ಕವನ ಹುಟ್ಟಿತು ಕೇಳಾ

ಹುಟ್ಟಿತು
ಕವನ ಹುಟ್ಟಿತೂ
ಕವನ ಹುಟ್ಟಿತೂ ಕೇಳಾ

ಎಲ್ಲಿಂದಲೋ ಹೇಗೋ ಏನೋ
ಹಾರಿಬಂದ ಕನಸಿನ ಬೊಟ್ಟು
ಮೈಯೊಳಗೆ ನೆಟ್ಟು
ನೆತ್ತಿಯಿಂದ ಹೆಬ್ಬೆರಳ
ತುದಿಯೊರೆಗೂ
ಬಯಕೆ ಬಾಯ್ತೆರೆದಾ ಬಸುರು.

ದಿನದಿನಕು ಕಣ್‌ಮೂಗು ಮೂಡಿ
ಮೈಕೈ ತುಂಬಿ ಹಾಡಿ
ಒಳಗೇ ಬಲಿಯುತಾ
ಕನಸಿನ ಜೀವಭಾವ
ದಿನತುಂಬಿ ಬಂದು
ಏನೋ ನೋವು ಎದೆಯಲ್ಲಿ ನಿಂದು

ಎಂದು ಬರುವುದೋ
ಎಂತು ಬರುವುದೋ
ಬಾರದೇ ಉಳಿವುದೋ
ಯಾವ ರೂಪವೋ
ಹಂಬಲಿಸಿ ಕಾದುಕೂತ
ಕಸೂತಿ ಕನಸವಸ್ತ್ರ

ಕಾಯುವಿಕೆಯ ಅನಂತತೆಯಲ್ಲೇ
ಅಮೂರ್ತ ಕನಸು ಪಕ್ವಗೊಂಡು
ಮೂರ್ತ ಶರೀರದ ಕೈಹಿಡಿದು
ಹೊರಬಿದ್ದ ಗಳಿಗೆ ಕನಸು ನನಸಾಯಿತು
ಹನಿಯು ಸಾಗರವಾಯಿತು
ಭಾವವೊಂದು ಕವನವಾಯಿತು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಿಂಗಮ್ಮನ ವಚನಗಳು – ೮
Next post ಪ್ರಶ್ನೆಯಿಲ್ಲದ ಬದುಕೊಂದು ಬದುಕೆ

ಸಣ್ಣ ಕತೆ

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

cheap jordans|wholesale air max|wholesale jordans|wholesale jewelry|wholesale jerseys