Home / ಕಥೆ / ಕಿರು ಕಥೆ / ವೃಕ್ಷಾಲಾಪ

ವೃಕ್ಷಾಲಾಪ

ಉದರಿದ ಹೂ ಒಂದು, ಗಾಳಿ ಜೊತೆ ಸೇರಿ ದಾರಿ ತಪ್ಪಿತು. ತಾಯಿ ಗಿಡ ಹೇಳಿತು- “ಪೋಲಿ ಗಾಳಿ ಜೊತೆ ಅಲೆಯ ಬೇಡ” ಎಂದು. ಹೂ ಕೇಳಲಿಲ್ಲ. ಗಾಳಿ ಬಿಡಲಿಲ್ಲ. ತೋಳು ತೋಳಿಗೆ ಸೇರಿಸಿ ಗಾಳಿ-ಹೂವು ಬಹು ದೂರ ನಡದೇಬಿಟ್ಟವು.

ತಾಯಿ ಗಿಡದ ಹೃದಯ ಕಂಪಿಸಿ ನಡುಗಿತು. ಉದರಿದ ಎಲೆಗಳನ್ನು ಅಟ್ಟಿತು ಬೆನ್ನುಗಾವಲಿಗೆ.

“ಹಕ್ಕಿಗಳಿಗೆ ಹಾರಿ ಹೋಗಿ ಹೂವಿನ ಪಾಡೇನಯಿತೆಂದು ತಿಳಿದು ಬನ್ನಿ ಎಂದು ಬೇಡಿಕೊಂಡಿತು. ಹೂವಿನ ಗಂಧಕ್ಕೆ ಗಾಳಿಯ ಮನ ಸೋತಿತು. ಗಾಳಿಯ ಪ್ರೇಮ ಸುಳಿಯಲ್ಲಿ ಹೂವು ಸಿಲುಕಿತು. ಬಹುದೂರ, ಬಹುದೂರ ರಾಜಕುಮಾರಿ ಹೂವಿನೊಡನೆ ಗಾಳಿಕುದರೆ ಏರಿ ಸಾಗಿತು. “ಗಾಳಿ, ನೀ ನನ್ನ ಕೈ ಬಿಡುವುದಿಲ್ಲ ಅಲ್ಲವೆ?” ಎಂದು ಹೂ ಮೆಲ್ಲಗೆ ಕೇಳಿತು. “ನನ್ನ ಹೀಗೆ ಕನಸಿನ ಲೋಕದಲ್ಲಿ, ಆಗಸದ ನಕ್ಷತ್ರದ ಹಾದಿಯಲ್ಲಿ ಕರದೊಯ್ಯುವಿಯಾ? ಪ್ರಿಯಾ, ನಿನ್ನನೆಂದೂ ಬಿಟ್ಟಿರಲಾರೆ” ಎಂದಿತು ಹೂವು.

ಗಾಳಿಗೆ ಮೈ ಉಬ್ಬಿಹೋಯಿತು. ತನ್ನ ಸಮಾನರಾರು ಇಲ್ಲವೆನಿಸಿತು. ಹೆಮ್ಮೆಯಿಂದ ಹೂವಿಗೆ ಹೇಳಿತು.

“ನಿನಗೆ ಮೋಡ ಬೇಕೆ? ಸೂರ್‍ಯ ಬೇಕೆ? ಚಂದ್ರ ಬೇಕೆ? ಮಿಂಚು ಬೇಕೇ? ಮಳೆ ಬೇಕೆ? ಏನಾದರು ಕೂಡಬಲ್ಲೆ” ಎಂದು ಎದೆ ಉಬ್ಬಿ ಹೇಳಿತು.

ಹೂವು ಹೃದಯ ತುಂಬಿ ಹೇಳಿತು,

“ನನಗೆ ನೀನಿರೆ ಮತ್ತೇನು ಬೇಕು ಹೇಳು”, ಎಂದಿತು. ಗಾಳಿ ತನ್ನ ಪ್ರತಾಪ ತೋರಲು ಭೋರೆಂದು ಬೀಸಿತು.

ಹೂವಿಗೆ ಝೂಲೀ ಬಂತು. ಗಾಳಿಯ ಅಪ್ಪುಗೆ ಕತ್ತು ಹಿಚಿಕಿದಂತಾಯಿತು. ಹೃದಯ ನಡುಗಿತು. ಕಣ್ಣು ಕಟ್ಟಿತು. ಒಂದು ಕ್ಷಣದಲ್ಲಿ ಬೆಟ್ಟ ಗುಡ್ಡದ ಮೇಲೆ ದೊಪ್ಪನೆ ಬಿದ್ದಿತು. ಹೂವು ಕಣ್ಣು ತೆರೆದು ನೋಡಿತು. ಕೆಳಗೆ ಗಿರಿ ಕಂದರ. ಅಲ್ಲಿ ತಾಯಿ ಗಿಡ, ಉದರಿದ ಎಲೆಗಳು, ಹಕ್ಕಿ ಬಳಗ ಎಲ್ಲ ಸೇರಿ ಕಾತುರದಿಂದ ಹೂವಿನ ಬರುವಿಗಾಗಿ ಕಾಯುತ್ತ ಕಣ್ಣೀರಿಡುತ್ತಿದ್ದವು. ಏನೂ ತೋಚದೆ ಹೂವು ಜಲಪಾತದಿಂದ ಧುಮಿಕಿಬಿಟ್ಟು ಗಿಡದ ಮಡಿಲು ಬಂದು ಸೇರಿತು. ಗಿಡದ ತುಂಬಾ ಇಬ್ಬನಿ ತುಂಬಿದ ಅಶ್ರುಗಳು ಹೂವನ್ನು ಸ್ವಾಗತಿಸಿದವು.
*****

Tagged:

Leave a Reply

Your email address will not be published. Required fields are marked *

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...