ಒಲ್ಲದ ಕೊಡಿಗೆ

ಒಲ್ಲೆವಿದನಿನ್ನು ಹರಳಡಸಿದೀ ಹಿಡಿತುತ್ತೆ?
ಕೊರಳು ಕರುಳಂ ಬಗಿನ ಬುತ್ತಿ ತಾನಲ್ಲ?
ಕೊಡಿಗೆ ಎನಲೊಂದೆ-‘ಆಂಗ್ಲರೆ, ನಡಿರಿ ಈವತ್ತೆ!
ನೀವಿಲ್ಲಿಹನ್ನೆಗಂ ಬಿಡುಗಡೆಮಗಿಲ್ಲ!’

ಒಂದು ಕೆಯ್ಯಂದೀ ಉದಾರ (!) ಕೊಡಿಗೆಯ ಕೊಟ್ಟು
ತಾವಿನ್ನು ತೆರಳಲಿಹೆನೆಂದು ತೋರ್‍ವಂದು
ಮತ್ತೊಂದರಿಂದೆನ್ನ ಹಿಂದೆ ಜುಟ್ಟಿಗೆ ಜುಟ್ಟು
ಗಂಟಿಕ್ಕುವೀ ದ್ರೋಹ ಯಾರ್‍ಗೆ ಹೊಸತಿಂದು?

ಶಶಿಸೂರ್‍ಯರೆರಡೆ ಹೊರತೆಮ್ಮದೆಂದಾವೊಂದು
ನಮ್ಮ ದೇಶದೊಳಕಟ ನಮಗುಳಿದುದಿಲ್ಲ!
ದೋಚಿದೆಲ್ಲವ ಮರಳಿ ಬಾಚಲಾವಿರುವಂದು
ಹೊನ್ನೆಡೆಗೆ ಹಿತ್ತಾಳಿ? ಛಃ ನಮಗಿದೊಲ್ಲ!

ನಮ್ಮ ಕಾಲಲೆ ನಿತ್ತು ಕಾಲವಂ ಕಡೆವ,
ಬಿಡುಗಡೆಯ ಸೆಳೆವರಂ ದುಡಿವ! ಹೆದ್ದುಡಿವ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನ್ನಡ ಕೀರುತಿ
Next post ಉಪ್ಪಿನ ಋಣ

ಸಣ್ಣ ಕತೆ

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…