Home / ಕಥೆ / ಕಿರು ಕಥೆ / ವೃಕ್ಷಾಲಾಪ

ವೃಕ್ಷಾಲಾಪ

ಉದರಿದ ಹೂ ಒಂದು, ಗಾಳಿ ಜೊತೆ ಸೇರಿ ದಾರಿ ತಪ್ಪಿತು. ತಾಯಿ ಗಿಡ ಹೇಳಿತು- “ಪೋಲಿ ಗಾಳಿ ಜೊತೆ ಅಲೆಯ ಬೇಡ” ಎಂದು. ಹೂ ಕೇಳಲಿಲ್ಲ. ಗಾಳಿ ಬಿಡಲಿಲ್ಲ. ತೋಳು ತೋಳಿಗೆ ಸೇರಿಸಿ ಗಾಳಿ-ಹೂವು ಬಹು ದೂರ ನಡದೇಬಿಟ್ಟವು.

ತಾಯಿ ಗಿಡದ ಹೃದಯ ಕಂಪಿಸಿ ನಡುಗಿತು. ಉದರಿದ ಎಲೆಗಳನ್ನು ಅಟ್ಟಿತು ಬೆನ್ನುಗಾವಲಿಗೆ.

“ಹಕ್ಕಿಗಳಿಗೆ ಹಾರಿ ಹೋಗಿ ಹೂವಿನ ಪಾಡೇನಯಿತೆಂದು ತಿಳಿದು ಬನ್ನಿ ಎಂದು ಬೇಡಿಕೊಂಡಿತು. ಹೂವಿನ ಗಂಧಕ್ಕೆ ಗಾಳಿಯ ಮನ ಸೋತಿತು. ಗಾಳಿಯ ಪ್ರೇಮ ಸುಳಿಯಲ್ಲಿ ಹೂವು ಸಿಲುಕಿತು. ಬಹುದೂರ, ಬಹುದೂರ ರಾಜಕುಮಾರಿ ಹೂವಿನೊಡನೆ ಗಾಳಿಕುದರೆ ಏರಿ ಸಾಗಿತು. “ಗಾಳಿ, ನೀ ನನ್ನ ಕೈ ಬಿಡುವುದಿಲ್ಲ ಅಲ್ಲವೆ?” ಎಂದು ಹೂ ಮೆಲ್ಲಗೆ ಕೇಳಿತು. “ನನ್ನ ಹೀಗೆ ಕನಸಿನ ಲೋಕದಲ್ಲಿ, ಆಗಸದ ನಕ್ಷತ್ರದ ಹಾದಿಯಲ್ಲಿ ಕರದೊಯ್ಯುವಿಯಾ? ಪ್ರಿಯಾ, ನಿನ್ನನೆಂದೂ ಬಿಟ್ಟಿರಲಾರೆ” ಎಂದಿತು ಹೂವು.

ಗಾಳಿಗೆ ಮೈ ಉಬ್ಬಿಹೋಯಿತು. ತನ್ನ ಸಮಾನರಾರು ಇಲ್ಲವೆನಿಸಿತು. ಹೆಮ್ಮೆಯಿಂದ ಹೂವಿಗೆ ಹೇಳಿತು.

“ನಿನಗೆ ಮೋಡ ಬೇಕೆ? ಸೂರ್‍ಯ ಬೇಕೆ? ಚಂದ್ರ ಬೇಕೆ? ಮಿಂಚು ಬೇಕೇ? ಮಳೆ ಬೇಕೆ? ಏನಾದರು ಕೂಡಬಲ್ಲೆ” ಎಂದು ಎದೆ ಉಬ್ಬಿ ಹೇಳಿತು.

ಹೂವು ಹೃದಯ ತುಂಬಿ ಹೇಳಿತು,

“ನನಗೆ ನೀನಿರೆ ಮತ್ತೇನು ಬೇಕು ಹೇಳು”, ಎಂದಿತು. ಗಾಳಿ ತನ್ನ ಪ್ರತಾಪ ತೋರಲು ಭೋರೆಂದು ಬೀಸಿತು.

ಹೂವಿಗೆ ಝೂಲೀ ಬಂತು. ಗಾಳಿಯ ಅಪ್ಪುಗೆ ಕತ್ತು ಹಿಚಿಕಿದಂತಾಯಿತು. ಹೃದಯ ನಡುಗಿತು. ಕಣ್ಣು ಕಟ್ಟಿತು. ಒಂದು ಕ್ಷಣದಲ್ಲಿ ಬೆಟ್ಟ ಗುಡ್ಡದ ಮೇಲೆ ದೊಪ್ಪನೆ ಬಿದ್ದಿತು. ಹೂವು ಕಣ್ಣು ತೆರೆದು ನೋಡಿತು. ಕೆಳಗೆ ಗಿರಿ ಕಂದರ. ಅಲ್ಲಿ ತಾಯಿ ಗಿಡ, ಉದರಿದ ಎಲೆಗಳು, ಹಕ್ಕಿ ಬಳಗ ಎಲ್ಲ ಸೇರಿ ಕಾತುರದಿಂದ ಹೂವಿನ ಬರುವಿಗಾಗಿ ಕಾಯುತ್ತ ಕಣ್ಣೀರಿಡುತ್ತಿದ್ದವು. ಏನೂ ತೋಚದೆ ಹೂವು ಜಲಪಾತದಿಂದ ಧುಮಿಕಿಬಿಟ್ಟು ಗಿಡದ ಮಡಿಲು ಬಂದು ಸೇರಿತು. ಗಿಡದ ತುಂಬಾ ಇಬ್ಬನಿ ತುಂಬಿದ ಅಶ್ರುಗಳು ಹೂವನ್ನು ಸ್ವಾಗತಿಸಿದವು.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...