ಒಲವಿನ ಬೇಗೆಯ ಬೀಸುಗೋಲಿನ ಬಾಸಾಳಗಳ ತಾಳಲಾರೆ ಬಾರೆ
ಮನ್ಮಥನ ಚೆಂದುಟಿ ನಿನ್ನ ಚೆನ್ನೈದಿಲೆ ಮೈಯನೆಲ್ಲ
ಮುದ್ದಿಟ್ಟು ರಂಗೇರಿಸಿದೆ
ಭಾವೋದ್ವೇಗದ ಸೆಳೆಮಿಂಚು
ಉಕ್ಕಿಹರಿದು ಬಾಯಿ ಕಣ್ಣುಗಳ ಮುದ್ರಿಸಿದೆ
ನರನರಗಳನುದ್ರೇಕಿಸಿದೆ
ಮದಿರೆಯ ಮತ್ತೊಂದು
ಮದನನ ಮುದವೊಂದು ಹದವಾಗಿದೆ ಬಾ
ರಸಜೇನುಂಡ ಎದೆವೊಲ
ಹಾಡಿ ಹಾಡಿ ಪ್ರೇಮಾಲಾಪವ
ದಣಿದು ಮಾತುಮೀರಿ ಮೂಕವಾಗಿ ನಿನಗೆ ಶರಣಾಗಿದೆ ವೀಣೆ
ಎನ್ನ ಹೃದಯಗಾನದೆದುರು ಅದು ಸಪ್ಪೆ ಕಣೇ,
ನಿನ್ನೆಯಳಿದು ಹೂಳಿಹೋಗಿದೆ
ನಾಳೆಯುದಿಸಿ ಬರುವುದೋ ಬಾರದೋ!
ನನ್ನ ನಿನ್ನ ಕೈಯೊಳಗಿದೆ ಇಂದಿನೀ ಚಣ
ಸುರಲೋಕವ ಮೀರಿಸುವ ಸುರೆಯಿದೆ
ಮೇದಿನಿಯ ಮೋದವನೊತ್ತೆಗೊಂಡ ಮಧುವಿದೆ ಇಲ್ಲೆ ಈಗನೀಂಟು ಬಾ
ಇದೆ ಇದೇ ಅಮರಸೊದೆ ಅಮರಲೋಕವೆಲ್ಲಿಹುದೋ?
ಅದರಾಸೆನೇಣಿಗೇಕೆ ಕೊರಳ ಕೊಡುವೆ
ನರಕವೂ ಅಷ್ಟೆ ಈಗನು ಕಳಕೊಂಡರೆ ನರಕವಷ್ಟೆ
ತೆರೆ ಬಾಯಿ ಮಧುವನೀಂಟುವೆ
ತೆರೆ ಕಣ್ಣು ಎದೆಗಿಳಿಯುವೆ ಜೇನಾಗಿ
ತೆರೆಯೆದೆಯ ಒಂದಾಗಿ ಕೂಡುವೆ ನಾನೀ ಭೇದ ನೀಗಿ
*****
Related Post
ಸಣ್ಣ ಕತೆ
-
ಕೂನನ ಮಗಳು ಕೆಂಚಿಯೂ….
ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…
-
ಲೋಕೋಪಕಾರ!
ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…
-
ಕಳಕೊಂಡವನು
ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…
-
ಸ್ವಯಂಪ್ರಕಾಶ
ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…
-
ಮೌನವು ಮುದ್ದಿಗಾಗಿ!
ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…