ವೃಕ್ಷಾಲಾಪ

ಉದರಿದ ಹೂ ಒಂದು, ಗಾಳಿ ಜೊತೆ ಸೇರಿ ದಾರಿ ತಪ್ಪಿತು. ತಾಯಿ ಗಿಡ ಹೇಳಿತು- “ಪೋಲಿ ಗಾಳಿ ಜೊತೆ ಅಲೆಯ ಬೇಡ” ಎಂದು. ಹೂ ಕೇಳಲಿಲ್ಲ. ಗಾಳಿ ಬಿಡಲಿಲ್ಲ. ತೋಳು ತೋಳಿಗೆ ಸೇರಿಸಿ ಗಾಳಿ-ಹೂವು ಬಹು ದೂರ ನಡದೇಬಿಟ್ಟವು.

ತಾಯಿ ಗಿಡದ ಹೃದಯ ಕಂಪಿಸಿ ನಡುಗಿತು. ಉದರಿದ ಎಲೆಗಳನ್ನು ಅಟ್ಟಿತು ಬೆನ್ನುಗಾವಲಿಗೆ.

“ಹಕ್ಕಿಗಳಿಗೆ ಹಾರಿ ಹೋಗಿ ಹೂವಿನ ಪಾಡೇನಯಿತೆಂದು ತಿಳಿದು ಬನ್ನಿ ಎಂದು ಬೇಡಿಕೊಂಡಿತು. ಹೂವಿನ ಗಂಧಕ್ಕೆ ಗಾಳಿಯ ಮನ ಸೋತಿತು. ಗಾಳಿಯ ಪ್ರೇಮ ಸುಳಿಯಲ್ಲಿ ಹೂವು ಸಿಲುಕಿತು. ಬಹುದೂರ, ಬಹುದೂರ ರಾಜಕುಮಾರಿ ಹೂವಿನೊಡನೆ ಗಾಳಿಕುದರೆ ಏರಿ ಸಾಗಿತು. “ಗಾಳಿ, ನೀ ನನ್ನ ಕೈ ಬಿಡುವುದಿಲ್ಲ ಅಲ್ಲವೆ?” ಎಂದು ಹೂ ಮೆಲ್ಲಗೆ ಕೇಳಿತು. “ನನ್ನ ಹೀಗೆ ಕನಸಿನ ಲೋಕದಲ್ಲಿ, ಆಗಸದ ನಕ್ಷತ್ರದ ಹಾದಿಯಲ್ಲಿ ಕರದೊಯ್ಯುವಿಯಾ? ಪ್ರಿಯಾ, ನಿನ್ನನೆಂದೂ ಬಿಟ್ಟಿರಲಾರೆ” ಎಂದಿತು ಹೂವು.

ಗಾಳಿಗೆ ಮೈ ಉಬ್ಬಿಹೋಯಿತು. ತನ್ನ ಸಮಾನರಾರು ಇಲ್ಲವೆನಿಸಿತು. ಹೆಮ್ಮೆಯಿಂದ ಹೂವಿಗೆ ಹೇಳಿತು.

“ನಿನಗೆ ಮೋಡ ಬೇಕೆ? ಸೂರ್‍ಯ ಬೇಕೆ? ಚಂದ್ರ ಬೇಕೆ? ಮಿಂಚು ಬೇಕೇ? ಮಳೆ ಬೇಕೆ? ಏನಾದರು ಕೂಡಬಲ್ಲೆ” ಎಂದು ಎದೆ ಉಬ್ಬಿ ಹೇಳಿತು.

ಹೂವು ಹೃದಯ ತುಂಬಿ ಹೇಳಿತು,

“ನನಗೆ ನೀನಿರೆ ಮತ್ತೇನು ಬೇಕು ಹೇಳು”, ಎಂದಿತು. ಗಾಳಿ ತನ್ನ ಪ್ರತಾಪ ತೋರಲು ಭೋರೆಂದು ಬೀಸಿತು.

ಹೂವಿಗೆ ಝೂಲೀ ಬಂತು. ಗಾಳಿಯ ಅಪ್ಪುಗೆ ಕತ್ತು ಹಿಚಿಕಿದಂತಾಯಿತು. ಹೃದಯ ನಡುಗಿತು. ಕಣ್ಣು ಕಟ್ಟಿತು. ಒಂದು ಕ್ಷಣದಲ್ಲಿ ಬೆಟ್ಟ ಗುಡ್ಡದ ಮೇಲೆ ದೊಪ್ಪನೆ ಬಿದ್ದಿತು. ಹೂವು ಕಣ್ಣು ತೆರೆದು ನೋಡಿತು. ಕೆಳಗೆ ಗಿರಿ ಕಂದರ. ಅಲ್ಲಿ ತಾಯಿ ಗಿಡ, ಉದರಿದ ಎಲೆಗಳು, ಹಕ್ಕಿ ಬಳಗ ಎಲ್ಲ ಸೇರಿ ಕಾತುರದಿಂದ ಹೂವಿನ ಬರುವಿಗಾಗಿ ಕಾಯುತ್ತ ಕಣ್ಣೀರಿಡುತ್ತಿದ್ದವು. ಏನೂ ತೋಚದೆ ಹೂವು ಜಲಪಾತದಿಂದ ಧುಮಿಕಿಬಿಟ್ಟು ಗಿಡದ ಮಡಿಲು ಬಂದು ಸೇರಿತು. ಗಿಡದ ತುಂಬಾ ಇಬ್ಬನಿ ತುಂಬಿದ ಅಶ್ರುಗಳು ಹೂವನ್ನು ಸ್ವಾಗತಿಸಿದವು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನ್ನಡ ಕಾವ್ಯದ ಅಭಿಮನ್ಯು
Next post ನಿಲುವಂಗಿ

ಸಣ್ಣ ಕತೆ

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…