Home / ಲೇಖನ / ಇತರೆ / ಉಪ್ಪಿನ ಋಣ

ಉಪ್ಪಿನ ಋಣ

“ಉಪ್ಪಿಗಿಂತ ರುಚಿಯಿಲ್ಲ. ತಾಯಿಗಿಂತ ಬಂಧುವಿಲ್ಲ” ಎಂಬ ಗಾದೆ ಮಾತೇ ಇದೆ. ಉಪ್ಪಿನ ಋಣ ತೀರದು. ಯಾರ ಬಳಿ ಉಪ್ಪು ಸಾಲವಾಗಿ ಪಡೆಯಬಾರದು. ರಾತ್ರಿ ಸಮಯ ಉಪ್ಪು ಮನೆಗೆ ತರಬಾರದು. ಉಪ್ಪು, ಅಡಿಗೆ ಎಣ್ಣೆ, ಬೆಲ್ಲ ಒಂದೇ ಸಾರಿ ತರಬಾರದು ಶುಭ ಸೂಚನೆಗಳಲ್ಲ!

ಮನೆಯಲ್ಲಿ ಉಪ್ಪು ಯಾವಾಗಲೂ ಇರುವಂತೆ ನೋಡಿಕೊಳ್ಳಬೇಕು. ಯಾವುದಕ್ಕೆ ಬಡತನವಿದ್ದರೂ ಉಪ್ಪಿಗೆ ಕೊರತೆಯಿರದಂತೆ ನೋಡಿಕೊಳ್ಳಬೇಕು.

ರಾತ್ರಿ ಹೊತ್ತು- ಶುಭ ಸಮಾರಂಭಗಳಲ್ಲಿ ಉಪ್ಪನ್ನು ಸಕ್ಕರೆಯೆಂದು ಕರೆಯಬೇಕು. ಮನೆಯಲ್ಲಿ ಸಕ್ಕರೆಯಿಲ್ಲದಿದ್ದರೆ ಹಾನಿಯಿಲ್ಲ. ಆದರೆ ಉಪ್ಪು ಇಲ್ಲದಿದ್ದರೆ, ಏನು ತಿಂದರೂ ನಾಲಿಗೆಗೆ ರುಚಿ ಹತ್ತದು.

ಕಡಿಮೆ ರಕ್ತದೊತ್ತಡ ಇರುವವರು ಮೂರು ಹೊತ್ತು ಆಹಾರದಲ್ಲಿ ಉಪ್ಪು ಅಧಿಕವಿರುವಂತೆ ನೋಡಿಕೊಂಡು ಸೇವಿಸುವುದು ಒಳಿತು.

ಉಪ್ಪು ನೀರು- ಉಪ್ಪು ಅಧಿಕವಿರುವ ಆಹಾರ ಪದಾರ್ಥಗಳನ್ನು ಸೇವಿಸಿದರೆ ನಿದ್ದೆ ಬರುವುದು.

ಸಣ್ಣ ಕರುಳು ದೊಡ್ಡ ಕರುಳಿನಲ್ಲಿರುವ ಗ್ಯಾಸ್‌ನ್ನು ಉಪ್ಪು ಶಮನಗೊಳಿಸುವುದು. ಉಪ್ಪು ಎಲುಬುಗಳನ್ನು ಬಲಿಷ್ಠಗೊಳಿಸುವುದು.

ಜೀರ್‍ಣಕ್ರಿಯೆಗೆ ಉಪ್ಪು ಬೇಕೇ ಬೇಕು.

ಬುದ್ಧಿಶಕ್ತಿಯನ್ನು ವೃದ್ಧಿಗೊಳಿಸಲು ಉಪ್ಪು ಬೇಕೇಬೇಕು. ಸಕ್ಕರೆ ಖಾಯಿಲೆಯಿರುವವರಿಗೆ ಇನ್ಸುಲಿನ್ ಉತ್ಪತ್ತಿಯಾಗಲು ಉಪ್ಪುಬೇಕೇ ಬೇಕು.

ಕಾಲ್ಸಿಯಂ ಪ್ರೋಟೀನ್ ಕಡಿಮೆ ಇರುವವರೆಲ್ಲ ಉಪ್ಪು ತುಸು ಹೆಚ್ಚು ಸೇವಿಸಬೇಕು.

ಉಪ್ಪು ಉಪ್ಪು… ಉಪ್ಪಿಲ್ಲದೆ ನೆನಪಿನ ಶಕ್ತಿ ಕೂಡಾ ಕಡಿಮೆಯಾಗುವುದು. ಉಪ್ಪೇ ಅಧಿಕ ರಕ್ತದೊತ್ತಡಕ್ಕೆ ಕಾರಣೀಭೂತವಾಗಿ ಕಾಡುವುದೆಂಬುದನ್ನು ನೆನಪಿಸುತ್ತಾ ಉಪ್ಪಿನ ಋಣವನ್ನು ಇಲ್ಲಿಗೆ ತೀರಿಸುತ್ತಿದ್ದೇನೆ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...