ಭ್ರೂಣಗಳು

ಕಣ್ಣು, ಮೂಗು, ಬಾಯಿ
ಕೈಕಾಲು ಇನ್ನೂ ಮೂಡಿರದ
ಜೀವಧಾತುವಿನ ಮಿಸುಕಾಟ
ಹೊಯ್ದಾಡುವ ಭ್ರೂಣಗಳು
ಗರ್‍ಭದಲ್ಲಿ ಮಿಸುಕುವ
ಜೀವದ್ರವದ ಎದೆಬಡಿತ
ಅಸ್ಪಷ್ಟ ಜೀವದ ಚಲನೆ
ಲಿಂಗಪತ್ತೆ ಮಾಡಿದ್ದು
ಮನುಜನ ಸಾಧನೆ ಎನ್ನಲೆ?
ವಿಜ್ಞಾನದ ಕತ್ತರಿಯಿಂದ
ಹೆಣ್ಣು ಭ್ರೂಣಗಳಿಗೆ ನಿಷೇಧ
ಹೊಕ್ಕಳ ಬಳ್ಳಿಯನ್ನು ಕಡಿದು
ಮೃತ್ಯು ಕೂಪಕೆ ತಳ್ಳಿದ
ನಿರ್‍ದಾಕ್ಷಿಣ್ಯದ ಕತ್ತರಿಪ್ರಯೋಗ
ಜೀವಗಳ ಉಸಿರಾಟ ಕಡಿವ
ನಿಷೇಧಗಳ ಹೇರಿ
ಹಸಿ ಭ್ರೂಣಗಳ ಬಲಿ
ಗುಬ್ಬಿ ಗೂಡುಗಳಲ್ಲಿ
ಸೇರಿದ ಎಷ ಸರ್‍ಪ
ಕೂಡಿಟ್ಟ ಮೊಟ್ಟೆಗಳನ್ನು
ತಿಂದು ತೇಗಿದರೇನು?
ಹಲ್ಲು ಕೀಳುವ ವಾರಾಸುದಾರರು
ಹುಟ್ಟಿ ಬರುತ್ತಾರೆ ಮುಂದೆ
ಸಾಯಿಸಿದ ಹೆಣ್ಣು ಭ್ರೂಣಗಳ
ಲೆಕ್ಕ ಕೇಳುತ್ತಾರೆ,
ಎಲ್ಲ ನಿಷೇಧಗಳ ಕಿತ್ತು ಹಾಕುತ್ತಾರೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಡ್ಡಿನ ಮಹಿಮೆ
Next post ಕವಿ ಬೇಂದ್ರೆಯವರನ್ನು ಕುರಿತು

ಸಣ್ಣ ಕತೆ

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…