Home / ಕಥೆ / ಕಿರು ಕಥೆ / ವೃಕ್ಷಾಲಾಪ

ವೃಕ್ಷಾಲಾಪ

ಉದರಿದ ಹೂ ಒಂದು, ಗಾಳಿ ಜೊತೆ ಸೇರಿ ದಾರಿ ತಪ್ಪಿತು. ತಾಯಿ ಗಿಡ ಹೇಳಿತು- “ಪೋಲಿ ಗಾಳಿ ಜೊತೆ ಅಲೆಯ ಬೇಡ” ಎಂದು. ಹೂ ಕೇಳಲಿಲ್ಲ. ಗಾಳಿ ಬಿಡಲಿಲ್ಲ. ತೋಳು ತೋಳಿಗೆ ಸೇರಿಸಿ ಗಾಳಿ-ಹೂವು ಬಹು ದೂರ ನಡದೇಬಿಟ್ಟವು.

ತಾಯಿ ಗಿಡದ ಹೃದಯ ಕಂಪಿಸಿ ನಡುಗಿತು. ಉದರಿದ ಎಲೆಗಳನ್ನು ಅಟ್ಟಿತು ಬೆನ್ನುಗಾವಲಿಗೆ.

“ಹಕ್ಕಿಗಳಿಗೆ ಹಾರಿ ಹೋಗಿ ಹೂವಿನ ಪಾಡೇನಯಿತೆಂದು ತಿಳಿದು ಬನ್ನಿ ಎಂದು ಬೇಡಿಕೊಂಡಿತು. ಹೂವಿನ ಗಂಧಕ್ಕೆ ಗಾಳಿಯ ಮನ ಸೋತಿತು. ಗಾಳಿಯ ಪ್ರೇಮ ಸುಳಿಯಲ್ಲಿ ಹೂವು ಸಿಲುಕಿತು. ಬಹುದೂರ, ಬಹುದೂರ ರಾಜಕುಮಾರಿ ಹೂವಿನೊಡನೆ ಗಾಳಿಕುದರೆ ಏರಿ ಸಾಗಿತು. “ಗಾಳಿ, ನೀ ನನ್ನ ಕೈ ಬಿಡುವುದಿಲ್ಲ ಅಲ್ಲವೆ?” ಎಂದು ಹೂ ಮೆಲ್ಲಗೆ ಕೇಳಿತು. “ನನ್ನ ಹೀಗೆ ಕನಸಿನ ಲೋಕದಲ್ಲಿ, ಆಗಸದ ನಕ್ಷತ್ರದ ಹಾದಿಯಲ್ಲಿ ಕರದೊಯ್ಯುವಿಯಾ? ಪ್ರಿಯಾ, ನಿನ್ನನೆಂದೂ ಬಿಟ್ಟಿರಲಾರೆ” ಎಂದಿತು ಹೂವು.

ಗಾಳಿಗೆ ಮೈ ಉಬ್ಬಿಹೋಯಿತು. ತನ್ನ ಸಮಾನರಾರು ಇಲ್ಲವೆನಿಸಿತು. ಹೆಮ್ಮೆಯಿಂದ ಹೂವಿಗೆ ಹೇಳಿತು.

“ನಿನಗೆ ಮೋಡ ಬೇಕೆ? ಸೂರ್‍ಯ ಬೇಕೆ? ಚಂದ್ರ ಬೇಕೆ? ಮಿಂಚು ಬೇಕೇ? ಮಳೆ ಬೇಕೆ? ಏನಾದರು ಕೂಡಬಲ್ಲೆ” ಎಂದು ಎದೆ ಉಬ್ಬಿ ಹೇಳಿತು.

ಹೂವು ಹೃದಯ ತುಂಬಿ ಹೇಳಿತು,

“ನನಗೆ ನೀನಿರೆ ಮತ್ತೇನು ಬೇಕು ಹೇಳು”, ಎಂದಿತು. ಗಾಳಿ ತನ್ನ ಪ್ರತಾಪ ತೋರಲು ಭೋರೆಂದು ಬೀಸಿತು.

ಹೂವಿಗೆ ಝೂಲೀ ಬಂತು. ಗಾಳಿಯ ಅಪ್ಪುಗೆ ಕತ್ತು ಹಿಚಿಕಿದಂತಾಯಿತು. ಹೃದಯ ನಡುಗಿತು. ಕಣ್ಣು ಕಟ್ಟಿತು. ಒಂದು ಕ್ಷಣದಲ್ಲಿ ಬೆಟ್ಟ ಗುಡ್ಡದ ಮೇಲೆ ದೊಪ್ಪನೆ ಬಿದ್ದಿತು. ಹೂವು ಕಣ್ಣು ತೆರೆದು ನೋಡಿತು. ಕೆಳಗೆ ಗಿರಿ ಕಂದರ. ಅಲ್ಲಿ ತಾಯಿ ಗಿಡ, ಉದರಿದ ಎಲೆಗಳು, ಹಕ್ಕಿ ಬಳಗ ಎಲ್ಲ ಸೇರಿ ಕಾತುರದಿಂದ ಹೂವಿನ ಬರುವಿಗಾಗಿ ಕಾಯುತ್ತ ಕಣ್ಣೀರಿಡುತ್ತಿದ್ದವು. ಏನೂ ತೋಚದೆ ಹೂವು ಜಲಪಾತದಿಂದ ಧುಮಿಕಿಬಿಟ್ಟು ಗಿಡದ ಮಡಿಲು ಬಂದು ಸೇರಿತು. ಗಿಡದ ತುಂಬಾ ಇಬ್ಬನಿ ತುಂಬಿದ ಅಶ್ರುಗಳು ಹೂವನ್ನು ಸ್ವಾಗತಿಸಿದವು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...