರೇಕೆ?
ಕನಕ ಪುರಂದರ ಸರ್ವಜ್ಞ ಸಂತರು
ಕನಸಿನ ಚಿತ್ರಗಳಾದರೇಕೆ?
ಪುಲಿಕೇಶಿ ಹೊಯ್ಸಳ ಕೃಷ್ಣ ಟಿಪ್ಪುವಿನ
ನೆಲದಲ್ಲಿ ಕಲಿತನ ಮಳುಗದಂತೆ
ಚೆನ್ನಮ್ಮ ಮಲ್ಲಮ್ಮ ಹೊನ್ನಮ್ಮರ ಮನೆಯಲ್ಲಿ
ಚಿನ್ನದ ಸ್ತ್ರೀಯರು‌ಅಳಿಯದಂತೆ ||೨||

ಹಳೆಬೀಡು ಬೇಲೂರು ಹಾಳಾದ ಹಂಪೀನ
ಗೊಮ್ಮಟ ಗುಮ್ಮಟ ನೋಡಿ ನೋಡಿ
ಮತ್ತೆ ಅಯ್ಯೋ ಆಹಾ ಎಂದರೆ ಬಂತೇ
ಕಲೆಯೆಲ್ಲ ಶಿಲೆಯಾಗಿ ಹೋಯಿತೇನು?
ರಾಜಕಾರಣದಿಸ್ಪೀಟಾಟದೆಲೆಗಳಾಗಿ
ನರಸತ್ತು ನರಳುವರನೆಬ್ಬಿಸಮ್ಮಾ
ಸಾಜ ಸ್ವಂತಿಕೆಯನ್ನು ಮರೆತ ಮಂದೆಗಳನ್ನು
ತಮ್ಮ ತಾವರಿವಂತೆ ಉಬ್ಬಿಸಮ್ಮಾ ||೩||

ಮ್ಮಸೂರಿನಾ ಬದಲು ಕರ್ನಾಟಕಾಯಿತು
ಮಾಸಿದ ಜನಮನ ತೊಳೆವರಾರು
ಒಳಗಿನಾತ್ಮವ ಬಿಟ್ಟು ಹೊದಿಕೆಯ ಹೆಸರಲ್ಲಿ
ನುಸುಳುವ ನುಸಿಗಳ ಕಳೆವರಾರು
ಹಳೆಯ ಜೀವಕೆ ಹೊಸ ಚೇತನ ನೀ ತುಂಬು
ಒಳಿತಾಗಿ ಬಾಳಲು ಹರಸು ತಾಯಿ
ಸಂಸ್ಕೃತಿ ಹಳತೀದೆ ಹೊಸ ನೀರು ಬರಲಮ್ಮ
ಸಿರಿಗನ್ನಡಂಗೆಲ್ಗೆ ಮೆರೆಸು ತಾಯಿ ||೪||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವೃಂದಗಾನ
Next post ಅವನು, ಅವಳು ಮತ್ತು ಬದುಕು

ಸಣ್ಣ ಕತೆ

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…